ಪ್ರಜ್ವಲ್ ಜರ್ಮನಿಯಲ್ಲಿರಲಿ, ಎಲ್ಲೇ ಇರಲಿ ಕ್ರಮಕ್ಕೆ ಸಿಎಂ ಆದೇಶಿಸಲಿ: ಅಲ್ಕಾ ಲಂಬಾ

Public TV
2 Min Read
Alka Lamba

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣದಲ್ಲಿ ರಾಜ್ಯ ಮಹಿಳಾ ಆಯೋಗ (Karnataka State Commission for Women) ಉತ್ತಮ ಕೆಲಸ ಮಾಡಿದೆ. ರಾಜ್ಯ ಸರ್ಕಾರ ಸಹ ಎಸ್‍ಐಟಿ ರಚಿಸಿದೆ. ಈ ಪ್ರಕರಣದ ತನಿಖೆಯನ್ನು ಆದಷ್ಟು ಬೇಗ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಅಖಿಲ ಭಾರತ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ (Congress) ಅಧ್ಯಕ್ಷೆ ಅಲ್ಕಾ ಲಂಬಾ (Alka Lamba) ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣ ದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿ ಸದಸ್ಯ ದೇವರಾಜ್ ಗೌಡ ಈ ಹಿಂದೆ ಬಿಜೆಪಿ ನಾಯಕರಿಗೆ ಪ್ರಜ್ವಲ್ ಬಗ್ಗೆ ಪತ್ರ ಬರೆದಿದ್ದರು. ಆದರೆ ಅಮಿತ್ ಶಾ, ಮೋದಿ ಹಾಗೂ ನಡ್ಡಾ ಇಲ್ಲಿಗೆ ಬಂದರು ಸಹ ಈ ವಿಚಾರದ ಬಗ್ಗೆ ಮಾತಾಡಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗ, ದೇವೇಗೌಡ ಹಾಗೂ ಸ್ಮೃತಿ ಇರಾನಿ ಇದರ ಬಗ್ಗೆ ಮಾತಾಡಿಲ್ಲ. ಇವರು ಬೇಟಿ ಬಚಾವ್ ಬೇಟಿ ಪಡಾವ್ ಎನ್ನುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ.

Alka Lamba 1

ದೇವರಾಜ್ ಗೌಡ ಆರೋಪ ಮಾಡಿದ್ದರು ಲೋಕಸಭಾ ಚುನಾವಣೆಗೆ ಪ್ರಜ್ವಲ್ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ದೇವರಾಜ್ ಗೌಡ ಅವರು ಸುದ್ದಿಗೋಷ್ಠಿ ಮಾಡಿ ವೀಡಿಯೋ ಬಗ್ಗೆ ಪ್ರಸ್ತಾಪಿಸಿದ್ದರು. 3 ಸಾವಿರ ವೀಡಿಯೋ 1 ಸಾವಿರ ಜನ ಸಂತ್ರಸ್ತರು ಇದ್ದಾರೆ. ತಾಯಿ ವಯಸ್ಸಿನವರು, ಮಹಿಳಾ ಅಧಿಕಾರಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅಧಿಕಾರದ ಮದದಲ್ಲಿ ಹೀಗೆ ಮಾಡಿದ್ದಾರೆ. ಮೋದಿಯವರು (Narendra Modi) ಇಂತವರನ್ನು ಸಮರ್ಥನೆ ಮಾಡಿಕೊಳ್ತಾರಾ ಎಂದು ಅವರು ಪ್ರಶ್ನಿಸಿದ್ದಾರೆ.

ಕೇವಲ ಒಬ್ಬರು ಇವತ್ತು ದೂರು ಕೊಟ್ಟಿದ್ದಾರೆ. ನಾನು ಸಂತ್ರಸ್ತರಿಗೆ ಮನವಿ ಮಾಡುತ್ತೇನೆ, ಹೊರಗೆ ಬಂದು ದೂರು ಕೊಡಬೇಕು. ಅವರಿಗೆ ರಕ್ಷಣೆ ಕೊಡುತ್ತೇವೆ. ಯಾರೇ ದೂರು ಕೊಟ್ಟರು ಅವರಿಗೆ ರಕ್ಷಣೆ ಕೊಡುವ ಕೆಲಸ ಮಾಡ್ತೀವಿ. ಎಸ್‍ಐಟಿ ಅವರು ತನಿಖೆ ನಡೆಸಿ ಕಠಿಣ ಶಿಕ್ಷೆ ಕೊಡಿಸಬೇಕು. ಜರ್ಮನಿ ಇರಲಿ, ಎಲ್ಲೇ ಇರಲಿ ಅವರ ವಿರುದ್ಧ ಕ್ರಮಕ್ಕೆ ಸಿಎಂ ಸೂಚನೆ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದೇ ವೇಳೆ ಮೋದಿ ಪರಿವಾರ್ ಎಂದು ದೇವೇಗೌಡರ ಕುಟುಂಬದ ಜೊತೆ ಮೋದಿ ಫೋಟೋ ಹಾಗೂ ವಿವಿಧ ರಾಜ್ಯಗಳಲ್ಲಿ ಆರೋಪ ಹೊತ್ತ ನಾಯಕರ ಜೊತೆಗಿನ ಮೋದಿ ಫೋಟೋ ಬಿಡುಗಡೆ ಮಾಡಿ ಅವರು ಆಕ್ರೋಶ ಹೊರ ಹಾಕಿದ್ದಾರೆ.

Share This Article