Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bollywood

ರಣಬೀರ್ ಕಪೂರ್ ನರಕಕ್ಕೆ ಹೋಗಲಿ : ಸಿಟ್ಟಾದ ಉರ್ಫಿ ಜಾವೇದ್

Public TV
Last updated: April 10, 2023 5:55 pm
Public TV
Share
2 Min Read
ranbir kapoor and urfi
SHARE

ಸಿಕ್ಕಿದ್ದೆಲ್ಲವನ್ನೂ ಬಟ್ಟೆ ಮಾಡಿಕೊಂಡು ಧರಿಸುವ ಬಿಗ್ ಬಾಸ್ ಹಿಂದಿ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ (Urfi Javed, ), ಬಾಲಿವುಡ್ ನ ಖ್ಯಾತ ನಟ ರಣಬೀರ್ ಕಪೂರ್ (Ranbir Kapoor) ಮೇಲೆ ಗರಂ ಆಗಿದ್ದಾರೆ. ತನ್ನ ಮೇಲೆ ಕಾಮೆಂಟ್ ಮಾಡಿದ್ದಕ್ಕಾಗಿ ರಣಬೀರ್ ನರಕಕ್ಕೆ ಹೋಗಲಿ ಎಂದು ಶಾಪ ಹಾಕಿದ್ದಾರೆ. ಸಿಟ್ಟುಮಾಡಿಕೊಂಡು ಆಡಿರುವ ಮಾತುಗಳು ವೈರಲ್ ಆಗಿವೆ.

Urfi Javed 4

ಸಂದರ್ಶನವೊಂದರಲ್ಲಿ ಉರ್ಫಿ ಜಾವೇದ್ ಕಾಸ್ಟ್ಯೂಮ್ ಬಗ್ಗೆ ಮಾತನಾಡಿದ್ದ ರಣಬೀರ್ ಕಪೂರ್, ‘ಆಕೆಯದ್ದು ಅತೀ ಕೆಟ್ಟ ಟೇಸ್ಟು. ಬಟ್ಟೆ ಧರಿಸುವ ಕ್ರಮ ಸರಿಯಾಗಿಲ್ಲ’ ಎಂದು ಮಾತನಾಡಿದ್ದರು. ಈ ಮಾತು ಉರ್ಫಿಗೆ ಹಿಡಿಸಿದಂತೆ ಕಾಣುತ್ತಿಲ್ಲ. ಹಾಗಾಗಿಯೇ ರಣಬೀರ್ ಮೇಲೆ ಮುಗಿ ಬಿದ್ದಿದ್ದಾರೆ. ನನ್ನ ಬಗ್ಗೆ ಕೆಟ್ಟ ಮಾತುಗಳನ್ನು ಆಡುವ ಅವರು ನರಕಕ್ಕೆ ಹೋಗಲಿ ಎಂದು ಹಿಡಿ ಶಾಪ ಹಾಕಿದ್ದಾರೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ದಿವ್ಯಾ ಸುರೇಶ್

Urfi Javed 3

ಈ ಉರ್ಫಿ ಉರಿದುಕೊಳ್ಳುತ್ತಿರುವುದು ಮೊದಲೇನೂ ಅಲ್ಲ. ಈ ಹಿಂದೆ ಖಾನ್ ಗಳ (Khan) ವಿಚಾರದಲ್ಲಿ ಕಂಗನಾ ಟ್ವೀಟ್ ವೊಂದನ್ನು ಮಾಡಿದ್ದರು. ಅದರಲ್ಲಿ ಈ ದೇಶವು ಎಲ್ಲ ಖಾನ್ ಗಳನ್ನು ಮಾತ್ರ ಪ್ರೀತಿಸುತ್ತದೆ ಎಂದು ಬರೆದುಕೊಂಡಿದ್ದರು. ಅಲ್ಲದೇ, ಮುಸ್ಲಿಂ ನಟಿಯರ ಮೇಲೆ ಗೀಳನ್ನು ಅದು ಹೊಂದಿದೆ ಎಂದೂ ಬರೆದುಕೊಂಡಿದ್ದರು. ಈ ಬರಹ ಉರ್ಫಿಗೆ ಇಷ್ಟವಾಗಿರಲಿಲ್ಲವಂತೆ. ಹಾಗಾಗಿ ಕಂಗನಾಗೆ ತಿರುಗೇಟು ನೀಡಿದ್ದ ಉರ್ಫಿ, ‘ಮುಸ್ಲಿಂ ನಟ, ಹಿಂದು ನಟ ಅಂತ ವಿಂಗಡಣೆ ಏಕೆ? ಕಲೆಯಲ್ಲಿ ಧರ್ಮವಿಲ್ಲ. ಕಲಾವಿದರ ಮಾತ್ರ ಇರುತ್ತಾರೆ’ ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು.

Urfi Javed

ಉರ್ಫಿಯ ಈ ಮಾತು ಕಂಗನಾ ಕಣ್ಣುಗಳನ್ನು ಕೆಂಪಾಗಿಸಿದ್ದವು. ಹಾಗಾಗಿಯೇ ಅವರು ಏಕರೂಪ ನಾಗರಿಕ ಸಂಹಿತೆಯ ಪಾಠ ಮಾಡಿದ್ದರು. ಬಟ್ಟೆಯ ವಿಚಾರವನ್ನೂ ಅವರು ಹೇಳಿದ್ದರು. ಏಕರೂಪದ ಬಗ್ಗೆ ಕೆಟ್ಟ ಐಡ್ಯಾ, ನಾನು ಬಟ್ಟೆಯಿಂದಲೇ ಜನಪ್ರಿಯಳಾದವಳು ಎಂದು ಉರ್ಫಿ ಉತ್ತರಿಸಿದ್ದರು. ಈ ಮಾತೇ ಕಂಗನಾ ಅವರಿಗೆ ಅಕ್ಕಮಹಾದೇವಿಯನ್ನು ನೆನಪಿಸುವುದಕ್ಕೆ ಕಾರಣವಾಗಿದೆ.

urfi javed

ಅಕ್ಕಮಹಾದೇವಿಯ ಉದಾಹರಣೆಯನ್ನು ಕೊಡುತ್ತಾ, ‘ಅಕ್ಕ ಮಹಾದೇವಿ ಭಾರತದಲ್ಲಿ ರಾಣಿ ಆಗಿದ್ದವರು. ಅವರಿಗೆ ಭಗವಂತನ ಮೇಲೆ ಅತೀವ ಪ್ರೀತಿ. ನೀನು ಭಗವಂತನನ್ನೇ ಪ್ರೀತಿಸುವುದಾದರೆ, ನನ್ನಿಂದ ಯಾವುದನ್ನೂ ನೀನು ತಗೆದುಕೊಂಡು ಹೋಗಬಾರದು ಎಂದು ಗಂಡ ತಾಕೀತು ಮಾಡುತ್ತಾನೆ. ಆಕೆ ವಿವಸ್ತ್ರಳಾಗಿ ಅಲ್ಲಿಂದ ಹೊರಡುತ್ತಾಳೆ. ಯಾವತ್ತೂ ಆಕೆ ಬಟ್ಟೆ ತೊಡಲಿಲ್ಲ. ಮಹಾದೇವಿ ತುಂಬಾ ಶ್ರೇಷ್ಠಳು. ನೀನೂ ಕೂಡ ದೇಹದ ಬಗ್ಗೆ ನಿಂದಿಸಲು ಯಾರಿಗೂ ಬಿಡಬೇಡ. ನೀನು ದೈವಾಶಂವನ್ನು ಹೊಂದಿದವಳು’ ಎಂದು ಉರ್ಫಿಯನ್ನು ಹೋಲಿಸಿ ಟ್ವಿಟ್ ಮಾಡಿದ್ದಾಳೆ. ಉರ್ಫಿ ಜಾವೇದ್ ಗೂ ಮತ್ತು ಅಕ್ಕಮಹಾದೇವಿಗೂ ಹೋಲಿಕೆ ಎಷ್ಟರ ಮಟ್ಟಿಗೆ ಸರಿ ಎನ್ನುವ ಚರ್ಚೆ ಕೂಡ ಈಗ ನಡೆದಿದೆ.

TAGGED:ControversyRanbir Kapoorurfi javedಉರ್ಫಿ ಜಾವೇದ್ರಣಬೀರ್ ಕಪೂರ್ವಿವಾದ
Share This Article
Facebook Whatsapp Whatsapp Telegram

You Might Also Like

Iran Israel
Latest

ಇರಾನ್‌ ಮೇಲೆ ಯಾವುದೇ ಕ್ಷಣದಲ್ಲೂ ದಾಳಿ – ದೊಡ್ಡ ಎಚ್ಚರಿಕೆ ಕೊಟ್ಟ ಇಸ್ರೇಲ್‌

Public TV
By Public TV
4 minutes ago
allu arjun received gaddar film award as best actor for pushpa 2 movie 2
Cinema

ಸಿಎಂ ರೇವಂತ್ ರೆಡ್ಡಿ ಕೈಯಿಂದ ಉತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ಅಲ್ಲು ಅರ್ಜುನ್‌

Public TV
By Public TV
7 minutes ago
Honeymoon Murder
Crime

ಪತಿ ಕೊಲೆ ಬಳಿಕ ಇಂದೋರ್‌ನ ಫ್ಲ್ಯಾಟ್‌ನಲ್ಲಿ ವಾಸವಿದ್ದ ಹನಿಮೂನ್ ಹಂತಕಿ

Public TV
By Public TV
28 minutes ago
11A Seat
Latest

ಮೃತ್ಯುಂಜಯ `ವಿಶ್ವಾಸ್ ಎಫೆಕ್ಟ್’ – 11A ಲಕ್ಕಿ ಸೀಟಿಗೆ ಫುಲ್ ಡಿಮ್ಯಾಂಡ್!

Public TV
By Public TV
30 minutes ago
Fire Accident Dubai UAE
Latest

ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ – 4,000 ಜನರ ಸ್ಥಳಾಂತರ

Public TV
By Public TV
43 minutes ago
US Senator
Latest

ಅಮೆರಿಕದ ರಾಜಕಾರಣಿಗಳ ಮನೆಯೊಳಗೇ ಗುಂಡಿನ ದಾಳಿ – ಶಾಸಕಿ ಮೆಲಿಸ್ಸಾ, ಪತಿ ಹತ್ಯೆ; ಓರ್ವ ಸಂಸದನಿಗೆ ಗಾಯ

Public TV
By Public TV
44 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?