ಬೆಂಗಳೂರು: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಯತ್ನಾಳ್, ಸಿಟಿ ರವಿ, ಅಶೋಕ್ ರೀತಿ ಮಾತನಾಡುವುದು ಬಿಟ್ಟು ದೇಶದ ಸಮಸ್ಯೆಯ ಬಗ್ಗೆ ಮಾತಾಡಲಿ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಕಿಡಿಕಾರಿದ್ದಾರೆ.
ಹಿಂದೂ (Hindu) ರಾಷ್ಟ್ರದ ಬಗ್ಗೆ ಮೋಹನ್ ಭಾಗವತ್ ಹೇಳಿಕೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್, ಆರ್.ಅಶೋಕ್, ಸಿ.ಟಿ ರವಿ ಇವರಿಗಂತೂ ಬುದ್ದಿ ಇಲ್ಲ. ನೀವು ಆದರೂ ಅಭಿವೃದ್ಧಿ ಬಗ್ಗೆ ಮಾತನಾಡುತ್ತೀರಿ ಎಂದುಕೊಂಡಿದ್ದೆ. ಆದರೆ ನೀವು ಸಹ ಹಿಂದೂ ರಾಷ್ಟ್ರದ ಬಗ್ಗೆ ಮಾತಾಡಿದ್ದೀರಿ. ಭಾರತ ಹಸಿವಿನ ಗ್ರಾಫ್ನಲ್ಲಿ ಎಷ್ಟನೇ ಸ್ಥಾನದಲ್ಲಿ ಇದೆ ಅಂತ ಮೊದಲು ನೋಡಿ. ಭಾರತ ಹಸಿವಿನಿಂದ ನರುಳುತ್ತಿದೆ ಇದರ ಬಗ್ಗೆ ಮಾತನಾಡಿ. ನಿರುದ್ಯೋಗ ಜಾಸ್ತಿ ಆಗುತ್ತಿದೆ, ಆಂತರಿಕ ಭದ್ರತೆ, ನಾವು ಪಾಕಿಸ್ತಾನವನ್ನು ಹೇಗೆ ಸದೆಬಡಿಬೇಕು ಎನ್ನುವುದರ ಬಗ್ಗೆ ಮಾತನಾಡಿ. ಬಡತನ ಬಗ್ಗೆ ಹಸಿವಿನ ಬಗ್ಗೆ ಮಾತಾಡಿ ಅಂದರೆ ನೀವೂ ಯತ್ನಾಳ್, ಸಿಟಿ ರವಿ ಕ್ಯಾಟಗಿರಿಗೆ ಸೇರಿಕೊಂಡಿದ್ದೀರಿ ಅಂತ ಕಿಡಿಕಾರಿದರು.
ಮೋಹನ್ ಭಾಗವತ್ ಅಂದರೆ ಪೂಜ್ಯನಿಯ ಭಾವನೆ ಇತ್ತು. ಬೆಂಗಳೂರಿಗೆ ಬಂದು ಹಿಂದೂರಾಷ್ಟ್ರ ಬಗ್ಗೆ ಮಾತಾಡ್ತೀರಾ. ನೀವು ಅಬ್ದುಲ್ ಕಲಾಂ ಟ್ರೂ ನ್ಯಾಷನಲ್ ಲೀಡರ್ ಅಂತ ಕರೆದಿದ್ದೀರಿ. ಆದರೆ ಅವರು ಮುಸ್ಲಿಂ ಧರ್ಮದಲ್ಲಿ ಹುಟ್ಟಿದ್ದು. ದೇಶ ಭಕ್ತರು ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಧರ್ಮದಲ್ಲೂ ಇದ್ದಾರೆ. ಬಿಜೆಪಿ ನಾಯಕರು ಓಡಾಡುವ ವಿಮಾನ ಪಾರ್ಸಿ ವ್ಯಕ್ತಿ ನೋಡಿಕೊಳ್ತಿದ್ದಾರೆ. ಏರ್ ಇಂಡಿಯಾ ಟಾಟಾ ಅವರ ಕಂಟ್ರೋಲ್ ನಲ್ಲಿ ಇದೆ. ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ದೇಶದ್ರೋಹಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ – ಸಿಎಂ ನಿವಾಸಕ್ಕೆ ಬಿಜೆಪಿಯಿಂದ ಮುತ್ತಿಗೆ ಯತ್ನ
ಸಮರ್ಥನೆ ಮಾಡಲ್ಲ:
ಪರಪ್ಪನ ಅಗ್ರಹಾರದ ಉಗ್ರರಿಗೆ ರಾಜಾತಿಥ್ಯ ಕೊಟ್ಟಿರುವ ಪ್ರಕರಣ ಸಮರ್ಥನೆ ಮಾಡಿಕೊಳ್ಳೊಲ್ಲ. ಗೃಹ ಸಚಿವರು ಇದರ ಬಗ್ಗೆ ಕ್ರಮ ತೆಗೆದುಕೊಳ್ತಾರೆ ಬಿಜೆಪಿಯರು ಇದ್ದಾಗ ತಿಹಾರ ಜೈಲಿನಲ್ಲೂ ನಡೆದಿತ್ತು. ತಪ್ಪು ಆಗದಂತೆ ತಿದ್ದುಕೊಳ್ಳುತ್ತೇವೆ. ದರ್ಶನ್ ಕೇಸ್ ವಿಚಾರದಲ್ಲಿ ಸುಪ್ರೀಂ ಚಾಟಿ ಬೀಸಿತ್ತು .ಆಗ ಎಚ್ಚೆತ್ತುಕೊಂಡಿದ್ವಿ ಕೋರ್ಟ್ ಗಮನಿಸಿತ್ತು ಎಂದರು.

