ಚಿತ್ರದುರ್ಗ: ಚಳ್ಳಕೆರೆಯ (Challakere) ಡಿಆರ್ಡಿಓ (DRDO) ಬಳಿ ಚಿರತೆ (Leopard) ಓಡಾಡ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿನ್ನಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕುದಾಪುರ ಬಳಿಯ ಡಿಆರ್ಡಿಓ ಸಂಸ್ಥೆ ಆವರಣದ ಸಮೀಪದಲ್ಲೇ ಚಿರತೆ ಓಡಾಡಿದೆ. ಇಲ್ಲಿ ಸಂಸ್ಥೆ ಆಗುವ ಮುನ್ನ ಈ ಪ್ರದೇಶ ಮೀಸಲು ಅರಣ್ಯವಾಗಿತ್ತು. ಡಿಆರ್ಡಿಓ ಘೋಷಣೆಯಾದ ಮೇಲೆ ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಈ ಪ್ರದೇಶದಲ್ಲಿ ಚಿರತೆ, ಕರಡಿ ಹಾಗೂ ಜಿಂಕೆಗಳು ಸೇರಿದಂತೆ ಅಪಾರವಾದ ವನ್ಯಜೀವಿಗಳಿವೆ. ಸುತ್ತಲು ತಡೆಗೋಡೆ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಆಹಾರ ಹುಡುಕುತ್ತಾ ಜನವಸತಿ ಸ್ಥಳಗಳತ್ತ ಪ್ರಾಣಿಗಳು ಆಗಮಿಸುತ್ತಿವೆ. ಇದನ್ನೂ ಓದಿ: ಹನುಮ ಜಯಂತಿ ವೇಳೆ ಗಲಾಟೆ – ಬಾಟಲಿಯಿಂದ ಇರಿದು ಯುವಬ್ರಿಗೇಡ್ ಕಾರ್ಯಕರ್ತನ ಹತ್ಯೆ
ಇದೇ ಜಾಗದ ಬಳಿ ಕಳೆದ ಮೂರು ವರ್ಷಗಳ ಹಿಂದೆಯೂ ಜನರ ಮೇಲೆ ಚಿರತೆ ದಾಳಿ ಮಾಡಿತ್ತು. ಆಗ ಚಿಕ್ಕನಮ್ಮಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆ ಗಮನಕ್ಕೆ ತಂದು ಬೋನ್ ಇರಿಸಿದ್ದರು. ಆಗ ಸೆರೆಸಿಕ್ಕ ಚಿರತೆಯನ್ನು ಸಂರಕ್ಷಿಸದೇ ಸಾರ್ವಜನಿಕರು ಚಿರತೆಯನ್ನು ಹೊಡೆದು ಕೊಂದಿದ್ದರು. ಇದನ್ನೂ ಓದಿ: ಬೆಲೆ ಏರಿಕೆ ನಡುವೆ 2 ಟನ್ ಟೊಮೆಟೊವಿದ್ದ ವಾಹನವನ್ನೇ ಕದ್ದ ಕಳ್ಳರು
Web Stories