ಮನೆಯ ಕಾಂಪೌಡ್‍ನಲ್ಲಿ ಕಟ್ಟಿ ಹಾಕಿದ್ದ ನಾಯಿ ಹೊತ್ತೊಯ್ದ ಚಿರತೆ

Public TV
1 Min Read
Leopard

ಹಾಸನ: ಮನೆಯ ಕಾಂಪೌಡ್‍ನಲ್ಲಿ ಚೈನ್‍ನಿಂದ ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ.

Leopard 1

ಶ್ರೀಕಂಠನಗರ ಬಡಾವಣೆಯ ಪುಟ್ಟಸ್ವಾಮಿ ಅವರಿಗೆ ಸೇರಿದ ನಾಯಿಯನ್ನು ಕಾಂಪೌಡ್‍ನಲ್ಲಿ ಕಟ್ಟಿದ್ದರು. ತಡರಾತ್ರಿ ಒಂದು ಗಂಟೆ ಸುಮಾರಿಗೆ ಬಂದಿರುವ ಚಿರತೆ ಕೆಲಕಾಲ ಹೊಂಚುಹಾಕಿ ನಂತರ ನಾಯಿಯನ್ನು ಹೊತ್ತೊಯ್ಯಲು ಪ್ರಯತ್ನಪಟ್ಟಿದೆ. ಬಾಕ್ಸ್‍ಗೆ ಚೈನ್‍ನಿಂದ ನಾಯಿ ಕಟ್ಟಿಹಾಕಿದ್ದರಿಂದ ನಾಯಿಯನ್ನು ಎಳೆದೊಯ್ಯಲು ಹರಸಾಹಸಪಟ್ಟಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯ ಪರಿಚಯವನ್ನು ಸ್ವತಃ ಸುದೀಪ್ ಅವರಿಂದಲೇ ಕೇಳಿ..

cheetah

ಕೊನೆಗೂ ಚಿರತೆ ನಾಯಿಯನ್ನು ಸಾಯಿಸಿ ಕಚ್ಚಿಕೊಂಡು ಬೈಕ್ ಮೇಲೆ ಹತ್ತಿ ಹೋಗಿದೆ. ಈ ವೇಳೆ ಬೈಕ್ ಕೆಳಕ್ಕೆ ಬಿದ್ದಿದೆ. ಚಿರತೆ ನಾಯಿಯನ್ನು ಹೊತ್ತೊಯ್ಯುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಪಲ್ಲವಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇದನ್ನೂ ಓದಿ: ನಡೆಯುತ್ತಿದ್ದಂತೆ ಕುಸಿದ ಫುಟ್‍ಪಾತ್ – ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರು

ಬೆಟ್ಟದ ಚಿರತೆಗಳು ಹೆಚ್ಚು ವಾಸಿಸುತ್ತಿದ್ದು ರಾತ್ರಿ ವೇಳೆ ಶ್ರವಣಬೆಳಗೊಳ ಪಟ್ಟಣಕ್ಕೆ ಬಂದು ನಾಯಿಗಳನ್ನು ಹೊತ್ತೊಯ್ದು ತಿಂದು ಹಾಕುತ್ತಿವೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಶ್ರವಣಬೆಳಗೊಳಕ್ಕೆ ಭೇಟಿ ನೀಡುತ್ತಾರೆ. ಆದ್ದರಿಂದ ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *