ಬಾಡಿಗೆ ಕೇಳಿದ್ದಕ್ಕೆ ವೃದ್ಧ ತಂದೆ, ಮಗಳ ಮೇಲೆ ವಕೀಲ ಹಲ್ಲೆ!

Public TV
1 Min Read
LAWYER

ಬಾಗಲಕೋಟೆ: ಬಾಡಿಗೆ ಕೇಳಿದ್ದಕ್ಕೆ ಸಿಟ್ಟುಗೊಂಡ ವಕೀಲನೊಬ್ಬ ಜಿಲ್ಲೆಯ ರಬಕವಿಬನಹಟ್ಟಿ ವೃದ್ಧ ತಂದೆ ಹಾಗೂ ಆತನ ಮಗಳ ಮೇಲೆ ಹಲ್ಲೆಗೈದ ಆರೋಪ ಕೇಳಿ ಬಂದಿದೆ.

ವಕೀಲ ಹರ್ಷವರ್ಧನ ಪಟವರ್ಧನ ಗಂಗವ್ವ ಜಾಡರ ಹಾಗೂ ಆಕೆಯ ವೃದ್ಧ ತಂದೆ ಸದಾಶಿವ ಜಾಡರ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಹಲ್ಲೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹಲ್ಲೆಗೈದ ವಕೀಲ ಗಂಗವ್ವಗೆ ಸೇರಿದ ಕಟ್ಟಡದಲ್ಲಿ ಬಾಡಿಗೆ ಕಚೇರಿ ಹೊಂದಿದ್ದನು. ಆದ್ರೆ ವಕೀಲ ಹಣ ಕೊಡುತ್ತಿರಿಲ್ಲ. ಈ ವಿಚಾರಕ್ಕಾಗಿ ಗಂಗವ್ವ ಹಾಗೂ ವಕೀಲನ ಮಧ್ಯೆ ಆಗಾಗ ನಡೆಯುತ್ತಿತ್ತು. ಮಾರ್ಚ್ 15 ರಂದು ನಡೆದ ಜಗಳ ವಿಕೋಪಕ್ಕೆ ತಿರುಗಿತ್ತು.

BGK

ಮಾಲಕಿ ಹಾಗೂ ಆಕೆಯ ವೃದ್ಧ ತಂದೆ ಬಾಡಿಗೆ ಕೇಳಲು ಹರ್ಷವರ್ಧನನ ಕಚೇರಿಗೆ ತೆರಳಿದ್ದರು. ಇದರಿಂದ ಸಿಟ್ಟುಗೊಂಡ ವಕೀಲ ಸದಾಶಿವರ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಗಂಗವ್ವ, ಬಾಡಿಗೆ ಕೇಳಿದ್ರೆ ಯಾಕೆ ಹೊಡೆಯುತ್ತಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ವಕೀಲನ ಕಚೇರಿಯೊಳಗೆ ನುಗ್ಗಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ವಕೀಲ ಸದಾಶಿವ ಅವರನ್ನು ಕತ್ತು ಹಿಸುಕಿ ತನ್ನ ಟೇಬಲ್ ನತ್ತ ದೂಡಿ ಹಲ್ಲೆ ಮಾಡಿದ್ದಾನೆ. ಅಲ್ಲದೆ ವಕೀಲನ ಸಹಚರರು ಕೂಡ ಮಹಿಳೆ ಗಂಗವ್ವನ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.

ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ವಕೀಲ ಹರ್ಷವರ್ಧನ ಪಟವರ್ಧನ ಹಾಗೂ ಆತನ ಸಹಚರನ ವಿರುದ್ಧ ದೂರು ದಾಖಲಾಗಿದೆ. ಆದ್ರೆ ಇದುವರೆಗೂ ವಕೀಲ ಹಾಗೂ ಸಹಚರನನ್ನು ಬನಹಟ್ಟಿ ಪೊಲೀಸರು ಬಂಧಿಸಿಲ್ಲ. ಹೀಗಾಗಿ ಆರೋಪಿಗಳನ್ನು ಬಂಧಿಸಿ ನ್ಯಾಯ ಕೊಡಿಸಲು ಗಂಗವ್ವ ಹಾಗೂ ತಂದೆ ಒತ್ತಾಯಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *