ಬೆಂಗಳೂರು: ಕಳೆದ ಬಾರಿ ಜೆಡಿಎಸ್ (JDS) ವಿಚಾರದಲ್ಲಿ ಸಿದ್ದರಾಮಯ್ಯ (Siddaramaiah) ಮಾಡಿದ ತಪ್ಪನ್ನೇ ಈ ಬಾರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ (DK Shivakumar) ಇಬ್ಬರೂ ಸೇರಿ ಮಾಡುತ್ತಾರಾ ಎನ್ನುವಂತಹ ಚರ್ಚೆ ಸ್ವತಃ ಕಾಂಗ್ರೆಸ್ನಲ್ಲೇ (Congress) ಶುರುವಾಗಿದೆ ಎನ್ನಲಾಗಿದೆ.
ಕರೆದು ಕರೆದು ಕೆಣಕುತ್ತಿರುವ ಕುಮಾರಸ್ವಾಮಿ (HD Kumaraswamy) ಮಾತಿಗೆ ಇತ್ತೀಚೆಗೆ ಪದೇ ಪದೇ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಸಿದ್ದರಾಮಯ್ಯ. ಹೆಚ್ಡಿಕೆ, ಸಿದ್ದು ಫೈಟ್ ನಡುವೆ ದೇವೇಗೌಡರ ಬಗ್ಗೆಯೂ ಮಾತನಾಡಿ ಉರಿಯುವ ಬೆಂಕಿಗೆ ಡಿಕೆಶಿ ತುಪ್ಪ ಸುರಿದರು ಎನ್ನಲಾಗುತ್ತಿದೆ.
ಸಿದ್ದರಾಮಯ್ಯ, ಡಿಕೆಶಿ ಆಡಿದ ಮಾತೇ ಈಗ ಕುಮಾರಸ್ವಾಮಿ ಪಾಲಿಗೆ ಅಸ್ತ್ರವಾಗಿದೆ. ಕಳೆದ ಬಾರಿಯ ತಪ್ಪನ್ನೇ ಈ ಬಾರಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ಸೇರಿ ಮಾಡುವ ಆತಂಕ ಕೈ ಪಾಳಯದ್ದು ಎನ್ನಲಾಗಿದೆ. ಕಳೆದ ಬಾರಿ ಮತ್ತೊಮ್ಮೆ ಸಿಎಂ ಆಗುವ ಜೋಶ್ನಲ್ಲಿದ್ದ ಸಿದ್ದರಾಮಯ್ಯ ಅವರು ದೇವೇಗೌಡರ ವಿರುದ್ಧ ಮಾತನಾಡಿ ಕೈ ಸುಟ್ಟುಕೊಂಡಿದ್ದರು. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಆಕ್ರೋಶ ಎದುರಿಸುವಂತಾಗಿ ಕಾಂಗ್ರೆಸ್ಗೆ ಹಿನ್ನಡೆ ಆಗುವಂತಾಗಿತ್ತು. ಆ ನಂತರ ಎಚ್ಚೆತ್ತ ಸಿದ್ದರಾಮಯ್ಯ ಕುಮಾರಸ್ವಾಮಿ ಎಷ್ಟೇ ಬಾರಿ ಕೆಣಕಿದರೂ ಹಾರಿಕೆಯ ಉತ್ತರವನ್ನೇ ಕೊಟ್ಟು ಅಂತರ ಕಾಯ್ದುಕೊಂಡಿದ್ದರು. ಆದರೆ ಇತ್ತೀಚೆಗೆ ಪುನಃ ಜೆಡಿಎಸ್ ವಿರುದ್ಧ ಅಗ್ರೆಸ್ಸಿವ್ ಅಟ್ಯಾಕ್ ಆರಂಭಿಸಿದಂತೆ ಕಾಣುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ 150 ಸ್ಥಾನ ಗೆದ್ದು BJP ಅಧಿಕಾರಕ್ಕೆ ಬರೋದು ಖಚಿತ – ಅರುಣ್ ಸಿಂಗ್ ವಿಶ್ವಾಸ
ಸಮ್ಮಿಶ್ರ ಸರ್ಕಾರದ ಅವಧಿಯಿಂದ ಕುಮಾರಸ್ವಾಮಿ ವಿಚಾರದಲ್ಲಿ ಸೇಫ್ ಗೇಮ್ ಆಡುತ್ತಿದ್ದ ಡಿಕೆಶಿ ಏಕಾಏಕಿ ದೇವೇಗೌಡರ ವಿರುದ್ಧ ಮಾತನಾಡಿ ಕೆಣಕಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ದೇವೇಗೌಡರು ಹಾಗೂ ಜೆಡಿಎಸ್ ಬಗ್ಗೆ ಅಗ್ರೆಸ್ಸಿವ್ ಆದಷ್ಟು ಕಳೆದ ಬಾರಿಯಂತೆ ಬೂಮ್ ರಾಂಗ್ ಆಗುವ ಸಾಧ್ಯತೆ ಇದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕುಮಾರಸ್ವಾಮಿ ಈಗ ಕೈ ಪಾಳಯದ ವಿರುದ್ಧ ತಿರುಗಿ ಬೀಳುವ ಸಾಧ್ಯತೆಯೇ ಹೆಚ್ಚಿದೆ. ಅದರ ಲಾಭ ಜೆಡಿಎಸ್ಗೆ ಸಿಕ್ಕರೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರೂ ಸೇರಿ ಜೆಡಿಎಸ್ಗೆ ಲಾಭ ತಂದುಕೊಟ್ಟಂತೆ ಆಗುವುದು ಗ್ಯಾರಂಟಿ. ಹೀಗಾಗಿ ಜೆಡಿಎಸ್ ವಿಚಾರದಲ್ಲಿ ಇಬ್ಬರೂ ಎಚ್ಚರಿಕೆಯ ಮಾತನಾಡಬೇಕು ಎಂಬ ಮಾತು ಕೈ ಪಾಳಯದಿಂದಲೇ ಕೇಳಿ ಬರುತ್ತಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಇರೋದು ಬಿಜೆಪಿ ಬಣ ಮಾತ್ರ: ಅರುಣ್ ಸಿಂಗ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k