ರಾಜ್ಯ ಸರ್ಕಾರ ತನ್ನ ಕೊನೆಯ ದಿನದ ಕ್ಷಣಗಳನ್ನು ಎಣಿಸುತ್ತಿದೆ: ಕರಂದ್ಲಾಜೆ

Public TV
1 Min Read
Shobha Karandlaje

– ಶಾಸಕರು ಬಯಸಿದರೆ ಹೈಕಮಾಂಡ್ ಪರಗಣಿಸಲಿದೆ

ನವದೆಹಲಿ: ರಾಜ್ಯದ ಸಮ್ಮಿಶ್ರ ಸರ್ಕಾರ ತನ್ನ ಕೊನೆಯ ದಿನ, ಕ್ಷಣಗಳನ್ನು ಎಣಿಸುತ್ತಿದೆ. ನಾಳೆ ಸಿಎಂ ಬಹುಮತ ಸಾಬೀತು ಮಾಡುತ್ತೇವೆ ಎಂದು ಬಹುಮತ ಇಲ್ಲದೇ ನಾಟಕ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನಾಳೆಯ ಸದನಕ್ಕೆ 15 ಮಂದಿ ಶಾಸಕರು ಗೈರಾಗುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದಾದ ಬಳಿಕವೂ ಬಹುಮತ ಸಾಬೀತು ಮಾಡುವ ಪ್ರಹಸನವನ್ನು ಸಿಎಂ ಅವರು ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ನಿಂದ ಶಾಸಕರಿಗೆ ಜಯ ಸಿಕ್ಕಿದ್ದು, ಈ ತೀರ್ಪು ದೇಶಕ್ಕೆ ಅನ್ವಯವಾಗಲಿದೆ ಎಂದು ವಿಶ್ಲೇಷಿಸಿದರು.

CM HDK D

ಸದನಕ್ಕೆ ಹೋಗವುದು ಶಾಸಕರ ಅಭಿಪ್ರಾಯಕ್ಕೆ ಬಿಡಲಾಗಿದ್ದು, ರಾಜೀನಾಮೆ ನೀಡಲು ಅವರಿಗೆ ಸ್ವಾತಂತ್ರ್ಯ ಇದೆ. ಇದು ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ ಅನ್ವಯವಾಗಲಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ರಾಜ್ಯದಲ್ಲಿ ಸ್ಪೀಕರ್ ಸಂವಿಧಾನ ವಿರೋಧಿ ಕೆಲಸ ಮಾಡಿದರು. ಈ ಹಿನ್ನೆಲೆ ಸುಪ್ರೀಂಕೋರ್ಟ್ ಹೊಸ ತೀರ್ಪು ನೀಡುವಂತಾಯಿತು. ಶಾಸಕರು ಸ್ವತಂತ್ರರಾಗಿದ್ದು, ರಾಜೀನಾಮೆ ಬಳಿಕ ಬಿಜೆಪಿ ಸೇರಲು ಬಯಸಿದರೆ ಬಿಜೆಪಿ ಹೈಕಮಾಂಡ್ ಅವರನ್ನು ಪರಗಣಿಸಲಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *