ಮೈಸೂರು: ರಾಜಮಾತೆ ಪ್ರಮೋದಾದೇವಿ ಒಡೆಯರ್ ತಾಯಿ ಮತ್ತು ನಾದಿನಿ ನಿಧನದಿಂದ ರದ್ದಾಗಿದ್ದ ವಜ್ರಮುಷ್ಠಿ ಕಾಳಗ, ವಿಜಯಯಾತ್ರೆ ಮೆರವಣಿಗೆ ಇಂದು ನಡೆಯಲಿದೆ.
ಬೆಳಗ್ಗೆ 8.45ಕ್ಕೆ ಅರಮನೆಗೆ ಪಟ್ಟದ ಆನೆ, ಕುದುರೆ, ಹಸುಗಳಿಗೆ ಪೂಜೆ ಸಲ್ಲಿಕೆಯಾಗಲಿದ್ದು, 9.10 ರಿಂದ 10.15ರ ಒಳಗೆ ವಜ್ರಮುಷ್ಠಿ ಕಾಳಗ ನಡೆಯಲಿದೆ. ಕಾಳಗ ಮುಗಿದ ನಂತ್ರ ಬೆಳ್ಳಿ ರಥದಲ್ಲಿ ಮಹಾರಾಜ ಯದುವೀರ್ ವಿಜಯಯಾತ್ರೆ ನಡೆಸಲಿದ್ದಾರೆ.
- Advertisement 2
- Advertisement 3
ವಿಜಯಯಾತ್ರೆಯ ನಂತರ ಯದುವೀರ್ ಅರಮನೆಯೊಳಗಿನ ಭುವನೇಶ್ವರಿ ದೇವಾಲಯದಲ್ಲಿ ಬನ್ನಿ ಪೂಜೆ ಮಾಡಲಿದ್ದು, ನಂತ್ರ ಮೆರವಣಿಗೆ ಅರಮನೆಯತ್ತ ಸಾಗಲಿದೆ. ಅಲ್ಲಿಗೆ ಈ ವರ್ಷದ ದಸರಾ ಖಾಸಗಿ ದರ್ಬಾರ್ ಮುಕ್ತಾಯವಾಗಲಿದೆ. ಈ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ವಿಜಯದಶಮಿ ದಿನವೇ ಅವರ ಪುತ್ರ ನಿಧನರಾಗಿ ಕಾರ್ಯಕ್ರಮ ರದ್ದಾಗಿ, ನಂತರದಲ್ಲಿ ಆಚರಿಸಲಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಯದುವಂಶದಲ್ಲಿ ಇಂತಹ ದಿನ ಮರುಕಳಿಸಿದೆ. ಇದನ್ನೂ ಓದಿ: ಭಾವುಕರಾದ ಯದುವೀರ್ ಒಡೆಯರ್
- Advertisement 4
ದಸರಾ ದಿನ ಸಮಸ್ತ ನಾಡಿನ ಜನತೆಯೂ ಜಂಬೂಸವಾರಿಗೆ ಕಾತುರದಿಂದ ಕಾಯುತ್ತಿದ ವೇಳೆ ಪ್ರಮೋದಾ ದೇವಿ ಅವರ ತಾಯಿ ವಿಧಿವಶರಾಗಿದ್ದರು. ರಾಜವಂಶಸ್ಥೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟಚಿನ್ನಮ್ಮಣಿ(98) ಅವರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಇದೇ ದಿನ ಒಡೆಯರ್ ಕುಟುಂಬದಲ್ಲಿ ಮತ್ತೊಂದು ಸಾವು ಸಂಭವಸಿತ್ತು. ದಿ.ಶ್ರೀಕಂಠದತ್ತ ಒಡೆಯರ್ ಸಹೋದರಿ ವಿಶಾಲಾಕ್ಷಿ ಅವರು ವಿಧಿವಶರಾಗಿದ್ದರು.
ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಶಾಲಾಕ್ಷಿ (58) ಅವರು ಶುಕ್ರವಾರ ಸಂಜೆ ವೇಳೆಗೆ ಕೊನೆಯುಸಿರೆಳೆದಿದ್ದರು. ಅನಾರೋಗ್ಯದಿಂದ ವಿಶಾಲಾಕ್ಷಿ ಅವರು ಬಳಲುತ್ತಿದ್ದರು ಎನ್ನಲಾಗಿದ್ದು, ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=BsIcolSBl8Y
https://www.youtube.com/watch?v=fV9i0nABh6U