ಭೂ ಕುಸಿತದಿಂದ ಕಾಡಿನಲ್ಲಿ ಸಿಲುಕಿದ್ದ 50 ಪ್ರಯಾಣಿಕರ ರಕ್ಷಣೆ

Public TV
1 Min Read
hsn bookusitha

ಹಾಸನ: ಭೂ ಕುಸಿತದಿಂದ ಕಾಡಿನಲ್ಲಿ ಸಿಲುಕಿದ್ದ 50 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ಹಾಸನದ ಸಕಲೇಶಪುರ ತಾಲೂಕಿನ ಬಿಸಿಲೆಘಾಟ್ ನ ಹಡ್ಲಗದ್ದೆ ಬಳಿ ಭೂ ಕುಸಿತ ಸಂಭವಿಸಿತ್ತು. ಈ ಅವಘಡದಿಂದಾಗಿ ಮಂಗಳವಾರ ರಾತ್ರಿ ಸಾರಿಗೆ ಇಲಾಖೆ ಬಸ್ ಪ್ರಯಾಣಿಕರು ಕಾಡಿನಲ್ಲಿ ಸಿಲುಕಿದ್ದು, ರಾತ್ರಿಯೆಲ್ಲ ಕುಡಿಯಲು ನೀರಿಲ್ಲದೆ ಪರದಾಡಿದ್ದರು. ಮರುದಿನ ಸ್ಥಳೀಯರ ನೆರವಿನಿಂದ ಬೆಟ್ಟವನ್ನೇರಿ ರಸ್ತೆಯ ಮತ್ತೊಂದು ಬದಿಗೆ ಬಂದು ಸೇರಿದ್ದಾರೆ. ಈ ವೇಳೆ ಸ್ಥಳೀಯರೇ ವಯೋವೃದ್ಧರನ್ನ ಬೆನ್ನಮೇಲೆ ಹೊತ್ತು ತಂದು ರಕ್ಷಿಸಿದ್ದಾರೆ.

ಜನರ ನೋವಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸದ್ಯ ಮಡಿಕೇರಿ ಡಿಪೋ ಬಸ್ ಮೂಲಕ ತೆರಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *