– ಕೋಟೆ ವೀರಭದ್ರೇಶ್ವರ ದೇವಸ್ಥಾನ ಮುಂಭಾಗ ಶೋಧ; ಡಿಸಿ ಚಾಲನೆ
ಗದಗ: ಅದು ಐತಿಹಾಸಿಕ ದೇವಸ್ಥಾನಗಳ ಸ್ವರ್ಗ, ಶಿಲ್ಪಕಲೆಗಳ ತೊಟ್ಟಿಲು. ಇಂದ್ರನ ಅಮರಾವತಿಗೂ ಮಿಗಿಲಾದ ಅನೇಕ ಸಂಪದ್ಭರಿತ ನಾಡು. ಆ ನಾಡಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಇಂದಿನಿಂದ ಉತ್ಖನನ ಶುರುವಾಗಿದೆ. ಆ ಉತ್ಖನನ ಇದೀಗ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಎಲ್ಲರ ಚಿತ್ತ ಲಕ್ಕುಂಡಿ ನಿಧಿ (Lakkundi Gold Treasure) ಉತ್ಖನನದತ್ತ ಅನ್ನುವಂತಾಗಿದೆ.
ಈ ಎಲ್ಲ ದೃಶ್ಯಗಳು ಐತಿಹಾಸಿಕ ಸ್ಥಳ ಗದಗ ಜಿಲ್ಲೆಯ ಲಕ್ಕುಂಡಿಯದ್ದು.. ಗದಗ (Gadag) ತಾಲೂಕಿನ ಲಕ್ಕುಂಡಿ ಇದೀಗ ದೇಶದ ಗಮನ ಸೆಳೆಯುತ್ತಿದೆ. ಅದಕ್ಕೆ ಕಾರಣ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ನಿಧಿ ಸಿಕ್ಕಿದ್ದು. ಇದೀಗ ಎಲ್ಲರ ಕಣ್ಣು ಲಕ್ಕಂಡಿ ಮೇಲಿದೆ. ನಿಧಿ ಸಿಕ್ಕ ಬೆನ್ನಲ್ಲೇ ಲಕ್ಕುಂಡಿಯಲ್ಲಿ ಮತ್ತೊಂದು ಉತ್ಖನನ ಕಾರ್ಯ ಆರಂಭವಾಗಿದೆ. ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನ ಕೋಟೆ ವಿರಭದ್ರೇಶ್ವರ ದೇವಸ್ಥಾನ (Kote Veerabhadreshwara temple) ಮುಂಭಾಗ ಇಂದು ಉತ್ಖನನ ಕಾರ್ಯ ಶುರುವಾಗಿದೆ. ಗದಗ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಭೂಮಿ ಪೂಜೆ ಮಾಡೋದರ ಮೂಲಕ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದ್ರು.
ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ ನೇತೃತ್ವದಲ್ಲಿ ಈ ಉತ್ಖನನ ಕಾರ್ಯ ಶುರುವಾಗಿದೆ. ಈ ಉತ್ಖನನ ಕಾರ್ಯ ಚಾಲನೆ ಸಿಗುವ ಮುನ್ನ ಪುರಾತತ್ವ ಇಲಾಖೆ ಅಧಿಕಾರಿಗಳು, 10 ಮೀಟರ್ ಉದ್ದ, ಹತ್ತು ಮೀಟರ್ ಅಗಲ ಜಾಗವನ್ನ ಮಾರ್ಕ್ ಮಾಡಿದ್ರು. ಅದರೊಳಗೆ ಇಂದಿನ ಉತ್ಖನನ ಕಾರ್ಯ ನಡೆಯಲಿದೆ. ಈಗಾಗಲೇ ಪ್ರಾಧಿಕಾರಿದ ಅಧಿಕಾರಿಗಳು ಉತ್ಖನನಕ್ಕೆ ಅವಶ್ಯವಿರೋ 5,338 ಚದರ ಮೀಟರ್ ಜಾಗವನ್ನ ಸ್ವಾಧೀನ ಪಡಿಸಿಕೊಂಡಿದ್ದಾರೆ. ಇಂದಿನಿಂದ ಸುಮಾರು 3-4 ತಿಂಗಳ ಕಾಲ ಉತ್ಖನನ ಕಾರ್ಯ ನಡೆಯಲಿದೆ. ಇಲ್ಲಿ ಐತಿಹಾಸಿಕ ಪ್ರಾಚೀನ ವಸ್ತುಗಳ ಜೊತೆಗೆ ಏನೆಲ್ಲಾ ಅವಶೇಷಗಳು ಸಿಗಬಹುದು ಅನ್ನೋದ್ರ ಬಗ್ಗೆ ಕುತೂಹಲ ಹೆಚ್ಚಾಗಿದೆ.
ನಿಧಿ ಉತ್ಖನನಕ್ಕೆ ಯಂತ್ರ ಬಳಕೆ ಇಲ್ಲ:
ಇನ್ನು ಉತ್ಖನನ ಆರಂಭ ಸಾಕಷ್ಟು ಕೂತುಹಲ ಮೂಡಿಸಿದೆ. ಹೇಗಂದ್ರೆ ಹಾಗೆ ಇಲ್ಲಿ ಉತ್ಣನನ ಮಾಡುವಂತಿಲ್ಲ. ಹೀಗಾಗಿ ಜಿಲ್ಲಾಡಳಿತ ಕೆಲವೊಂದು ಮಾರ್ಗಸೂಚಿಗಳನ್ನ ಬಳಸಿಕೊಂಡು ಶೋಧ ನಡೆಸುತ್ತಿದೆ.
ದೇವಸ್ಥಾನ ಮುಂಭಾಗದಲ್ಲಿತ್ತಾ ಟಂಕಸಾಲೆ?
ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯಕ್ಕೆ ಯಾವುದೇ ಯಂತ್ರ ಬಳಕೆ ಇಲ್ಲ. ಕಾರ್ಮಿಕರಿಂದಲೇ ಗುದ್ದಲಿ, ಸಲಾಕೆ, ಹಾರಿ, ಪಿಕಾಸಿ ಆಯುಧಗಳನ್ನ ಬಳಸಿ ಶೋಧ ನಡೆಸಲಾಗುತ್ತಿದೆ. 1 ದಿನಕ್ಕೆ 10 ಸೆಂಟಿ ಮೀಟರ್ ಮಾತ್ರ ಅಗೆಯಬಹುದಾಗಿದೆ. ಪ್ರತಿ ಹಂತದಲ್ಲೂ ಮಣ್ಣು ಪರೀಕ್ಷಿಸುವ ಕಾರ್ಯ ನಡೆಯಲಿದೆ. ಉತ್ಖನನಕ್ಕಾಗಿ 25 ಲಕ್ಷ ರೂಪಾಯಿ ಅನುದಾನ ಬಿಡುಗಡೆಯನ್ನೂ ಮಾಡಲಾಗಿದೆ. ಕೋಟೆ ವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಶೋಧ ಶುರು ಮಾಡಲಾಗಿದೆ. ಈ ಹಿಂದೆ ಇದೇ ಪ್ರದೇಶದಲ್ಲಿ ನಾಣ್ಯ ತಯಾರಿಸುವ ಟಂಕಸಾಲೆ ಇತ್ತಂತೆ. ಬಂಗಾರ ನಾಣ್ಯಗಳನ್ನ ಹೆಚ್ಚು ಮುದ್ರಣ ಮಾಡಲಾಗುತ್ತಿತ್ತಂತೆ. ಹೀಗಾಗಿ ದೇವಾಲಯದ ಮುಂಭಾಗ ಭೂಮಿಯಿಂದಲೇ ಅಗೆಯುವ ಕಾರ್ಯ ಶುರು ಮಾಡಲಾಗಿದೆ.
ಲಕ್ಕುಂಡಿಯಲ್ಲಿ 2003 ರಲ್ಲೂ ಉತ್ಖನನ ಕಾರ್ಯ ನಡೆದಿತ್ತು. ಇದೀಗ 22 ವರ್ಷಗಳ ನಂತರ ಮತ್ತೆ ಉತ್ಖನನ ಕಾರ್ಯ ಆರಂಭವಾಗಿದೆ. ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬಳಿಕ ಇದೀಗ ಉತ್ಖನನ ಸಾಕಷ್ಟು ಕುತುಹೂಲ ಕೆರಳಿಸದ್ದು, ಉತ್ಖನನದಲ್ಲಿ ವಜ್ರ ವೈಢೂರ್ಯಗಳು, ಬಂಗಾರ ಸಿಗಬಹುದು ಎನ್ನಲಾಗಿದೆ.




