ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಯುಐ’ (UI) ಸಿನಿಮಾ ರಿಲೀಸ್ ಸಜ್ಜಾಗಿದೆ. ಸದ್ಯ UI ವಾರ್ನರ್ ಮೂಲಕ ಯೂಟ್ಯೂಬ್ನಲ್ಲಿ ಸದ್ದು ಮಾಡುತ್ತಿದೆ. ಹೀಗಿರುವಾಗ ಇಂದು (ಡಿ.2) ನಡೆದ UI ಸುದ್ದಿಗೋಷ್ಠಿಯಲ್ಲಿ ಲಹರಿ ವೇಲು (Lahari Velu) ಮಾತನಾಡಿ, UI ಸಿನಿಮಾ ವಂಡರ್ಫುಲ್ ಕಂಟೆಂಟ್, ಉಪೇಂದ್ರ (Upendra) ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಉಪೇಂದ್ರ ಗುರು, ನಾನು ಶಿಷ್ಯ ಎಂದ ಸುದೀಪ್ ಮಾತಿಗೆ ರಿಯಲ್ ಸ್ಟಾರ್ ಹೇಳೋದೇನು?
‘ಯುಐ’ ವಾರ್ನರ್ಗೆ ಎಲ್ಲಾ ಕಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಉಪೇಂದ್ರ ಅವರು ತುಂಬಾ ಕಷ್ಟಪಟ್ಟು ಈ ಚಿತ್ರ ಮಾಡಿದ್ದಾರೆ. ಅವರು 24/7 ಕೆಲಸ ಮಾಡಿದ್ದಾರೆ. ನಾನು ಮತ್ತು ಉಪೇಂದ್ರ ಒಟ್ಟಿಗೆ ಒಂದೇ ಸ್ಕೂಲ್ನಲ್ಲಿ ಓದಿದವರು. ಇಬ್ಬರೂ ಬ್ಯಾಕ್ಗ್ರೌಂಡ್ ಇಲ್ಲದೇ ಚಿತ್ರರಂಗಕ್ಕೆ ಬಂದಿದ್ದೇವೆ. ಅವರು ಉಪೇಂದ್ರ ಆಗುತ್ತಾರೆ, ನಾನು ಲಹರಿ ವೇಲು ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ.
ಇಬ್ಬರೂ ಝೀರೋಯಿಂದ ಕೆರಿಯರ್ ಶುರು ಮಾಡಿದ್ದೇವೆ. ಅಗರ್ಭ ಶ್ರೀಮಂತಿಕೆಯಲ್ಲ, ಗರ್ಭ ಶ್ರೀಮಂತಿಕೆ ಇಟ್ಟುಕೊಂಡು ಅಂದರೆ ಏನು ಇಲ್ಲದೇ ಬಂದಿದ್ದೇವೆ. ಹಾಗಾಗಿ ಉಪೇಂದ್ರಗೆ ಕಷ್ಟ ಗೊತ್ತಿದೆ. UI ವಂಡರ್ಫುಲ್ ಕಂಟೆಂಟ್. ಕನ್ನಡಿಗರು ಮಾತ್ರವಲ್ಲ ಹೊರದೇಶದವರು ಕೂಡ ನಮ್ಮ ಸಿನಿಮಾವನ್ನು ನೋಡಲಿ ಅಂತ ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.
ಅಂದಹಾಗೆ, AI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್ ಆಗಿ ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.
ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್ಟೈನರ್ಸ್ ಮೂಲಕ ಮಹೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.