ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ (Chamarajapet Maidan) ಕಂದಾಯ ಇಲಾಖೆ ವತಿಯಿಂದ ಗಣರಾಜೋತ್ಸವ (Republic Day) ಆಚರಣೆಗೆ ಗ್ರೀನ್ ಸಿಗ್ನಲ್ ಬೆನ್ನಲ್ಲೆ ಲಹರಿ ಸಂಸ್ಥೆ ಮುಖ್ಯಸ್ಥ ಲಹರಿ ವೇಲು (Lahari Velu) ಸಂತಸ ವ್ಯಕ್ತಪಡಿಸಿದ್ದಾರೆ.
‘ಪಬ್ಲಿಕ್ ಟಿವಿ’ (Public TV) ಜೊತೆ ಮಾತಾನಾಡಿದ ಲಹರಿ ವೇಲು, ಚಾಮರಾಜಪೇಟೆ ಆಟದ ಮೈದಾನದಲ್ಲಿ 75 ವರ್ಷಗಳ ಬಳಿಕ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಿದ್ದೆವು. ಅದರ ಬಳಿಕ ಗಣೇಶೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಆಚರಣೆಗೆ ಸಾಧ್ಯ ಆಗಿರಲಿಲ್ಲ. ಸದ್ಯ ಸರ್ಕಾರ ಈ ಬಾರಿ ಗಣರಾಜೋತ್ಸವ ಆಚರಣೆಗೆ ಮುಂದಾಗಿರೋದು ಸಂತಸದ ವಿಚಾರ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೊದಲು ಕ್ಷೇತ್ರ ಹುಡುಕಿಕೊಳ್ಳಲಿ, ಆಮೇಲೆ JDS ಬಗ್ಗೆ ಮಾತಾಡಲಿ – ಸಿ.ಎಂ ಇಬ್ರಾಹಿಂ
ಚಾಮರಾಜಪೇಟೆ ಸ್ಥಳೀಯ ನಿವಾಸಿಯಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಕಂದಾಯ ಸಚಿವರಿಗೆ ಮತ್ತು ಸ್ಥಳೀಯ ಸಂಸದರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದು ಇನ್ಮುಂದೆ ಕೂಡ ಮುಂದುವರೆಯಬೇಕು. ಚಾಮರಾಜಪೇಟೆ ಜನ ಶಾಂತಿಯುತವಾಗಿ ಯಾವುದೇ ಕಾರ್ಯಕ್ರಮಗಳಾದ್ರು ಸಹಕಾರ ನೀಡುತ್ತಾರೆ ಎಂದು ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ರಾಮನವಮಿ ಸೇರಿದಂತೆ ಇನ್ನೂ ಹಲವು ಕಾರ್ಯಕ್ರಮಗಳನ್ನ ಮಾಡಲಿದ್ದೇವೆ. ಗಣರಾಜೋತ್ಸವ ವಿಚಾರವಾಗಿ ಕಂದಾಯ ಇಲಾಖೆ ಯಾವುದೇ ಸಲಹೆ, ಸಹಕಾರ ಕೇಳಿದ್ರೂ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜ.23ರಂದು ಬೆಂಗ್ಳೂರಿನ 300 ಕಡೆ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k