ಇಂಫಾಲ್: ಮೀಸಲಾತಿ ವಿಚಾರವಾಗಿ ಮಣಿಪುರದಲ್ಲಿ (Manipur violence) ಮೈತೇಯ್ (Meitei) ಮತ್ತು ಕುಕಿ ಸಮುದಾಯಗಳ (Kuki woman) ನಡುವೆ ಉಂಟಾದ ಸಂಘರ್ಷ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಇದರ ಪರಿಣಾಮವಾಗಿ ಈ ಎರಡೂ ಸಮುದಾಯಕ್ಕೆ ಸೇರಿದ ದಂಪತಿ ಪರಸ್ಪರ ಬೇರಾಗಿದ್ದು, ಕಣ್ಣೀರಿಡುತ್ತಿದ್ದಾರೆ.
ಕುಕಿ ಸಮುದಾಯದ ಮಹಿಳೆಯೊಬ್ಬರಿಗೆ ಮೈತೇಯ್ ಸಮುದಾಯದ ವ್ಯಕ್ತಿಯನ್ನು ಪ್ರೇಮಿಸಿ ಮದುವೆಯಾಗಿದ್ದರು. ಮಣಿಪುರ ಸಂಘರ್ಷಕ್ಕೂ ಹಿಂದಿನ ದಿನಗಳವರೆಗೂ ಇಬ್ಬರು ಚೆನ್ನಾಗಿಯೇ ಸಂಸಾರ ನಡೆಸುತ್ತಿದ್ದರು. ಆದರೆ ಸಂಘರ್ಷ ಉಂಟಾಗಿದ್ದು, ಇವರಿಬ್ಬರನ್ನು ಬೇರಾಗುವಂತೆ ಮಾಡಿದೆ. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ
ಹಿಂಸಾಚಾರ ಪೀಡಿತ ಸ್ಥಳಗಳಿಂದ ನೂರಾರು ಕುಟುಂಬಗಳು ಬೇರೆ ಕಡೆ ಹೋಗಿ ನೆಲೆಸಿವೆ. ಅದೇ ರೀತಿ ಈ ಇಬ್ಬರು ದಂಪತಿ ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದಿದ್ದರು. ದಂಪತಿಯು ಇಂಫಾಲ್ನ ಪರಿಹಾರ ಶಿಬಿರದಲ್ಲಿ ಒಟ್ಟಿಗೆ ಇದ್ದರು. ಆದರೆ ಜನರು ಆಕೆ ಕುಕಿ ಸಮುದಾಯದಿಂದ ಬಂದವಳು ಎಂದು ತಿಳಿದಾಗ, ಪರಿಹಾರ ಶಿಬಿರವನ್ನು ತೊರೆಯುವಂತೆ ಒತ್ತಾಯಿಸಲಾಯಿತು.
ಜನರ ಒತ್ತಡದ ಕಾರಣದಿಂದಾಗಿ ದಂಪತಿ ಪರಸ್ಪರ ಬೇರಾಗಿದ್ದಾರೆ. ಈ ಬಗ್ಗೆ ಮಹಿಳೆ ಅಳಲು ತೋಡಿಕೊಂಡಿದ್ದಾರೆ. ರಾಜ್ಯದಲ್ಲಿ ತಲೆದೋರಿರುವ ಹಿಂಸಾಚಾರ ಇನ್ನೂ ಕಡಿಮೆಯಾಗಿಲ್ಲ. ಮಣಿಪುರ ಹಿಂಸಾಚಾರ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಸಂಸತ್ನಲ್ಲೂ ಗದ್ದಲಕ್ಕೆ ಕಾರಣವಾಗಿದೆ. ಈ ಎಲ್ಲದರ ಮಧ್ಯೆ ಮತ್ತೊಂದು ಪ್ರಕರಣ ಸುದ್ದಿಯಾಗಿದೆ. ಇದನ್ನೂ ಓದಿ: ನಿಮಗೆ ಬೇಕಾದಂತೆ ಕರೆಯಿರಿ ಮಿಸ್ಟರ್ ಮೋದಿ – ಪ್ರಧಾನಿಗೆ ರಾಹುಲ್ ಗಾಂಧಿ ತಿರುಗೇಟು
Web Stories