ಉಡುಪಿ: ಕುಂದಾಪುರ ತಾಲೂಕಿನ ಪ್ರಸಿದ್ಧ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಪ್ರತೀತಿಯಂತೆ ಕುಬ್ಜಾ ನದಿಯು ನೈಸರ್ಗಿಕ ಅಭಿಷೇಕ ಮಾಡಿದೆ.
ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲೊಂದಾದ ಕುಂದಾಪುರ ತಾಲೂಕಿನ ಕಮಲಶೀಲೆ ಬ್ರಾಹ್ಮಿ ದುರ್ಗಾಪರಮೇಶ್ವರ ದೇವಾಲಯದಲ್ಲಿನ ದೇವಿಗೆ ನೈಸರ್ಗಿಕ ಅಭಿಷೇಕವಾಗಿದೆ. ಕುಬ್ಜಾ ನದಿಯ ಪಕ್ಕದಲ್ಲೇ ಪುಣ್ಯಕ್ಷೇತ್ರವಿದ್ದು, ಮೈದುಂಬಿ ಹರಿಯುತ್ತಿರುವ ಕುಬ್ಜಾನದಿಯು ಇಂದು ಬೆಳಗಿನ ಜಾವದಂದು ದೇವಾಲಯ ಆವರಣ ಹಾಗೂ ಗರ್ಭಗುಡಿಯೊಳಗೆ ನುಗ್ಗಿದೆ.
ಪ್ರತೀ ವರ್ಷದ ವಾಡಿಕೆಯಂತೆ ಗರ್ಭಗುಡಿಗೆ ಬಂದ ನೀರು, ದೇವಿಯನ್ನು ಅಭಿಷೇಕ ಮಾಡುತ್ತದೆ. ದೇವಸ್ಥಾನಕ್ಕೆ ನೀರು ನುಗ್ಗುತ್ತಿದ್ದಂತೆ ಅರ್ಚಕರುಗಳು ದೇವಿಗೆ ವಿಶೇಷ ಮಂಗಳಾರತಿ ಮಾಡಿ ವಂದನೆ ಸಲ್ಲಿಸಿದರು. ಅನಾಧಿಕಾಲದಿಂದ ವರ್ಷಕ್ಕೊಂದು ಬಾರಿ ದೇವಿಗೆ ಕುಬ್ಜಾ ನದಿಯು ನೈಸರ್ಗಿಕವಾಗಿ ಅಭಿಷೇಕ ಮಾಡುತ್ತಾ ಬಂದಿರುವುದು ವಿಶೇಷವಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews