ಖರ್ಗೆರನ್ನು ಕರ್ನಾಟಕಕ್ಕೆ ಅಥವಾ ಬೇರೆ ರಾಜ್ಯಕ್ಕೆ ಸಿಎಂ ಮಾಡ್ತಾರಾ?: ಕೆಎಸ್ ಈಶ್ವರಪ್ಪ

Public TV
1 Min Read
KS Eshwarappa BJP 3X2

ಶಿವಮೊಗ್ಗ: ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಮುಂದಿನ ಮೂರುವರೆ ವರ್ಷ ಬಿಎಸ್ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಸಿಎಂ ಸ್ಥಾನದಲ್ಲಿ ಬಿಎಸ್‍ವೈ ಇದ್ದಾರೆ. ಸಿಎಂ ಸ್ಥಾನದಲ್ಲಿ ಒಬ್ಬರು ಇರುವಾಗಲೇ ಇನ್ನೋಬ್ಬರನ್ನು ವಿರೋಧ ಪಕ್ಷಗಳು ಸಿಎಂ ಮಾಡಲು ಹೊರಟಿವೆ ಎಂದು ವ್ಯಂಗ್ಯವಾಡಿದರು.

Mallikarjun Kharge

ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ ಮಾಡೋದಕ್ಕೆ ಸಿದ್ದರಾಮಯ್ಯ ಅವರನ್ನು ಒಪ್ಪಿಸುತ್ತಿದ್ದೇವೆ ಎಂಬ ಮಾತನ್ನು ನಾನು ಗಮನಿಸಿದೆ. ಆದರೆ ಖರ್ಗೆಯವರನ್ನು ಕರ್ನಾಟಕಕ್ಕೆ ಸಿಎಂ ಮಾಡ್ತಾರಾ ಅಥವಾ ಬೇರೆ ರಾಜ್ಯಕ್ಕೆ ಸಿಎಂ ಮಾಡ್ತಾರಾ ಎಂದು ತಿಳಿಯುತ್ತಿಲ್ಲ ಎಂದರು.

ರಾಜ್ಯದಲ್ಲಿ ಸಿಎಂ ಹುದ್ದೆಯೇ ಖಾಲಿ ಇಲ್ಲ. ಸುಮ್ಮನೆ ದಲಿತ ಸಿಎಂ ಮಲ್ಲಿಕಾರ್ಜುನ ಖರ್ಗೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಖರ್ಗೆಯವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಜಾತಿ ಹೆಸರೇಳಿ ರಾಜಕಾರಣ ಮಾಡಲಿಲ್ಲ ಎಂದರೆ ಅವರಿಗೆ ತಿಂದ ಅನ್ನ ಜೀರ್ಣ ಆಗುವುದಿಲ್ಲ. ಸಿಎಂ ಈಡಿ ರಾಜ್ಯದ ಸಿಎಂ ಯಾವುದೇ ಜಾತಿಗೆ ಸೀಮಿತವಾದ ಸ್ಥಾನ ಅಲ್ಲ. ಆದರೆ ಕಾಂಗ್ರೆಸ್ ನವರು ಲಿಂಗಾಯ್ತ ಸಿಎಂ, ಒಕ್ಕಲಿಗ ಸಿಎಂ, ಕುರುಬ ಸಿಎಂ, ದಲಿತ ಸಿಎಂ ಎಂದು ಜಾತಿ ಎಳೆದು ತರುತ್ತಿದ್ದಾರೆ ಇದು ಸರಿಯಲ್ಲ. ಚುನಾವಣೆ ನಂತರ ಕಾಂಗ್ರೆಸ್ ವಿರೋಧ ಪಕ್ಷ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದರು.

siddaramaiah

ಚುನಾವಣಾ ಫಲಿತಾಂಶದ ನಂತರ ಇನ್ನಷ್ಟು ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿಗೆ ಬರುತ್ತಾರೆ. ಆದರೆ ನಾವೇನು ಆಪರೇಷನ್ ಕಮಲ ಮಾಡೋದಿಲ್ಲ. ಆ ಪಕ್ಷಗಳಿಗೆ ಭವಿಷ್ಯ ಇಲ್ಲವೆಂದು ಆ ಶಾಸಕರುಗಳೇ ಪಕ್ಷಕ್ಕೆ ಬರುವ ತೀರ್ಮಾನ ಮಾಡಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಕ್ಕೆ ಸೀಮಿತ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರು ಹೇಳಿದ್ದರು. ಆದರೆ ಬಿಜೆಪಿ 25 ಸ್ಥಾನ ಪಡೆಯಿತು. ಲೋಕಸಭಾ ಫಲಿತಾಂಶ ಉಪ ಚುನಾವಣೆಯಲ್ಲಿ ಇದು ಪುನರವರ್ತನೆಯಾಗುತ್ತದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದೊಂದು ಸ್ಥಾನ ಪಡೆದರು ಆಶ್ಚರ್ಯವಿಲ್ಲ, ಬಿಜೆಪಿಗೆ ಹೆಚ್ಚಿನ ಸ್ಥಾನ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *