ಮಡಿಕೇರಿ: ವಿಶ್ವವಿಖ್ಯಾತ ಕೆಆರ್ಎಸ್ ಜಲಾಶಯ ಸುರಕ್ಷಿತವಾಗಿದ್ದು, ಯಾರೇ ಸಂಸದರಾಗಲಿ, ಶಾಸಕರಾಗಲಿ ಇಲ್ಲ ಸಲ್ಲದ ಹೇಳಿಕೆ ನೀಡಬಾರದು ಎಂದು ಕಂದಾಯ ಸಚಿವ ಆರ್.ಅಶೋಕ್ ಮಡಿಕೇರಿಯಲ್ಲಿ ಸಂಸದೆ ಸುಮಲತಾ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವೇಶ್ವರಯ್ಯ ಅವರು ಕಟ್ಟಿಸಿದ ಕೆಆರ್ಎಸ್ ಜಲಾಶಯ ಸುರಕ್ಷಿತವಾಗಿದ್ದು, ಸರ್ಕಾರದ ಒಬ್ಬ ಮಂತ್ರಿಯಾಗಿ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಜಲಾಶಯಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ಸಂಸದರು ಇಲ್ಲ ಸಲ್ಲದ್ದನ್ನು ಹೇಳುವ ಮೂಲಕ ಜನರಿಗೆ, ರೈತರಿಗೆ ಆತಂಕ ಮೂಡುವಂತೆ ಮಾಡಿದ್ದಾರೆ. ನಾನು ಕೂಡ ಅಲ್ಲಿ ಮಂತ್ರಿಯಾಗಿದ್ದವನು, ಅಲ್ಲಿಗೆ ಯಾವುದೇ ತೊಂದರೆ ಇಲ್ಲ. ಜಲಾಶಯಕ್ಕೆ ತೊಂದರೆ ಇದ್ದರೆ ಅದನ್ನು ಎಂಜಿನಿಯರ್ ಗಳು, ತಜ್ಞರು ಹೇಳಬೇಕು. ಯಾರ್ಯಾರೋ ಹೇಳೋದಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸುಮಲತಾ Vs ಕುಮಾರಸ್ವಾಮಿ – ಮೈ ಶುಗರ್ ವಿವಾದ ಈಗ ಎದ್ದಿದ್ದು ಯಾಕೆ?
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಅವರ ನಡುವಿನ ಯುದ್ಧ ಈಗಿನದ್ದಲ್ಲ. ಲೋಕಸಭಾ ಚುನಾವಣೆಯಿಂದಲೂ ಮುಂದುವರಿದಿದೆ. ಇರಾಕ್ ಮತ್ತು ಪ್ಯಾಲೇಸ್ತೇನ್ ನಡುವೆ ನಡೆಯುವ ಯುದ್ಧದ ರೀತಿ ಯಾವಾಗಲೂ ಇದ್ದೇ ಇರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.