Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ದೇವಭೂಮಿ ʻದ್ವಾರಕೆʼಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ…

Public TV
Last updated: August 26, 2024 11:20 am
Public TV
Share
4 Min Read
Krishna 1
SHARE

ದೇಶಾದ್ಯಂತ ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದೆ. ಈ ಸಂದರ್ಭದಲ್ಲಿ ಕೃಷ್ಣನ ಮಹಿಮೆಯ ಸ್ಥಳ ಬಗ್ಗೆ ತಿಳಿಯುವುದು ಅತ್ಯವಶ್ಯಕವೂ ಆಗಿದೆ. ʻದ್ವಾರಕೆʼ ಎಂದೊಡನೆ ನೆನಪಾಗೋದು ಮಹಾಭಾರತ. ದೇವಭೂಮಿ ಎಂದೇ ಕರೆಸಿಕೊಳ್ಳುವ ದ್ವಾರಕೆ ಈಗಲೂ ಶ್ರೀಕೃಷ್ಣನ ಧಾಮವಾಗಿ ಸುಪ್ರಸಿದ್ಧವಾಗಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಈ ದೇವಭೂಮಿಗೆ ಭೇಟಿ ನೀಡಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗುತ್ತಾರೆ. ಈ ದಿನ ಕೃಷ್ಣಜನ್ಮಾಷ್ಟಮಿಯಲ್ಲಿ ಇಲ್ಲಿ ವೈಭವೋಪೇತವಾಗಿ ಆಚರಿಸಲಾಗುತ್ತಿದ್ದು, ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ಕೃಷ್ಣನ ದರ್ಶನಕ್ಕೆ ದಾಂಗುಡಿ ಇಡುತ್ತಿದ್ದಾರೆ. ʻದ್ವಾರಕಾʼ (Dwarka) ಎಂದರೆ ಸ್ವರ್ಗದ ದ್ವಾರ ಎಂದು ಅರ್ಥ. ಮಹಾಭಾರತದ ಪ್ರಕಾರ ಈ ಜಾಗದ ಪೂರ್ವನಾಮ ಕುಶಸ್ಥಲಿ. ಹಿಂದೂ ಸಂಪ್ರದಾಯದ ಪವಿತ್ರ ಸಪ್ತಪುರಿಗಳಲ್ಲಿ ಒಂದಾಗಿರುವ ಕಾರಣ ಇದು ಮೋಕ್ಷಪುರಿ.

ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ್ದ ನಾಲ್ಕು ಪೀಠಗಳಲ್ಲಿ ಪಾಶ್ಚಿಮಾತ್ಯ ಶಾರದಾ ಪೀಠ ಇರುವುದು ಇಲ್ಲಿಯೇ. ಹಿಂದೂ ಧರ್ಮೀಯರಿಗೆ ಮಾತ್ರವೇ ಅಲ್ಲ, ಜೈನ ಮತ್ತು ಬೌದ್ಧ ಧರ್ಮಗಳಲ್ಲೂ ಪವಿತ್ರವಾಗಿರುವ ಕ್ಷೇತ್ರ ಈ ದ್ವಾರಕೆ. ಎಲ್ಲಕ್ಕಿಂತ ಹೆಚ್ಚಾಗಿ ದ್ವಾರಕೆ ಶ್ರೀಕೃಷ್ಣನ ರಾಜಧಾನಿಯಾಗಿತ್ತು. ಇದು ಸಾಕ್ಷಾತ್ ಭಗವಂತನ ಕರ್ಮಭೂಮಿ! ಯದುವಂಶದ ಕೊನೆಯ ನೆಲೆ ಇದು. ಶ್ರೀಕೃಷ್ಣನ ಅವತಾರ ಸಮಾಪ್ತಿಯ ಬಳಿಕ ಈ ಪಟ್ಟಣವನ್ನು ಸಮುದ್ರ ನುಂಗಿತ್ತು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

Krishna 2

ಪುರಾಣಗಳ ದ್ವಾರಕೆ ಇಂದು ಗುಜರಾತ್ ರಾಜ್ಯದ ನೈಋತ್ಯ ಭಾಗದಲ್ಲಿರುವ ಒಂದು ಪಟ್ಟಣ. ಈ ಪ್ರದೇಶಕ್ಕೆ ದೇವಭೂಮಿ ದ್ವಾರಕಾ ಜಿಲ್ಲೆ ಎಂದು ಹೆಸರಿದೆ. ಇಲ್ಲಿರುವ ಶ್ರೀಕೃಷ್ಣನ ಪವಿತ್ರ ಕ್ಷೇತ್ರಗಳಲ್ಲಿ ದ್ವಾರಕಾಧೀಶ ಮಂದಿರ ಅತ್ಯಂತ ಮಹತ್ವದ್ದಾಗಿದೆ. ಹಾಗಿದ್ದರೇ ಆ ದ್ವಾರಕಾಧೀಶ ಮಂದಿರದ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..

ದ್ವಾರಕಾಧೀಶ ಮಂದಿರ
ದ್ವಾರಕೆಯ ಆರಾಧ್ಯದೈವವಾದ ಶ್ರೀಕೃಷ್ಣನ ದೇವಾಲಯಕ್ಕೆ ದ್ವಾರಕಾಧೀಶ ಮಂದಿರ ಎಂದು ಹೆಸರು. ಈ ದೇವಾಲಯ ಇರುವುದು ಗೋಮತೀ ನದಿಯ ಸಂಗಮಕ್ಷೇತ್ರದಲ್ಲಿ, ದೇಶ-ವಿದೇಶಗಳಿಂದ ಭಕ್ತರನ್ನು ಆಕರ್ಷಿಸುತ್ತಿರುವ ಪ್ರಾಚೀನ ದೇವಾಲಯ ಇದು. ದ್ವಾರಕಾಧೀಶ ಮಂದಿರದ ಗೋಪುರವನ್ನು 16ನೇ ಶತಮಾನದಲ್ಲಿ ರಾಜಾ ಜಗತ್ ಸಿಂಗ್ ರಾಠೋಡ್ ಕಟ್ಟಿಸಿದ್ದ ಕಾರಣ ಇದಕ್ಕೆ ಜಗನ್ಮಂದಿರ ಮತ್ತು ನಿಜ ಮಂದಿರ ಎಂಬ ಹೆಸರುಗಳೂ ಇವೆ.

Krishna 3

ಸ್ಥಳಪುರಾಣದ ಪ್ರಕಾರ ಈ ಜಾಗದಲ್ಲಿ 2,500 ವರ್ಷಗಳ ಪುರಾತನ ದೇವಾಲಯ ಇತ್ತು. ಹರಿಗೃಹ (ಶ್ರೀಕೃಷ್ಣನ ಅರಮನೆ) ಇದ್ದ ಜಾಗದಲ್ಲಿ ಅವನ ಮರಿ ಮೊಮ್ಮಗ ವಜ್ರನಾಭ ಮೂಲ ದೇವಾಲಯವನ್ನು ನಿರ್ಮಿಸಿದ. ಆರಂಭದಲ್ಲಿ ದೇವಾಲಯ ಛತ್ರಿಯ ಆಕಾರದಲ್ಲಿತ್ತು. ವರ್ಷಾಂತರಗಳಲ್ಲಿ ಇದು ಅನೇಕಾನೇಕ ಬದಲಾವಣೆಗಳನ್ನು ಕಂಡಿದೆ. ಪಶ್ಚಿಮಾಭಿಮುಖವಾಗಿ ನಿರ್ಮಾಣವಾಗಿರುವ ದ್ವಾರಕಾಧೀಶ ದೇವಾಲಯ ಒಂದು ಸುಂದರ ಭವನ. ಸಮುದ್ರ ಮಟ್ಟದಿಂದ 70 ಅಡಿ ಎತ್ತರದಲ್ಲಿರುವ ಸುಮಾರು 6,000 ಚದರಡಿ ವಿಸ್ತೀರ್ಣದ ದ್ವಾರಕಾಧೀಶ ಮಂದಿರದ ಗರ್ಭಗೃಹಕ್ಕೆ ನಿಜಮಂದಿರ ಅಥವಾ ಹರಿಗೃಹ ಎಂದು ಹೆಸರಿದೆ. ಇದರೊಳಗೆ ಅಂತರಾಳ ಎಂಬ ಗುಪ್ತ ಕೊಠಡಿ ಇದೆ. ಮಂದಿರದ ನಡುವೆ ವಿಶಾಲ ಸಭಾಂಗಣ ಇದೆ.

16ನೇ ಶತಮಾನದಲ್ಲಿ ನಿರ್ಮಾಣವಾದ ದೇವಾಲಯದ ಎರಡು ಗೋಪುರಗಳ ಮೇಲೆ ಸುಂದರ ಶಿಲ್ಪಗಳ ಅಲಂಕಾರವಿದೆ. ಇವುಗಳಲ್ಲಿ 52 ಮೀಟರ್ (170 ಅಡಿ) ಎತ್ತರದ 7 ಮಾಳಿಗೆಗಳ ಹಿರಿಯ ಗೋಪುರಕ್ಕೆ ʻಲಡ್ವಾ ಶಿಖ‌ರ್’ ಎಂದು ಹೆಸರು. 157 ಅಡಿ ಎತ್ತರದ, 5 ಮಾಳಿಗೆಗಳ ಕಿರಿಯ ಗೋಪುರಕ್ಕೆ ʻನಿಜಶಿಖ‌ರ್’ ಎಂದು ಹೆಸರು.

ಏಳು ಮಾಳಿಗೆಗಳ ಗೋಪುರವನ್ನು 72 ಕಗ್ಗಲ್ಲಿನ ಅಲಂಕೃತ ಸ್ತಂಭಗಳು ಆಧರಿಸಿ ಹಿಡಿದಿವೆ. ಐದು ಮಾಳಿಗೆಗಳ ನಿಜಶಿಖರದ ಆಧಾರವಾಗಿ 60 ಸ್ತಂಭಗಳಿವೆ. ಈ ಗೋಪುರದ ಕೆಳಗೆ ದ್ವಾರಕಾಧೀಶನ ಗರ್ಭಗುಡಿ ಇದೆ. ಭಕ್ತರು 56 ಮೆಟ್ಟಲುಗಳನ್ನು ಹತ್ತಿ ದೇವಾಲಯ ತಲುಪುತ್ತಾರೆ. ಯಾದವ ರಾಜ್ಯದ 52 ಆಡಳಿತ ವಿಭಾಗಗಳು ಮತ್ತು ಕೃಷ್ಣ, ಬಲರಾಮ, ಪ್ರದ್ಯುಮ್ನ ಹಾಗೂ ಅನಿರುದ್ಧರನ್ನು ಈ ಮೆಟ್ಟಲುಗಳು ಸೂಚಿಸುತ್ತವೆ.

krishna kamsa

ದೇವಾಲಯಕ್ಕೆ ಎರಡು ಮುಖ್ಯದ್ವಾರಗಳಿವೆ. ಮಾರುಕಟ್ಟೆಯತ್ತ ತೆರೆದುಕೊಳ್ಳುವ ಉತ್ತರಾಭಿಮುಖವಾದ ಪ್ರವೇಶದ್ವಾರಕ್ಕೆ ʻಮೋಕ್ಷದ್ವಾರ’ ಎಂದು ಹೆಸರು, ದಕ್ಷಿಣಾಭಿಮುಖವಾದ ಪ್ರವೇಶದ್ವಾರಕ್ಕೆ ʻಸ್ವರ್ಗದ್ವಾರ’ ಎಂದು ಹೆಸರು. ಇದು ಗೋಮತೀ ನದಿಯತ್ತ ತೆರೆದುಕೊಳ್ಳುತ್ತದೆ. ಭಕ್ತರು ಗೋಮತೀ ನದಿಯಲ್ಲಿ ಮುಳುಗೆದ್ದು ಶ್ರೀಕೃಷ್ಣನ ದರ್ಶನಕ್ಕೆ ಹೋಗಬೇಕು ಎಂಬ ನಿಯಮ ಇದೆ.

ಗರ್ಭಗುಡಿಯಲ್ಲಿರುವ ದ್ವಾರಕಾಧೀಶನ ವಿಗ್ರಹ ವಿಷ್ಣುವಿನಂತೆ ಚತುರ್ಭುಜದ್ದಾಗಿದ್ದು, ಶಂಖ, ಚಕ್ರ, ಗದೆ, ಪದ್ಮಗಳನ್ನು ಹಿಡಿದ ತ್ರಿವಿಕ್ರಮ ರೂಪದಲ್ಲಿದೆ. ಪ್ರತಿದಿನ ದ್ವಾರಕಾಧೀಶ ಮೂರ್ತಿಯನ್ನು ವೈಭವೋಪೇತವಾಗಿ ಅಲಂಕರಿಸಲಾಗುತ್ತದೆ. ಶ್ರೀಕೃಷ್ಣ ದ್ವಾರಕೆಯ ರಾಜಕುಮಾರನಾಗಿದ್ದ. ಅವನನ್ನು ಅದೇ ರೀತಿ ಪೂಜಿಸಲಾಗುತ್ತದೆ. ಗರ್ಭಗುಡಿಯ ಹೊರಗೆ ಎಡಭಾಗದ ವೇದಿಕೆಯಲ್ಲಿ ಬಲರಾಮನ ಮೂರ್ತಿ ಇದೆ. ಬಲಭಾಗದಲ್ಲಿ ಪ್ರದ್ಯುಮ್ನ ಮತ್ತು ಅನಿರುದ್ಧ (ಕೃಷ್ಣನ ಮಗ ಮತ್ತು ಮೊಮ್ಮಗ)ರ ವಿಗ್ರಹಗಳಿವೆ.

ಸಭಾಂಗಣದ ಸುತ್ತ ರಾಧಿಕಾ, ಜಾಂಬವತಿ, ಸತ್ಯಭಾಮೆ, ಲಕ್ಷ್ಮೀದೇವಿ, ಬಲರಾಮ, ಪ್ರದ್ಯುಮ್ನ, ಅನಿರುದ್ಧ ಮಾಧವ ರಾವ್‌ ಜೀ (ಶ್ರೀಕೃಷ್ಣ), ರುಕ್ಕಿಣಿ, ಜುಗಲ್ ಸ್ವರೂಪ್ (ಶ್ರೀಕೃಷ್ಣನ ಇನ್ನೊಂದು ಹೆಸರು), ಶಿವ, ಲಕ್ಷ್ಮೀನಾರಾಯಣ ಮತ್ತು ಸೀತಾದೇವಿಯ ವಿಗ್ರಹಗಳಿರುವ ಪುಟ್ಟ ಗುಡಿಗಳಿವೆ. ದಂತಕಥೆಗಳ ಪ್ರಕಾರ ಶ್ರೀಕೃಷ್ಣನ ಪರಮಭಕ್ತಿ ಮೀರಾಬಾಯಿ ಕೃಷ್ಣನ ಮೂರ್ತಿಯೊಡನೆ ಲೀನವಾಗಿದ್ದು ಇದೇ ದಿವ್ಯ ಮಂದಿರದಲ್ಲಿ ಏಳು ಮಾಳಿಗೆಗಳ ಲಡ್ಡಾ ಶಿಖರ್ ಗೋಪುರದ ಮೇಲಿನ ಧ್ವಜಸ್ತಂಭದಲ್ಲಿ ಸೂರ್ಯ ಮತ್ತು ಚಂದ್ರರ ಚಿತ್ರಗಳಿರುವ ಶ್ರೀಹರಿಧ್ವಜ ಹಾರುತ್ತದೆ. ತ್ರಿಕೋನಾಕೃತಿಯಲ್ಲಿರುವ 50 ಅಡಿ ಅಗಲದ ಧ್ವಜ ಇದು. ಈ ಧ್ವಜವನ್ನು ದಿನಕ್ಕೆ ನಾಲ್ಕು ಬಾರಿ ಬದಲಾಯಿಸಲಾಗುತ್ತದೆ.

ಮುಖ್ಯ ದ್ವಾರಕಾಧೀಶ ದೇವಾಲಯ ತೆರೆದುಕೊಳ್ಳುವುದು ಬೆಳಗ್ಗೆ 6.30ಕ್ಕೆ. ಬೆಳಗ್ಗಿನ ಮಂಗಳಾರತಿಯ ಬಳಿಕ ಮಧ್ಯಾಹ್ನ 1 ಗಂಟೆಯ ತನಕ ದೇವಾಲಯ ತೆರೆದಿರುತ್ತದೆ. ಮಧ್ಯಾಹ್ನ 1 ಗಂಟೆಗೆ ಬಾಗಿಲು ಹಾಕಿದರೆ ಮತ್ತೆ ತೆರೆಯುವುದು ಸಂಜೆ 5 ಗಂಟೆಗೆ. 5ರಿಂದ ರಾತ್ರಿ 9.30ರ ತನಕ ದೇವಾಲಯ ತೆರೆದಿರುತ್ತದೆ. ದ್ವಾರಕೆಗೆ ಚಳಿಗಾಲ ಮತ್ತು ಬೇಸಗೆಯಲ್ಲಿ ಭೇಟಿ ನೀಡಬಹುದು. ಸಮುದ್ರ ಸಾಮೀಪ್ಯದ ಕಾರಣ ಇಲ್ಲಿ ಸಮಶೀತೋಷ್ಣ ವಾತಾವರಣ ಇರುತ್ತದೆ.

TAGGED:DwarkaDwarkadhish templegujaratKrishna JanmashtamiKrishna Janmashtami 2024ಗುಜರಾತ್ದ್ವಾರಕಾಧೀಶ ಮಂದಿರದ್ವಾರಕೆಬೆಂಗಳೂರುಶ್ರೀಕೃಷ್ಣ ಜನ್ಮಾಷ್ಟಮಿ
Share This Article
Facebook Whatsapp Whatsapp Telegram

You Might Also Like

Alia Bhatt 1
Bollywood

ಸಿಲ್‌ಸಿಲಾ ರೇಖಾ ರೀತಿ ರೆಡಿಯಾದ ಅಲಿಯಾ ಭಟ್

Public TV
By Public TV
1 minute ago
Tigers Death Case
Chamarajanagar

5 ಹುಲಿಗಳ ನಿಗೂಢ ಸಾವು – ವಿಷ ಹಾಕಿದ್ದ ದುಷ್ಕರ್ಮಿ ಸೇರಿ ಐವರು ವಶಕ್ಕೆ

Public TV
By Public TV
15 minutes ago
19 vehicles of MP CM Mohan Yadavs convoy towed after water filled in fuel tanks instead of diesel
Latest

ಮಧ್ಯಪ್ರದೇಶ ಸಿಎಂ ಬೆಂಗಾವಲು ಪಡೆಯ 19 ವಾಹನಗಳಿಗೆ ನೀರು ಮಿಶ್ರಿತ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ!

Public TV
By Public TV
54 minutes ago
Sudeep
Cinema

ನಟ ನಾಗಾರ್ಜುನ್ ರೀತಿಯಲ್ಲೇ ಸುದೀಪ್ ವಾಪಸ್ಸು

Public TV
By Public TV
1 hour ago
Crime
Crime

2,000 ರೂ.ಗೆ ಸೆಕ್ಸ್ ಲೈವ್‌ಸ್ಟ್ರೀಮ್ – ಹೆಣ್ಣು ಮಕ್ಕಳಿಬ್ಬರ ಕಾಲೇಜು ಫೀಸ್‌ ಕಟ್ಟಲಾಗದೇ ಕೃತ್ಯಕ್ಕಿಳಿದಿದ್ದ ದಂಪತಿ

Public TV
By Public TV
1 hour ago
KSRTC BIRTHDAY
Districts

ಚಲಿಸುತ್ತಿದ್ದ ಸಾರಿಗೆ ಬಸ್‍ನಲ್ಲೇ ಕಂಡಕ್ಟರ್ ಬರ್ತ್‍ಡೇ ಸೆಲೆಬ್ರೇಷನ್ – ನೆಟ್ಟಿಗರ ಆಕ್ರೋಶ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?