ನಾನೊಬ್ನೇ ಇದ್ದಾಗ ಬೇಕಿದ್ರೆ ಚಪ್ಲಿಯಿಂದ ಹೊಡೀರಿ: ನಾರಾಯಣಗೌಡ

Public TV
1 Min Read
MND NARAYANAGOWDA

– ಕೆ.ಆರ್.ಪೇಟೆಗೆ ಬರೋಕೆ ಮಗಳು ಹೆದರುತ್ತಾಳೆ

ಮಂಡ್ಯ: ನಾನು ಒಬ್ಬನೇ ಇದ್ದಾಗ ಬೇಕಿದ್ದರೆ ಚಪ್ಪಲಿಯಿಂದ ಹೊಡೀರಿ ಎಂದು ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹೇಳಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಮಾತನಾಡಿ ಅವರು, ಕೆ.ಆರ್.ಪೇಟೆಯಲ್ಲಿ ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ಜೆಡಿಎಸ್‍ನವರು ನನ್ನ ಮೇಲೆ ಚಪ್ಪಲು ತೂರಿದ್ದಾರೆ. ಆಗ ನನ್ನ ಕುಟುಂಬವಿತ್ತು. ಒಂದು ವೇಳೆ ನಾವು ಗುಂಪಿನ ಕಡೆಗೆ ಹೋಗಿದ್ದರೆ ಪರಿಸ್ಥಿತಿ ಎಲ್ಲಿಗೆ ಹೋಗುತ್ತಿತ್ತು. ಇದರಿಂದ ನನ್ನ ಮಗಳು ತುಂಬಾ ಭಯಗೊಂಡಿದ್ದಾಳೆ. ಕೆ.ಆರ್.ಪೇಟೆಗೆ ಬರಲು ಹೆದುರುತ್ತಿದ್ದಾಳೆ ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಕ್ಕಡದಲ್ಲಿ ಹೊಡೆದ್ರು, ದೇವರಾಜು ಅದನ್ನ ಅನುಭವಿಸಲೇ ಬೇಕು: ನಾರಾಯಣಗೌಡ ಆಕ್ರೋಶ

Narayana Gowda Nominattion

ನಾಮಪತ್ರ ಸಲ್ಲಿಸುವ ದಿನ ತಹಶೀಲ್ದಾರ್ ಕಚೇರಿಗೆ ಚಿನಕುರುಳಿ, ಪಾಂಡವಪುರ, ಚನ್ನರಾಯಪಟ್ಟಣದಿಂದ ಜನರು ಬಂದಿದ್ದರು. ಹೊಡೆಯುವುದಾದರೆ ನಾನು ಒಬ್ಬ ಇದ್ದಾಗ ಬಂದು ಹೊಡೆಯಲಿ, ಫ್ಯಾಮಿಲಿ ಇದ್ದಾಗ ಈ ರೀತಿ ಮಾಡುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಜೆಡಿಎಸ್ ಕೋಟೆ ಛಿದ್ರ ಮಾಡಲು ನಾರಾಯಣಗೌಡ ಮಾಸ್ಟರ್ ಪ್ಲಾನ್!

ಪಾಂಡವಪುರದ ಕೆಲವರು ಫೋನ್ ಮಾಡಿ ಹುಡುಗರು ಬೇಕಾ ಅಂತ ಕೇಳುತ್ತಿದ್ದರು. ಆದರೆ ನಾನು ಬೇಡ ಎಂದು ತಿಳಿಸುತ್ತಿದ್ದೆ. ಏಕೆಂದರೆ ಕೆ.ಆರ್.ಪೇಟೆ ಉಪ ಚುನಾವಣೆ ಶಾಂತಿಯುತವಾಗಿ ನಡೆಯಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು ಎಂದು ನಾರಾಯಣಗೌಡ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *