ಪಾವಗಡ ಸೋಲಾರ್ ಪಾರ್ಕ್ ಪ್ರಕರಣವನ್ನು CBIಗೆ ಒಪ್ಪಿಸಿ- ಬೊಮ್ಮಾಯಿಗೆ ಡಿಕೆಶಿ ಸವಾಲು

Public TV
1 Min Read
BASAVARAJ BOMMAI DK SHIVAKUMAR

ನವದೆಹಲಿ: ಪಾವಗಡ ಸೋಲಾರ್ ಪಾರ್ಕ್ (Pawagada Solar Park) ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (CBI)ಗೆ ಒಪ್ಪಿಸಿ ಎಂದು ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.

solar park 1

ಇಡಿ ಅಧಿಕಾರಿಗಳ ಮುಂದೆ ಹಾಜರಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ (DK Shivakumar), ಯಾಕೆ ನಿವೃತ್ತ ಜಡ್ಜ್ ಸಿಬಿಐಗೆ ಒಪ್ಪಿಸಿ. ತಪ್ಪಾಗಿದ್ದರೇ ನನ್ನ ಗಲ್ಲಿಗೇರಿಸಿ. ಅತ್ಯುತ್ತಮ ಪ್ರಾಜೆಕ್ಟ್ ಅಂತ ಮೋದಿ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿ, ಸರ್ಟಿಫಿಕೇಟ್ ಕೊಟ್ಟಿದೆ. ದೇಶಕ್ಕೆ ಮಾದರಿ ಅಂತ ಮೋದಿ (Narendra Modi) ಸರ್ಕಾರ ಹೇಳಿದೆ ಎಂದರು.

narendra modi 2

ಯಾವ ಪ್ರಕರಣದಲ್ಲಿ ಸಮನ್ಸ್ ನೀಡಿದ್ದಾರೆ ಗೊತ್ತಿಲ್ಲ. ಸಮನ್ಸ್ ನಿಂದ ವಿನಾಯಿತಿ ಕೋರಿ ಮನವಿ ಮಾಡಿದ್ದೆವು. ನಾವು ಸಾರ್ವಜನಿಕ ಜೀವನದಲ್ಲಿರುವವರು. ಶಾಸಕ ಮತ್ತು ಸಂಸದರಾಗಿರುವವರು ಕಾನೂನು ಪಾಲಿಸುವ ನಾಗರಿಕರಾಗಿದ್ದೇವೆ. ಆದರೆ ನಮ್ಮ ಮನವಿಯನ್ನ ತಿರಸ್ಕರಿಸಿ ಹಾಜರಾಗಲು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಭಾರತ್ ಜೋಡೋ ಯಾತ್ರೆ (Bharat Jodo Yatre) ಮೊಟಕುಗೊಳಿಸಿ ವಿಚಾರಣೆಗೆ ಇಂದು ಆಗಮಿಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ:  ಇಡಿ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡ್ತೀವಿ – ಡಿಕೆಶಿ

ಬೇರೊಬ್ಬ ತನಿಖಾಧಿಕಾರಿ ಈ ಬಾರಿ ಸಮನ್ಸ್ ಮಾಡಿದ್ದಾರೆ. ಸಮನ್ಸ್ ಯಾವುದಕ್ಕೆ ಅಂತ ಗೊತ್ತಿಲ್ಲ. ಯಂಗ್ ಇಂಡಿಯಾಕೆ ದೇಣಿಗೆ ನೀಡಿರೊ ಬಗ್ಗೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಳೆದ ಬಾರಿ ಕೂಡ ಯಂಗ್ ಇಂಡಿಯಾ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಬಾರಿ ತನಿಖಾಧಿಕಾರಿ ಬದಲಾಗಿರುವುದರಿಂದ ಪ್ರಕರಣ ಯಾವುದೆಂದು ಸ್ಪಷ್ಟತೆ ಇಲ್ಲ ಎಂದು ಹೇಳಿ ಡಿಕೆಶಿ ಇಡಿ ಕಚೇರಿಯೊಳಗೆ ತೆರಳಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *