ಕೋಟಿ ಚೆನ್ನಯರ ತವರು ಮನೆ ಗೆಜ್ಜೆಗಿರಿಯಲ್ಲಿ ವಿಸ್ಮಯ

Public TV
1 Min Read
mng hejje

ಮಂಗಳೂರು: ತುಳುನಾಡಿನ ವೀರ ಪುರುಷರೆಂದು ಆರಾಧಿಸಿಕೊಂಡು ಬರುತ್ತಿರುವ ಕೋಟಿ-ಚೆನ್ನಯರ ತವರು ಮನೆ ಎಂದು ಗುರುತಿಸಿಕೊಂಡಿರುವ ಪುತ್ತೂರಿನ ಗೆಜ್ಜೆಗಿರಿ ನಂದಲ ಹಿತ್ತಲಿನಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಮನೆ ಮಾಡಿದೆ.

ಕೋಟಿ-ಚೆನ್ನಯರ ತಾಯಿ ದೇಯಿ ಬೈದೆದಿ, ಭಾವ ಸಾಯನ ಬೈದ್ಯ ಹಾಗೂ ಕೋಟಿ-ಚೆನ್ನಯರ ಸಾನಿಧ್ಯಗಳ ಗುಡಿಯನ್ನು ಇಲ್ಲಿ ನೂತನವಾಗಿ ನಿರ್ಮಿಸಲಾಗಿದೆ. ಬ್ರಹ್ಮಕಲಶೋತ್ಸವ ನಡೆಯುವ ಸಂದರ್ಭದಲ್ಲೇ ಈ ಸ್ಥಳದಲ್ಲಿ ವಿಸ್ಮಯವೊಂದು ನಡೆದಿದೆ. ಸಾಯನ ಬೈದ್ಯ ಗುರು ಪೀಠದ ಬಳಿ ಹಾಕಲಾಗಿದ್ದ ಅರ್ಧ ನಾರೀಶ್ವರ ಚಂದ್ರಮಂಡಲದ ರಂಗೋಲಿ ಮೇಲೆ ಪುಟ್ಟ ಮಕ್ಕಳ ಎಂಟು ಹೆಜ್ಜೆಗಳು ಪತ್ತೆಯಾಗಿವೆ.

WhatsApp Image 2020 03 02 at 5.47.53 PM e1583155670380

ಸತ್ಯ ಧರ್ಮ ಚಾವಡಿಯ ಬಳಿ ಪುರೋಹಿತರು ಈ ಚಂದ್ರಮಂಡಲವನ್ನು ಬಿಡಿಸಿ ಆ ಕೋಣೆಗೆ ಬಾಗಿಲು ಹಾಕಿ ಹೋಗಿದ್ದರು. ಸಂಜೆ ವೇಳೆಗೆ ಕೋಣೆಯ ಬಾಗಿಲು ತೆಗೆದ ಸಂದರ್ಭದಲ್ಲಿ ಈ ಪವಾಡ ಕಂಡು ಬಂದಿದೆ ಎನ್ನಲಾಗಿದೆ. ಚಂದ್ರ ಮಂಡಲದ ಮೇಲೆ ಪುಟ್ಟ ಮಕ್ಕಳ ಹೆಜ್ಜೆ ಗುರುತು ಹೇಗೆ ಬಂದಿದೆ ಎನ್ನುವ ಆಶ್ಚರ್ಯ ಎಲ್ಲರನ್ನೂ ಕಾಡಿದೆ. ಒಂದು ವೇಳೆ ಪುಟ್ಟ ಮಕ್ಕಳು ಈ ಚಂದ್ರಮಂಡಲದ ಮೇಲೆ ನಡೆದಿದ್ದೇ ಆದಲ್ಲಿ ರಂಗೋಲಿಯಿಂದ ಬಿಡಿಸಿದ ಚಂದ್ರಮಂಡಲ ಸಂಪೂರ್ಣ ಅಸ್ತವ್ಯಸ್ತವಾಗುತ್ತಿತ್ತು. ಆದರೆ ಚಂದ್ರಮಂಡಲ ಇದ್ದ ಹಾಗೇ ಇದ್ದು, ಪುಟ್ಟ ಮಕ್ಕಳ ಹೆಜ್ಜೆ ಗುರುತು ಹೇಗೆ ಬಂತು ಎನ್ನುವ ಬಗ್ಗೆ ಚರ್ಚೆಗಳು ಆರಂಭವಾಗತೊಡಗಿದೆ.

ಕೋಟಿ-ಚೆನ್ನಯರು ತಮ್ಮ ಇರುವಿಕೆಯನ್ನು ಕ್ಷೇತ್ರದಲ್ಲಿ ತೋರಿಸಿಕೊಟ್ಟಿದ್ದಾರೆ ಎನ್ನುವ ಮಾತುಗಳೂ ಇದೀಗ ಹರಿದಾಡಲಾರಂಭಿಸಿದೆ.

Share This Article
Leave a Comment

Leave a Reply

Your email address will not be published. Required fields are marked *