ಸಭೆಗೆ ಕೋಟಾ ಶ್ರೀನಿವಾಸ ಪೂಜಾರಿ ಗೈರು- ಕಾದು ಸುಸ್ತಾದ ಅಧಿಕಾರಿಗಳು

Public TV
1 Min Read
madikeri poojari 2

ಮಡಿಕೇರಿ: ದಸರಾ ಹಾಗೂ ತಲಕಾವೇರಿ ಜಾತ್ರಾ ಮಹೋತ್ಸವ ಸಭೆಗೆ ಹಾಜರಾಗದ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗಾಗಿ ಸಭೆಯಲ್ಲಿ ಕಾದು ಅಧಿಕಾರಿಗಳು ಸುಸ್ತಾಗಿ ಆಕ್ರೋಶ ವ್ಯಕ್ತಪಡಿಸಿದರು.

madikeri poojari 4

ನಾಡಹಬ್ಬ ದಸರಾ ಕಾರ್ಯಕ್ರಮದ ಬಗ್ಗೆ ಈಗಾಗಲೇ ಮೈಸೂರಿನಲ್ಲಿ ತಯಾರಿ ನಡೆಸುಲಾಗುತ್ತಿದೆ. ಇತ್ತ ಮಡಿಕೇರಿ ದಸರಾ ಆಚರಣೆಗೆ ಮೂಡಿರುವ ಗೊಂದಲದ ಬಗ್ಗೆ ಹಾಗೂ ದಸರಾ ಅಚರಣೆ ಈ ಬಾರಿ ಸರಳ ರೀತಿ ಅಥವಾ ವಿಜೃಂಭಣೆಯಿಂದ ಮಾಡಬೇಕಾ ಎಂದು ಚರ್ಚೆ ನಡೆಸಲು ಸಭೆ ಕರೆಯಲಾಗಿತ್ತು. ಇದನ್ನೂ ಓದಿ: ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ – ಜಾಮೀನು ಅರ್ಜಿ ಸಲ್ಲಿಸಿದ ಎರಡನೇ ಆರೋಪಿ ಅಂಬಿಕಾ

madikeri poojari 1

ಈ ಸಂಬಂಧ ಇಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅಧ್ಯಕ್ಷತೆಯಲ್ಲಿ, ಮಡಿಕೇರಿ ನಗರದ ಜಿಲ್ಲಾ ಪಂಚಾಯತ್ ಸಂಭಾಗಣದಲ್ಲಿ ದಸರಾ ಹಬ್ಬ ಅಚರಣೆ ಬಗ್ಗೆ ಮತ್ತು ಅದರ ರೂಪುರೇಷೆಗಳ ಚರ್ಚೆ ಮಾಡಲು ಇಂದು ಮಧ್ಯಾಹ್ನ ಮೂರು ಗಂಟೆಗೆ ಸಭೆ ಆಯೋಜಿಸಲಾಗಿತ್ತು.

Kota Srinivasa Poojary

ಈ ಹಿನ್ನೆಲೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಬೇಕಾದ ಸಚಿವ ಶ್ರೀನಿವಾಸ ಪೂಜಾರಿ ನಾಲ್ಕು ಗಂಟೆ ಆದ್ರೂ ಸಭೆಗೆ ಆಗಮಿಸಲ್ಲೇ ಇಲ್ಲ. ಇದರಿಂದಾಗಿ ಇಲಾಖೆಯ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊಲೆ ಮಾಡಿ ಪೀಸ್ ಪೀಸ್ ಮಾಡಿ ನದಿಗೆ ಎಸೆಯಬೇಕು ಅನ್ನೋ ಆಡಿಯೋ ಬಯಲು

 

Share This Article
Leave a Comment

Leave a Reply

Your email address will not be published. Required fields are marked *