ಕೊಪ್ಪಳದ ಮಹಿಳೆಗೆ ಸೌದಿಯಲ್ಲಿ ಕಿರುಕುಳ- ಪತ್ನಿಯ ರಕ್ಷಣೆ ಕೋರಿ ಸಂಸದರ ಮೊರೆ ಹೋದ ಪತಿ

Public TV
1 Min Read
KPL 3

ಕೊಪ್ಪಳ: ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ಹೋಗಿರುವ ಕೊಪ್ಪಳದ ಮಹಿಳೆಯೊಬ್ಬರನ್ನ ಅಲ್ಲಿನ ಕೆಲವರು ಗೃಹಬಂಧನದಲ್ಲಿರಿಸಿ ಕಿರುಕುಳ ನೀಡ್ತಿರೋ ಮಾಹಿತಿ ಬಯಲಾಗಿದೆ.

ಕೊಪ್ಪಳದ ಬಾಬಾ ಜಾನ್ ಎಂಬವರ ಪತ್ನಿ ಚಾಂದ್ ಸುಲ್ತಾನ್ ಎಂಬ ಮಹಿಳೆ ಸೌದಿಯಲ್ಲಿ ತೊಂದರೆಗೆ ಒಳಗಾಗಿದ್ದಾರೆ. ಮಹಿಳೆಯೇ ತಮ್ಮ ಪತಿಗೆ ಫೋನ್ ಕರೆ ಮಾಡಿ ಕಿರುಕುಳಕ್ಕೆ ಒಳಗಾಗಿರುವ ಬಗ್ಗೆ ಮಾಹಿತಿ ನೀಡಿದ್ದು, ಇದೀಗ ಕುಟುಂಬ ಕಂಗಾಲಾಗಿದೆ.

ಶಿಕ್ಷಕಿ ಕೆಲಸಕ್ಕೆಂದು ನಂಬಿಸಿ ಚಾಂದ್ ಸುಲ್ತಾನಾರನ್ನ ಸೌದಿಗೆ ಕರೆದೊಯ್ಯಲಾಗಿತ್ತು. ಆದ್ರೆ ಇದೀಗ ಬೇರೆ ಕೆಲಸ ಮಾಡುವಂತೆ ಹೇಳ್ತಿದ್ದು, ನಿರಾಕರಿಸಿದ್ದಕ್ಕೆ ಕೊಠಡಿಯಲ್ಲಿ ಕೂಡಿ ಹಾಕಿ ಕಿರುಕುಳ ನೀಡಲಾಗುತ್ತಿದೆ ಎಂಬುವುದಾಗಿ ತಿಳಿದುಬಂದಿದೆ.

ಚಾಂದ್ ಸುಲ್ತಾನ್ ಅವರಿಗೆ ದಿನಕ್ಕೊಂದು ಬ್ರೆಡ್ ಮಾತ್ರ ಎಸೆಯುತ್ತಾರಂತೆ. ಇದೀಗ ತಮ್ಮ ಪತ್ನಿಯನ್ನು ರಕ್ಷಿಸಿ ಸ್ವದೇಶಕ್ಕೆ ಕರೆಸಿಕೊಳ್ಳಲು ಸಹಾಯ ಮಾಡಬೇಕೆಂದು ಕೋರಿ ಸಂಸದ ಸಂಗಣ್ಣ ಕರಡಿ ಮೊರೆ ಹೋಗಿದ್ದಾರೆ ಬಾಬಾ ಜಾನ್. ಇದಕ್ಕೆ ಸ್ಪಂದಿಸಿದ ಸಂಸದ ಸಂಗಣ್ಣ, ಸಚಿವೆ ಸುಷ್ಮಾ ಸ್ವರಾಜ್ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

KPL 2 1

KPL 1

SANGANNA

Share This Article
Leave a Comment

Leave a Reply

Your email address will not be published. Required fields are marked *