ಕೊಪ್ಪಳ: ಸ್ವಚ್ಛ ಭಾರತ ಎಂದು ರಾಜಕಾರಣಿಗಳು ಫೋಟೋಗೆ ಪೋಸ್ ಕೊಟ್ಟು ಭಾಷಣದಲ್ಲಿ ಮಾರುದ್ಧ ಮಾತಾಡಿ ಕೈ ತೊಳೆದುಕೊಂಡಿದ್ದು ನೋಡಿದ್ದೇವೆ. ಆದ್ರೆ ಕೊಪ್ಪಳದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಸ್ವಯಂ ಸ್ವಚ್ಛತಾ ಆಂದೋಲನದ ಹವಾ ಸೃಷ್ಟಿಯಾಗಿದೆ.
ಕೊಪ್ಪಳದ ಗವಿ ಮಠದ ಶ್ರೀ ಅಭಿನವ ಗವಿ ಶ್ರಿಗಳು ಇದಕ್ಕೆ ಚಾಲನೆ ನಿಡಿದ್ದು ಇದರ ಪರಿಣಾಮವಾಗಿ ಇದೀಗ ಜಿಲ್ಲಾದ್ಯಂತ ಹಳ್ಳಕೊಳ್ಳ ಸೇರಿದಂತೆ ಎಲ್ಲೆಂದರಲ್ಲಿ ಸ್ವಚ್ಛತಾ ಕಾರ್ಯಗಳು ನಡೆಯುತ್ತಿವೆ. ಈ ಕಾರ್ಯದಲ್ಲಿ ಸ್ವಯಂ ಪ್ರೇರಿತವಾಗಿ ಸ್ಥಳೀಯರು ಪಾಲ್ಗೊಳ್ಳುತ್ತಿದ್ದಾರೆ. ಅದರಂತೆ ಇಂದು ಗಂಗಾವತಿಯ ದುರ್ಗಮ್ಮ ಹಳ್ಳದ ಸ್ವಚ್ಛತೆಗೆ ಹಾಸ್ಯ ದಿಗ್ಗಜ ಬಿಚಿ ಪ್ರಾಣೇಶ್ ನೇತೃತ್ವದಲ್ಲಿ ಗಂಗಾವತಿ ನೂರಾರು ಜನ ಪಾಲ್ಗೊಂಡು ಮೂರು ಕಿಮೀ ದೂರದವರೆಗೆ ಹಳ್ಳ ಸ್ವಚ್ಛಗೊಳಿಸಿದ್ದಾರೆ.
- Advertisement
ದುರ್ಗಮ್ಮ ಹಳ್ಳ ಸ್ವಚ್ಛತಾ ಸೇವಾ ಸಮಿತಿ ಮೊದಲ ಹಂತದಲ್ಲಿ ಪ್ಲಾಸ್ಟಿಕ್ ಕಚ್ಚಾವಸ್ತುಗಳನ್ನು ತೆಗೆಯಲಿದ್ದು ನಂತರ ಹಳ್ಳದ ಹೂಳು ತಗೆಯುವ ಕಾರ್ಯಕ್ಕೆ ಮುಂದಾಗಲಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಈ ಸ್ವಚ್ಛತಾ ಕಾರ್ಯದ ಟೈಂ ಟೇಬಲ್ ಸಿದ್ಧಗೊಂಡಿದೆ. ಹಳ್ಳಕ್ಕೆ ಮೇ 10 ರಂದು ಕೊಪ್ಪಳ ಅಭಿನಯ ಗವಿಶ್ರೀಗಳು ಹೂಳು ತೆಗೆಯಲು ಚಾಲನೆ ನೀಡಲಿದ್ದಾರೆ.
- Advertisement
ನಗರದ ಮಧ್ಯ ಇರುವ ಈ ಹಳ್ಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಇದನ್ನು ಒಂದು ಪ್ರವಾಸಿ ತಾಣವಾಗುವಂತೆ ಮಾಡುವುದೇ ಗುರಿಯಾಗಿದೆ. ಹಳ್ಳದ ಪಕ್ಕದಲ್ಲೇ ಇರುವ ದುರ್ಗಮ್ಮ ಗುಡಿಗೆ ಬರುವವರು ಈ ಹಳ್ಳದಲ್ಲಿ ಸ್ನಾನ ಮಾಡಿ ಬರುವಂತೆ ಆಗಬೇಕು ಎಂದು ಹಾಸ್ಯ ದಿಗ್ಗಜ ಬಿಚಿ ಪ್ರಾಣೇಶ್ ಹೇಳಿದ್ದಾರೆ.