ಪೂರ್ಣ ಬಹುಮತ ಬಂದಿದ್ದರೆ ಶ್ರೀರಾಮುಲು ಅವತ್ತೆ ಡಿಸಿಎಂ ಆಗ್ತಿದ್ರು: ದಡೇಸಗೂರ್

Public TV
1 Min Read
Basavaraj dadesugur MLA

– ಶ್ರೀರಾಮುಲು ರಾಜ್ಯಕ್ಕೆ ಮಾಸ್ ಲೀಡರ್

ಕೊಪ್ಪಳ: ಪೂರ್ಣ ಬಹುಮತ ಬಂದಿದ್ದರೆ ಸಚಿವ ಶ್ರೀರಾಮುಲು ಅವತ್ತೆ ಉಪಮುಖ್ಯಮಂತ್ರಿ ಆಗುತ್ತಿದ್ದರು ಎಂದು ಬಿಜೆಪಿ ಶಾಸಕ ಬಸವರಾಜು ದಡೇಸಗೂರ್ ಹೇಳಿದ್ದಾರೆ.

ಜಿಲ್ಲೆ ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೂರ್ಣ ಬಹುಮತ ಬರದ ಹಿನ್ನೆಲೆ ರಾಮುಲು ಡಿಸಿಎಂ ಆಗಿಲ್ಲ. ನಾವು ಬೇರೆ ಪಕ್ಷದ ಶಾಸಕರನ್ನು ಕರೆದುಕೊಂಡು ಸರ್ಕಾರ ಮಾಡಿದ ಕಾರಣ ರಾಮುಲು ಡಿಸಿಎಂ ಆಗಿಲ್ಲ ಎಂದು ತಿಳಿಸಿದರು.

Sriramulu A

ಬೇರೆ ಪಕ್ಷದ ಶಾಸಕರು ಬಂದ ಕಾರಣ ಸ್ವಲ್ಪ ಸಮಸ್ಯೆ ಆಗಿದೆ. ಮುಂಬರುವ ಉಪ ಚುನಾವಣೆ ಬಳಿಕ ವಾಲ್ಮೀಕಿ ಸಮುದಾಯಕ್ಕೆ ಒಳ್ಳೆಯದಾಗುತ್ತೆ. ಚುನಾವಣೆಯಾದ ಮೇಲೆ ನಾವು ನೀವು ಹೋಗಿ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಲು ಮನವಿ ಕೊಡೋಣ ಎಂದು ದಡೇಸಗೂರ್ ಜನರಿಗೆ ಕರೆಕೊಟ್ಟರು.

ಶ್ರೀರಾಮುಲು ರಾಜ್ಯಕ್ಕೆ ಮಾಸ್ ಲೀಡರ್, ಅವರು ಉಪಮುಖ್ಯಮಂತ್ರಿಯಾಗಬೇಕು. ಈ ವಿಚಾರದ ಬಗ್ಗೆ ಯಡಿಯೂರಪ್ಪ ಅವರು ಮಾತು ನೀಡಿದ್ದಾರೆ. ಯಡಿಯೂರಪ್ಪ ಕೊಟ್ಟ ಮಾತು ತಪ್ಪೋದಿಲ್ಲ. ಹಾಗಾಗಿ ನಾವು ನೀವು ಹೋಗಿ ಮನವಿ ಮಾಡೋಣ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *