ನಕ್ಷತ್ರದ ಕಣ್ಣುಗಳಿರುವ ಅಪ್ಪು ದೇವರ ಮಗು ಎಂದು ಹಾಡಿ ಹೊಗಳಿದ ರಜನಿಕಾಂತ್

Public TV
1 Min Read
puneeth

ಪುನೀತ್ ರಾಜ್‌ಕುಮಾರ್(Puneeth Rajkumar) ಮಾಡಿರುವ ಕಲಾಸೇವೆ ಮತ್ತು ಸಾಮಾಜಿಕ ಸೇವೆಯನ್ನ ಗುರುತಿಸಿ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಅಪ್ಪು ರಜನಿಕಾಂತ್‌ ಅವರು ಮಾತನಾಡಿದ್ದಾರೆ. ಅಪ್ಪು ಕರ್ನಾಟಕ ರತ್ನ ಕಾರ್ಯಕ್ರಮಕ್ಕೆ ರಜನಿಕಾಂತ್ ಮತ್ತು ಜ್ಯೂ.ಎನ್‌ಟಿಆರ್ ಕೂಡ ಭಾಗವಹಿಸಿದ್ದು, ಈ ವೇಳೆ ತಲೈವಾ ಅಪ್ಪು ಬಗ್ಗೆ ಹಾಡಿ ಹೊಗಳಿದ್ದಾರೆ.

puneeth rajkumar 1

ಕನ್ನಡದ ಚಿತ್ರರಂಗದ ಮಹಾನ್ ವ್ಯಕ್ತಿ ಆಗಿರುವ ಅಪ್ಪು ಇಂದು ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಮಾರಂಭಕ್ಕೆ ರಜನಿಕಾಂತ್ ಕೂಡ ಸಾಕ್ಷಿಯಾಗಿದ್ದಾರೆ. ಪುನೀತ್ ಬಗ್ಗೆ ಕಾಲಿವುಡ್ ನಟ ರಜನಿಕಾಂತ್ ಮಾತನಾಡಿದ್ದಾರೆ. ಮೊದಲಿಗೆ ಕನ್ನಡದ ಹಬ್ಬಕ್ಕೆ ಶುಭಾಶಯಗಳು ತಿಳಿಸಿ, ಪುನೀತ್ ಒಬ್ಬರು ಅಪ್ಪು ದೇವರ ಮಗುವಾಗಿದ್ದರು. ಅವರ ಆತ್ಮ ನಮ್ಮ ನಡುವೆ ಇದೆ ಎಂದಿದ್ದಾರೆ.

rajanikanth

1979ರಂದು ನಾನು ಅಪ್ಪುನ ಮೊದಲು ಚೆನ್ನೈನಲ್ಲಿ ನೋಡಿದ್ದು, ರಾಜ್‌ಕುಮಾರ್ ಜೊತೆ ಪುನೀತ್ ಕೂಡ ಶಬರಿಮಲೆಗೆ ಬರುತ್ತಿದ್ದರು. ನಕ್ಷತ್ರದ ಕಣ್ಣುಗಳಿರುವ ಅಪ್ಪುನ, ಅಣ್ಣಾವ್ರ ಹೆಗೆಲ ಮೇಲೆ ಕೂರಿಸಿಕೊಂಡು 48 ಕಿಲೋ ಮೀ. ನಡೆಯುತ್ತಿದ್ದರು. ಅಂದು ಅಪ್ಪು ಸಿನಿಮಾ ನೋಡುತ್ತೀರಾ ಎಂದು ಅಣ್ಣಾವ್ರು ಹೇಳಿದ್ದರು. ಅಪ್ಪು ಚಿತ್ರ ನೋಡಿ, 100 ದಿನ ಓಡುತ್ತೆ ಎಂದಿದ್ದೇ ಅಂದರಂತೆ ಅಪ್ಪು ಸಿನಿಮಾ 100 ದಿನ ಓಡಿತ್ತು. ನಂತರ ಪುನೀತ್‌ ನಟಿಸಿದ ಅಪ್ಪು ಸಿನಿಮಾಗೆ ನಾನೇ ಅವಾರ್ಡ್ ಕೊಟ್ಟಿದ್ದೆ ಆ ದಿನವನ್ನ ಇಂದಿಗೂ ಮರೆಯಲು ಸಾಧ್ಯವಿಲ್ಲ.

FotoJet 8

ಅಪ್ಪು ಸಾವಿನ ಸಮಯಲ್ಲಿ ಅಷ್ಟೊಂದು ಜನ ಯಾಕೆ ಬಂದರು. ಅವರ ವ್ಯಕ್ತಿತ್ವಕ್ಕೆ ಬಂದರು. ಅಪ್ಪು ಮಾಡಿರುವ ಕೆಲಸಕ್ಕೆ ಅಷ್ಟೊಂದು ಜನ ಬಂದರು, ಅವರು ಸಮಾಜಕ್ಕೆ ಆದರ್ಶವಾಗಿದ್ದರು ಎಂದು ಅಪ್ಪುನ ರಜನೀಕಾಂತ್ ಹಾಡಿಹೊಗಳಿದ್ದಾರೆ. ಈ ವೇಳೆ ಪುನೀತ್ ರಾಜ್‌ಕುಮಾರ್ ಮರಣೋತ್ತರ ಪ್ರಶಸ್ತಿಯನ್ನ ಅಶ್ವಿನಿ ಪುನೀತ್‌ಗೆ ಸರ್ಕಾರ ಪರವಾಗಿ ಸಿಎಂ ಬೊಮ್ಮಾಯಿ ಪ್ರದಾನ ಮಾಡಿದ್ದಾರೆ. ಈ ವೇಳೆ ರಜನೀಕಾಂತ್ ಜೊತೆ ಸುಧಾಮೂರ್ತಿ, ಜ್ಯೂ.ಎನ್‌ಟಿಆರ್, ರಾಜ್‌ಕುಮಾರ್ ಕುಟುಂಬ ಕೂಡ ಭಾಗಿಯಾಗಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *