Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Kolkata Horror | ಕ್ರಿಮಿನಲ್‌ ಮನಸ್ಥಿತಿ ಬರೋದು ಏಕೆ? ಮನೋವಿಜ್ಞಾನಿಗಳು ಏನ್‌ ಹೇಳ್ತಾರೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | Kolkata Horror | ಕ್ರಿಮಿನಲ್‌ ಮನಸ್ಥಿತಿ ಬರೋದು ಏಕೆ? ಮನೋವಿಜ್ಞಾನಿಗಳು ಏನ್‌ ಹೇಳ್ತಾರೆ?

Crime

Kolkata Horror | ಕ್ರಿಮಿನಲ್‌ ಮನಸ್ಥಿತಿ ಬರೋದು ಏಕೆ? ಮನೋವಿಜ್ಞಾನಿಗಳು ಏನ್‌ ಹೇಳ್ತಾರೆ?

Public TV
Last updated: August 28, 2024 2:50 pm
Public TV
Share
4 Min Read
01 3
SHARE

ಇಡೀ ದೇಶವನ್ನೇ ತಲ್ಲಣಗೊಳಿಸಿರುವ ಕೋಲ್ಕತ್ತಾ ತರಬೇತಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖೆ (Kolkata Case Investigation) ಹೊಸ ಹೊಸ ಆಯಾಮಗಳಲ್ಲಿ ನಡೆಯುತ್ತಿದ್ದು, ಹೊಸ ಹೊಸ ಸಾಕ್ಷ್ಯಗಳು ಬೆಳಕಿಗೆ ಬರುತ್ತಿವೆ.

Contents
  • ವಿಜ್ಞಾನದಲ್ಲಿ ಎಲ್ಲದಕ್ಕೂ ಉತ್ತರವಿಲ್ಲ
  • ಕೋಲ್ಡ್‌ ಬ್ಲಡ್‌ ಹಿಂದಿನ ಕಥೆ ಏನು?
  • ಪ್ರಿಫ್ರಂಟಲ್‌ ಕಾರ್ಟೆಕ್ಸ್‌ನಲ್ಲಿ ಈ ಕುಗ್ಗುವಿಕೆ ಏಕೆ ಆಗುತ್ತದೆ?
  • ಪಾಲಿಗ್ರಾಫ್‌ ಟೆಸ್ಟ್‌ ಏಕೆ ಬೇಕು?

ಕೋಲ್ಕತ್ತಾ (Kolkata) ಟ್ರೈನಿ ವೈದ್ಯೆ ರೇಪ್‌ & ಮರ್ಡರ್‌ ಕೇಸ್‌ನ ಆರೋಪಿ ಮದ್ಯ ಸೇವಿಸಿ ಆಗಾಗ್ಗೆ ಜಗಳವಾಡುತ್ತಿದ್ದ, ಸೆಕ್ಸ್‌ ವೀಡಿಯೋ ನೋಡುವ ಚಟ ಹೊಂದಿದ್ದ ಎಂಬ ಅಂಶಗಳು ತನಿಖೆಯಲ್ಲಿ ಬಯಲಾಗಿವೆ. ಆದ್ರೆ ಅದಕ್ಕಿಂತಲೂ ಕ್ರೂರವಾದ ಪ್ರಕರಣಗಳು ಉತ್ತರ ಪ್ರದೇಶದ ಬರೇಲಿಯಲ್ಲಿ ಬೆಳಕಿಗೆ ಬಂದಿತ್ತು. ಸೀರಿಯಲ್‌ ಕಿಲ್ಲರ್‌ವೊಬ್ಬ 40ಕ್ಕೂ ಹೆಚ್ಚು ವಯಸ್ಕ ಮಹಿಳೆಯರನ್ನು ಕೊಂದು ರುಂಡ-ಮುಂಡಗಳನ್ನು ಕತ್ತರಿಸಿ ಬಿಸಾಡಿದ್ದ. ಈ ಪ್ರಕರಣಗಳನ್ನು ಗಮನಿಸಿದಾಗ ಕೊಲೆಗಾರನ ಮನಸ್ಸು ಎಷ್ಟು ವಿಕೃತವಾಗಿತ್ತು ಎಂಬುದು ತಿಳಿಯುತ್ತದೆ. ಕೆಲ ಸಿನಿಮಾ, ವೆಬ್‌ಸಿರೀಸ್‌ಗಳಲ್ಲೂ (Web Series) ಇಂತಹ ಸೈಕೋ ಕಿಲ್ಲರ್‌ಗಳ ಬಗ್ಗೆ ಕಥೆ ಎಣೆಯಲಾಗಿದೆ. ಇಂತಹ ʻಕ್ರಿಮಿನಲ್‌ ಮೈಂಡ್‌ʼ (Criminal Mind) ಇರುವ ವ್ಯಕ್ತಿಗಳ ಬಗ್ಗೆ ಮನೋವಿಜ್ಞಾನಿಗಳು ಏನಂತಾರೆ ನೋಡೋಣ…

Brain Eating Amoeba

ವಿಜ್ಞಾನದಲ್ಲಿ ಎಲ್ಲದಕ್ಕೂ ಉತ್ತರವಿಲ್ಲ

ವಿಜ್ಞಾನ (Science) ಲೋಕವೆಂಬುದು ಕುತೂಹಲ, ಬಗೆದಷ್ಟು ಆಳ. ಇಲ್ಲಿ ಎಲ್ಲದಕ್ಕೂ ಉತ್ತರ ಸಿಗುವುದಿಲ್ಲ. ಕೆಲವೊಂದು ಅನುಭವಕ್ಕೆ ಬಂದಾಗಷ್ಟೇ ನಂಬಬೇಕಾಗುತ್ತದೆ, ಇಲ್ಲದಿದ್ದರೆ ಅನುಭವಕ್ಕಾಗಿ ಕಾಯಬೇಕಾಗುತ್ತೆ. ಆದಾಗ್ಯೂ ಕೆಲ ಮನೋವಿಜ್ಞಾನಿಗಳು ಮನುಷ್ಯನಲ್ಲಿ ಮಾನಸಿಕ ವಿಕೃತಿಗಳನ್ನು ಕಂಡಾಗ ಅವುಗಳನ್ನು ʻಕ್ರಿಮಿನಲ್‌ ಮೈಂಡ್‌ʼ ಅನ್ನೋ ಪದಗಳಲ್ಲಿ ಗುರುತಿಸಿ ಅಭಿಪ್ರಾಯಗಳನ್ನು ಪ್ರಕಟಿಸಿದ್ದಾರೆ. ʻಕ್ರಿಮಿನಲ್‌ ಮೈಂಡ್‌ʼ ಎಂಬ ಪದವನ್ನು ಮೊದಲಬಾರಿಗೆ 1928ರಲ್ಲಿ ಪರಿಚಯಿಸಲಾಯಿತು. ʻಜರ್ನಲ್‌ ಆಫ್‌ ಅಬ್ನಾರ್ಮಲ್‌ ಅಂಡ್‌ ಸೋಶಿಯಲ್‌ ಸೈಕಾಲಜಿʼ ಎಂಬ ಜರ್ನಲ್‌ನಲ್ಲಿ ಲೇಖನವೂ ಪ್ರಕಟವಾಯಿತು. ʻಕ್ರಿಮಿನಲ್‌ ಮೈಂಡ್‌ʼ ವ್ಯಕ್ತಿಗಳು ಕೇವಲ ಒಬ್ಬಿಬ್ಬರಿಗೆ ಮಾತ್ರವಲ್ಲ ಇಡೀ ಮಾನವ ಕುಲಕ್ಕೆ ಅಪಾಯಕಾರಿ ಎಂದು ಹೇಳಿದ್ದರು. ʻಕ್ರಿಮಿನಲ್‌ ಮೈಂಡ್‌ʼ ಎಂಬ ಪದವು ಸುಮಾರು ನೂರು ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿದ್ದರೂ, ಇಂತಹ ಕೇಸ್‌ಗಳು ವಿಜ್ಞಾನ ಲೋಕಕ್ಕೆ ಹಾಗೂ ವಿಜ್ಞಾನಿಗಳಿಗೆ ಸವಾಲಿನದ್ದಾಗಿಯೇ ಇದೆ. ಕೆಲ ವಿಜ್ಞಾನಿಗಳು ಇಂತಹ ಮಾನಸಿಕ ಸ್ಥಿತಿಯುಳ್ಳ ವ್ಯಕ್ತಿಗಳನ್ನು ಮುಂಚಿತವಾಗಿಯೇ ಗುರುತಿಸಬಹುದಾ ಅನ್ನೋ ಪ್ರಯತ್ನಕ್ಕೂ ಮುಂದಾಗಿದ್ದಾರೆ. ಅದಕ್ಕಾಗಿ ಮೆದುಳಿನ ಸ್ಕ್ಯಾನರ್‌ಗಳ ಮೊರೆ ಹೋಗಿದ್ದಾರೆ.

ತಜ್ಞರ ಪ್ರಕಾರ, ಕೆಲವೇ ಕೆಲವು ಲಕ್ಷಣಗಳನ್ನು ನೋಡಿ ಭವಿಷ್ಯದಲ್ಲಿ ಯಾರೂ ಭಯಾನಕ ಕೊಲೆಗಾರನಾಗಬಹುದು ಅಂತ ನಿರ್ಧರಿಸಲು ಸಾಧ್ಯವಿಲ್ಲ. ಏಕೆಂದರೆ ಅನೇಕ ಸನ್ನಿವೇಶಗಳಲ್ಲಿ ಒಬ್ಬ ವ್ಯಕ್ತಿ ಪ್ರಚೋದನೆಯಿಂದಾಗಿ ತಪ್ಪು ಮಾಡಿರುತ್ತಾನೆ. ಆ ತಪ್ಪನ್ನು ಮುಚ್ಚಿಹಾಕಲು ಮತ್ತೆ ಮತ್ತೆ ತಪ್ಪು ಮಾಡುತ್ತಲೇ ಇರುತ್ತಾನೆ. ಇದನ್ನು ʻಕೋಲ್ಡ್‌ ಬ್ಲಡ್‌ʼ ಎಂದೂ ಸಹ ಕರೆಯುತ್ತಾರೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ.

brain fever 1

ಕೋಲ್ಡ್‌ ಬ್ಲಡ್‌ ಹಿಂದಿನ ಕಥೆ ಏನು?

ಸಾಮಾನ್ಯವಾಗಿ ಮನೋವಿಜ್ಞಾನಿಗಳು ಹೇಳುವ ಪ್ರಕಾರ, ಕೊಲೆಗಾರನ ಮನಸ್ಥಿತಿ ಹೊಂದಿರುವ ವ್ಯಕ್ತಿಗಳಲ್ಲಿ ಮೆದುಳಿನ ಕಾರ್ಟೆಕ್ಸ್‌ ಎಂಬ ಭಾಗವು ಸಾಮಾನ್ಯ ಸ್ಥಿತಿಗಿಂತ ಕೊಂಚ ಕುಗ್ಗಿರುತ್ತದೆ. ಇದಕ್ಕೆ ಉದಾಹರಣೆಯೂ ಇದೆ. 90ರ ದಶಕದಲ್ಲಿ ನ್ಯೂರೋ ಕ್ರಿಮಿನಾಲಜಿಸ್ಟ್‌ ಅಡ್ರಿಯನ್‌ ರಯಾನ್‌ ಅವರು ಕೋಲ್ಡ್‌-ಬ್ಲಡ್‌ ಕೊಲೆಗಾರರ ಬಗ್ಗೆ ಅಧ್ಯಯನಕ್ಕೆ ಮುಂದಾಗಿದ್ದರು. ಅದಕ್ಕಾಗಿ ಅಮೆರಿಕನ್‌ ಜೈಲುಗಳಿಗೆ ತೆರಳಿದ್ದರು. ಆಗ ಕ್ಯಾಲಿಫೋರ್ನಿಯಾ ಇಂತಹ ಕೊಲೆ ಪ್ರಕಣಗಳಿಂದ ಕುಖ್ಯಾತಿಯಾಗಿತ್ತು. ಆದ್ದರಿಂದ ರಯಾನ್‌ ಅವರು ಇಂತಹವರ ಮೆದುಳಿನಲ್ಲಿರುವ ಜೀವರಾಸಾಯನಿಕ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು 40ಕ್ಕೂ ಹೆಚ್ಚು ಕೈದಿಗಳ ʻಪಾಸಿಟ್ರಾನ್‌ ಎಮಿಷನ್‌ ಟೊಮೊಗ್ರಫಿʼ (ಪಿಇಟಿ) ಟೆಸ್ಟ್‌ ಕೂಡ ನಡೆಸಿದ್ದರು. ಈ ವೇಳೆ ಮೆದುಳಿನ ಹಲವು ಭಾಗಗಳು ಕುಗ್ಗಿರುವುದು ಸ್ಕ್ಯಾನ್‌ನಲ್ಲಿ ಕಂಡುಬಂದಿತು. ರಯಾನ್‌ ತಮ್ಮ ಅಧ್ಯಯನ ವರದಿ ಬಿಡುಗಡೆ ಮಾಡಿದಾಗ ಜನರು ಆತನನ್ನು ಹುಚ್ಚ ಎಂದು ಕರೆಯಲು ಶುರು ಮಾಡಿದರು. ಕಾಲಾನಂತರದಲ್ಲಿ ಅದನ್ನು ಜನ ನಂಬತೊಡಗಿದರು. ಇದಾದ ಸ್ವಲ್ಪ ಸಮಯದ ನಂತರ ʻದಿ ಅನ್ಯಾಟಮಿ ಆಫ್‌ ವಯಲೆನ್ಸ್‌ʼ ಎಂಬ ಪುಸ್ತಕವನ್ನು ಹೊರತಂದರು, ಅದರಲ್ಲಿ ಡಾ.ರಯಾನ್‌ ಅಪರಾಧಿಗಳ ಮನಸ್ಸಿನಲ್ಲಿ ತಮ್ಮ 35 ವರ್ಷಗಳ ಅನುಭವವನ್ನು ದಾಖಲಿಸಿದರು.

FotoJet 4 6

ಪ್ರಿಫ್ರಂಟಲ್‌ ಕಾರ್ಟೆಕ್ಸ್‌ನಲ್ಲಿ ಈ ಕುಗ್ಗುವಿಕೆ ಏಕೆ ಆಗುತ್ತದೆ?

ವಿಜ್ಞಾನಿಗಳ ಪ್ರಕಾರ, ಇದಕ್ಕೆ ಹಲವು ಕಾರಣಗಳಿರಬಹುದು. ಆನುವಂಶಿಕವು ಆಗಿರಬಹುದು, ಕೆಲವೊಮ್ಮೆ ತಲೆಗೆ ಆಳವಾದ ಪೆಟ್ಟಾಗುವುದರಿಂದ, ಬಾಲ್ಯದಲ್ಲಿ ದೌರ್ಜನ್ಯಕ್ಕೆ ಒಳಗಾದವರು, ಕಷ್ಟದಿಂದ ಜೀವನ ನಡೆಸಿದವರಿಗೂ ಈ ರೀತಿ ಸಂಭವಿಸಬಹುದು. ಆದ್ರೆ ಸರಣಿ ಕೊಲೆಗಾರರ ಸ್ಥಿತಿ ಕೊಂಚ ವ್ಯತ್ಯಾಸ ಇರುತ್ತದೆ. ಅದರೂ ಅವರ ಆಲೋಚನೆ, ತಿಳಿವಳಿಕೆ ಹಾಗೂ ಒತ್ತಡಕ್ಕೆ ಒಳಗಾದ ಸನ್ನಿವೇಶಗಳು ಇವೆಲ್ಲವೂ ಅವರ ಮನಸ್ಥಿತಿಗೆ ಕಾರಣವಾಗಿರುತ್ತದೆ. ಅಂತಹವರು ತಮ್ಮ ಬಗ್ಗೆ ಬಿಟ್ಟು ಯಾರೊಬ್ಬರ ಬಗ್ಗೆಯೂ ಚಿಂತಿಸುವುದಿಲ್ಲ. ಒಂದು ವೇಳೆ ತಮ್ಮ ಮಾನಸಿಕ ಸ್ಥಿತಿಗೆ ತೊಂದರೆಯಾದ್ರೆ, ಪ್ಲ್ಯಾನ್‌ ಮಾಡಿ ಕೊಲೆ ಮಾಡುತ್ತಾರೆ. ಜೊತೆಗೆ ಕೊಲೆಯ ಪಶ್ಚಾತಾಪವೂ ಅವರಿಗೆ ಕಾಡುವುದಿಲ್ಲ, ಕೊಲೆ ಮಾಡಿರುವುದಾಗಿ ತಾವೇ ಒಪ್ಪಿಕೊಳ್ಳುತ್ತಾರೆ. ಇದೇ ರೀತಿ ಕೋಲ್ಕತ್ತಾ ಟ್ರೈನಿ ವೈದ್ಯೆ ರೇಪ್‌ & ಮರ್ಡರ್‌ ಆರೋಪಿ ಸಂಜಯ್‌ ರಾಯ್‌ ಪ್ರಕರಣದಲ್ಲೂ ಆಗಿದೆ ಎಂದು ಹೇಳಲಾಗಿದೆ.

polygraph test

ಪಾಲಿಗ್ರಾಫ್‌ ಟೆಸ್ಟ್‌ ಏಕೆ ಬೇಕು?

ಸುಳ್ಳುಪತ್ತೆ ಮಾಡುವಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಕಾಣುತ್ತೆ ಎನ್ನುವ ಬಗ್ಗೆ ಇಲ್ಲಿ ಒಂದಿಷ್ಟು ಮಾಹಿತಿ ನೀಡಲಾಗಿದೆ. ಈ ಪರೀಕ್ಷೆಯನ್ನು ಸಾಮಾನ್ಯವಾಗಿ, ಅಪರಾಧ ಪ್ರಕರಣದಲ್ಲಿ ಆರೋಪಿಗಳ ಮೇಲೆ ಮಾಡಲಾಗುತ್ತದೆ. ಆರೋಪಿ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದರೆ, ಆತನ ಮೇಲೆ ಸಿಕ್ಕಾಪಟ್ಟೆ ಡೌಟ್​ ಇದ್ದಾಗ ಇಂಥ ಪರೀಕ್ಷೆಯನ್ನು ನಡೆಸಲಾಗುತ್ತದೆ. ಹಾಗೆಂದು ಎಲ್ಲಾ ಆರೋಪಿಗಳ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ. ಏಕೆಂದರೆ, ಸುಪ್ರೀಂ ಕೋರ್ಟ್​ ತೀರ್ಪಿನ ಅನ್ವಯ ಇಂಥ ಪರೀಕ್ಷೆಗೆ ಒಳಪಡುವ ಮೊದಲು ಆರೋಪಿ ಇದಕ್ಕೆ ಒಪ್ಪಿಗೆ ಸೂಚಿಸುವುದು ಕಡ್ಡಾಯ. ಒಂದು ವೇಳೆ ಆರೋಪಿ ಈ ಪರೀಕ್ಷೆಗೆ ಒಳಗಾಗಲು ಒಪ್ಪಿಗೆ ಸೂಚಿಸದೇ ಹೋದರೆ, ಆಗಲೂ ಪರೀಕ್ಷೆ ಮಾಡಿದರೆ, ಭಾರತೀಯ ಸಂವಿಧಾನದ ಆರ್ಟಿಕಲ್ 20(3) ಪ್ರಕಾರ ಅದು ಕಾನೂನು ವಿರೋಧಿ ಆಗುತ್ತದೆ.

TAGGED:Criminal MindKolkata DoctorsKolkata HorrorscienceWest Bengalಕೋಲ್ಕತ್ತಾಕೋಲ್ಕತ್ತಾ ಟ್ರೈನಿ ವೈದ್ಯೆ ಕೇಸ್‌ಕೋಲ್ಕತ್ತಾ ಡಾಕ್ಟರ್‌ಮನೋವಿಜ್ಞಾನಿ
Share This Article
Facebook Whatsapp Whatsapp Telegram

Cinema news

Akhil Viswanath Malayalam film
ಮಲಯಾಳಂ ನಟ ಅಖಿಲ್ ವಿಶ್ವನಾಥ್ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ – ಆತ್ಮಹತ್ಯೆ ಶಂಕೆ
Cinema Latest South cinema Top Stories
Dhurandhar Movie
ದುರಂಧರ್ ಚಿತ್ರ ಕಂಡು ಕಣ್ಣು ಕೆಂಪು ಮಾಡಿಕೊಂಡ ಪಾಕಿಸ್ತಾನ..ಏನ್ ಕಾರಣ?
Cinema Latest Top Stories
Premi Movie 2
`ಪ್ರೇಮಿ’ಗಾಗಿ ಮೊದಲ ಹಾಡು ಬಿಡುಗಡೆ
Cinema Latest Sandalwood
MB Khazima
ವಿಶ್ವ ಚಾಂಪಿಯನ್ ಖಾಜಿಮಾ ಬಯೋಪಿಕ್‌ಗೆ ಚಾಲನೆ
Cinema Latest Sandalwood South cinema Top Stories

You Might Also Like

Davanagere ZP CEO
Davanagere

ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಬಳಿಕವೇ ಕಚೇರಿ ಕೆಲಸ – ಜನ ಸೇವೆಗೆ ಅಧಿಕಾರಿ ಪಣ

Public TV
By Public TV
11 minutes ago
cow theft in koppa chikkamagaluru outrage from hindu activists
Chikkamagaluru

ಹೈಟೆಕ್ ಕಾರಿನಲ್ಲಿ ಗೋ ಕಳ್ಳತನ – ಹಿಂದೂ ಕಾರ್ಯಕರ್ತರಿಂದ ಸಿನಿಮಾ ಶೈಲಿಯಲ್ಲಿ ಚೇಸ್!

Public TV
By Public TV
43 minutes ago
coffee worth thousands of rupees stolen 6 arrested in hassan beluru
Crime

ಕಾಫಿ ಬೆಳೆಗಾರನಿಗೆ ಥಳಿಸಿ ಕಳ್ಳತನ – 6 ಮಂದಿ ಅರೆಸ್ಟ್

Public TV
By Public TV
1 hour ago
elephant mundagod
Latest

ಮುಂಡಗೋಡಿನ ಕಾತೂರಿನಲ್ಲಿ ಆನೆ ಪ್ರತ್ಯಕ್ಷ; ಗಂಟೆಗಟ್ಟಲೇ ರಸ್ತೆ ಬಂದ್

Public TV
By Public TV
1 hour ago
US Shooting
Crime

ಅಮೆರಿಕದಲ್ಲಿ ಎಂಜಿನಿಯರಿಂಗ್‌ ಪರೀಕ್ಷೆ ವೇಳೆ ಗುಂಡಿನ ದಾಳಿ; ಇಬ್ಬರು ಸಾವು, 8 ಮಂದಿಗೆ ಗಾಯ

Public TV
By Public TV
2 hours ago
DVG SOUND AV 6
Chitradurga

ದಾವಣಗೆರೆ ಗಡಿ ಗ್ರಾಮದಲ್ಲಿ ವಿಚಿತ್ರ ಶಬ್ಧ – ಬೆಚ್ಚಿಬಿದ್ದ ಗ್ರಾಮಸ್ಥರು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?