ಕೋಲಾರ: ನಾನು ಪೇಪರ್ ಓದಿಲ್ಲ, ಟಿವಿ ನೋಡಿಲ್ಲ. ನೋಡದೆ ಕೇಂದ್ರ ಬಜೆಜ್ ಬಗ್ಗೆ ವ್ಯಾಖ್ಯಾನ ಮಾಡುವುದು ತಪ್ಪು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಇಂದು ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶನಿವಾರ ಆಗಿರುವ ಬಜೆಟ್ ಕುರಿತು ತಿಳಿದುಕೊಳ್ಳುತ್ತೇನೆ. ನನಗೆ ಟಿವಿ ನೋಡುವ ಅಭ್ಯಾಸವಿಲ್ಲ. ನಮ್ಮೂರಿಗೆ ಪೇಪರ್ ಬರುವುದಿಲ್ಲ. ನಾನು ಊರಲ್ಲಿದ್ದಾಗ ಟಿವಿ ಮತ್ತು ಪೇಪರ್ ನೋಡಲ್ಲ. ಇದರಿಂದ ಏನು ಅಂತ ಗೊತ್ತಿಲ್ಲ. ಸಾಯಂಕಾಲ ಕುಳಿತುಕೊಂಡು ನೋಡಬೇಕು ಎಂದರು.
ಯಾವುದೇ ವಿಷಯವನ್ನು ಅಧ್ಯಯನ ಮಾಡದೆ ಹೇಳುವುದು ಮೂರ್ಖತನ. ಇದೇ ವೇಳೆ ಸಚಿವ ಸಂಪುಟದ ಕುರಿತು ಕೇಳಿದಾಗ, ಅವರ ಅನುಕೂಲವಾಗುವ ಹಾಗೆ ಮಾಡಲಿ. ಸಂಪುಟ ವಿಚಾರ ಪಕ್ಷದ ಆಂತರಿಕ ವಿಚಾರ. ಒಟ್ಟಿನಲ್ಲಿ ರಾಜಕ್ಕೆ ಅನುಕೂಲವಾಗಬೇಕು ಎಂದು ತಿಳಿಸಿದರು.
ರಮೇಶ್ ಕುಮಾರ್ ಅವರು ಗ್ರಾಮದಲ್ಲಿ ಕುರಿ ಮೇಯಿಸುತ್ತಿದ್ದಾರೆ ಎಂಬ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಸಾರ್ವಜನಿಕ ಜೀವನದಲ್ಲಿ ಎಲ್ಲಕ್ಕೂ ಸಿದ್ಧವಾಗಿರಬೇಕು. ನಾನು ಯಾರು ವಿರುದ್ಧವಿಲ್ಲ. ನಾನು ಹೇಗೆ ಬದುಕುಬೇಕು ನನ್ನ ಇಷ್ಟವೆಂದು ತಿಳಿಸಿದರು. ಸುಧಾಕರ್ ಅವರಿಗೆ ಮಾತನಾಡುವ ಹಕ್ಕು ಸಂವಿಧಾನ ನೀಡಿದೆ. ಅವರು ಹೇಳುವ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯೆ ನೀಡಲ್ಲ. ನಾನು ಯಾರ ಮೇಲೆ ತೊಡೆ ತಟ್ಟಲ್ಲ, ತಲೆನ್ನು ತಟ್ಟಲ್ಲ ಎಂದರು.