ಕೋಲಾರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ದಾಯಾದಿಗಳಿಬ್ಬರು ಕೋಲಾರ ತಾಲೂಕು ಕಚೇರಿ ಬಳಿ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.
ಆಸ್ತಿಯನ್ನು ಲಪಟಾಯಿಸಿದ ತಮ್ಮನನ್ನ ಅಣ್ಣ ಕೇಳಿದ ಹಿನ್ನೆಲೆಯಲ್ಲಿ ತಮ್ಮ ಮನಬಂದಂತೆ ಅಣ್ಣನನ್ನ ಥಳಿಸಿದ್ದಾನೆ. ಇದರಿಂದ ಅಣ್ಣನಿಗೆ ಮುಖದಲ್ಲಿ ಸಣ್ಣ ಪುಟ್ಟ ಗಾಯಗಳಾಗಿ ಬಾಯಲ್ಲಿ ರಕ್ತ ಸುರಿದಿದೆ. ಈಗ ಗಾಯಾಳು ಅಣ್ಣ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಬ್ಬರು ದಾಯಾದಿಗಳು ಕೋಲಾರ ತಾಲೂಕಿನ ಅರಳಕುಂಟೆ ಗ್ರಾಮದವರಾಗಿದ್ದು, ತಮ್ಮ ತಿಮ್ಮರಾಯ ಪಿತ್ರಾರ್ಜಿತ ಆಸ್ತಿಯನ್ನು ತಂಗಿ ಶಶಿಕಲಾಗೆ ಮೋಸ ಮಾಡಿ ಲಪಾಟಯಿಸಿದ್ದಾನೆ ಎಂಬುದು ರಾಮಕೃಷ್ಣ ಆರೋಪ. ಇಂದು ಕೋಲಾರ ತಾಲೂಕು ಕಚೇರಿ ಬಳಿ ಎದುರು ಬದರಾಗಿರುವ ಅಣ್ಣ ತಮ್ಮಂದಿರು ಜಮೀನು ವಿವಾದದ ಹಿನ್ನೆಲೆಯಲ್ಲಿ ಇಟ್ಟಿಗೆ ಕಲ್ಲುಗಳಲ್ಲಿ ಹೊಡೆದಾಡಿಕೊಂಡಿದ್ದಾರೆ.
ಈ ವೇಳೆ ಅಣ್ಣನ ರಾಮಕೃಷ್ಣನನ್ನು ಹೊಡೆದ ತಿಮ್ಮರಾಯ ಕ್ಯಾಮೆರಾ ಕಾಣಿಸುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತರೆ ಅಣ್ಣ ಮಾತ್ರ ಅಂಗಿ ಹರಿದುಕೊಂಡು ಮನಸೋ ಇಚ್ಛೆ ಅವಾಚ್ಯ ಶಬ್ದಗಳಿಂದ ಬೈದು ರಂಪಾಟ ಮಾಡಿದ್ದಾನೆ.