ಕೋಲಾರ: ಭಾರತ ದೇಶವನ್ನು ಎಲ್ಲರೂ ಕಣ್ಣು ಬಿಟ್ಟು ನೋಡುವಂತೆ ಪ್ರಧಾನಿ ಮೋದಿ ಅಭಿವೃದ್ಧಿ ಮಾಡುತ್ತಿದ್ದಾರೆ ಹಾಗಾಗಿ ಅವರ ಹೆಜ್ಜೆಯಲ್ಲಿ ಸಾಗೋಣ, ಅವರ ಸಾಧನೆಗಳನ್ನು ಹೇಳೋಣ ಎಂದು ಬಿಜೆಪಿಗೆ ಬೆಂಬಲ ನೀಡಿದ್ದೇನೆ ಎಂದು ಮುಳಬಾಗಿಲಿನಲ್ಲಿ ಪಕ್ಷೇತರ ಶಾಸಕ ಎಚ್.ನಾಗೇಶ್ ಹೇಳಿದ್ದಾರೆ.
ಇಂದಿರಾಗಾಂಧಿ ನಂತರ ದೇಶವನ್ನು ಯಾರು ಸರಿ ಮಾಡುತ್ತಾರೆ ಎಂಬ ಆತಂಕ ಇತ್ತು. ಮೋದಿ ಬಂದ ನಂತರ ದೇಶ ಸರಿಯಾಗಿದೆ. ಮೋದಿಯಂತಹ ಲೀಡರ್ ಇರುವಾಗ ನಮಗೆ, ನಮ್ಮ ದೇಶಕ್ಕೆ ಯಾವುದೇ ಭಯವಿಲ್ಲ. ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತದೆ. ಅಭಿವೃದ್ಧಿಗಾಗಿ ನಾನು ಈ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.
ಸುಭದ್ರ ಸರ್ಕಾರ ಮಾಡುವವರಿಗೆ ನನ್ನ ಬೆಂಬಲ, ಕ್ಷೇತ್ರದ ಮುಖಂಡರು, ಮತದಾರರ ನಿರ್ಧಾರದಂತೆ ಈ ಹೆಜ್ಜೆ ಇಟ್ಟಿದ್ದೇನೆ. ಯಾರು ಬ್ಲಾಕ್ ಮೇಲ್ ಮಾಡಿಲ್ಲ, ಎಲ್ಲರೂ ಪರಿಚಯ ಇರುವವರು ಹಾಗಾಗಿ ನನ್ನ ಮೇಲೆ ಯಾರು ಒತ್ತಡ ಹಾಕಿಲ್ಲ ಎಂದು ಸ್ಪಷ್ಟ ಪಡಿಸಿದರು. ಕಾಂಗ್ರೆಸ್, ಜೆಡಿಎಸ್ ನಾಯಕರಾಗಲಿ ಯಾರೂ ನನ್ನ ಸಂಪರ್ಕ ಮಾಡಿಲ್ಲ, ಡಿ.ಕೆ ಶಿವಕುಮಾರ್ ಅವರನ್ನು ನಾನು ಟಿವಿಯಲ್ಲಿ ನೋಡಿದ್ದು ಅಷ್ಟೇ ಎಂದು ತಿಳಿಸಿದರು.
ದೂರವಾಣಿ ಕದ್ದಾಲಿಕೆ ಸಾಧ್ಯತೆ ಇದೆ ಎಚ್ಚರವಾಗಿರಿ ಎಂದು ಹೇಳಿದ್ದರು. ಆದರೂ ಕೂಡ ನಾನು ನೇರವಾಗಿ ದೂರವಾಣಿಯಲ್ಲಿ ಮಾತನಾಡುತ್ತಿದ್ದೆ. ನಾನೇನು ವ್ಯವಹಾರ ಮಾಡಿಲ್ಲ, ಕಳ್ಳನು ಅಲ್ಲ. ಅತೃಪ್ತರು ನನಗೆ ಇನ್ನೂ ಸಿಕ್ಕಿಲ್ಲ. ಅವರಿಗೂ ನನಗೂ ಸಂಬಂಧ ಇಲ್ಲ. ಅವರದೆ ಒಂದು ಗ್ರೂಪ್ ನಾನೇ ಒಂದು ಗ್ರೂಪ್. ಮುಂಬೈ ವಿಚಾರ ನನಗೇನು ಗೊತ್ತಿಲ್ಲ, ಕರೆದರು ಹೋದೆ ಬಂದೆ ಅಷ್ಟೇ ಎಂದು ಹೇಳಿದರು.