Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಂಪಾಜೆ ಘಾಟಿ ಶ್ರೇಣಿಯಲ್ಲೇ ಬೆಟ್ಟಗಳು ಭಾರೀ ಕುಸಿತವಾಗಿದ್ದು ಯಾಕೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸಂಪಾಜೆ ಘಾಟಿ ಶ್ರೇಣಿಯಲ್ಲೇ ಬೆಟ್ಟಗಳು ಭಾರೀ ಕುಸಿತವಾಗಿದ್ದು ಯಾಕೆ?

Bengaluru City

ಸಂಪಾಜೆ ಘಾಟಿ ಶ್ರೇಣಿಯಲ್ಲೇ ಬೆಟ್ಟಗಳು ಭಾರೀ ಕುಸಿತವಾಗಿದ್ದು ಯಾಕೆ?

Public TV
Last updated: August 21, 2018 4:28 pm
Public TV
Share
3 Min Read
madikeri ghat sampaje 2
SHARE

ಬೆಂಗಳೂರು: ಕೊಡಗಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರೂ ಎಲ್ಲ ಕಡೆ ಯಾಕೆ ಭೂ ಕುಸಿತವಾಗಿಲ್ಲ ಎಂದು ಹಲವು ಜನ ಈಗ ಪ್ರಶ್ನೆ ಮಾಡುತ್ತಿದ್ದಾರೆ.

ದೇವರಕೊಲ್ಲಿ, ಜೋಡುಪಾಲ, ಮದೆನಾಡು, ಮುಕ್ಕೋಡ್ಲು, ಮಾದಾಪುರ ಗಾಳಿಬೀಡು ಹಮ್ಮಿಯಾಲ, ದೇವಸ್ತೂರು, ಸಂಪಾಜೆಯ ಅರೆಕಲ್ಲು, ಜೇಡ್ಲ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿದ್ದರಿಂದ ಜನ ಈಗ ಈ ಪ್ರಶ್ನೆ ಕೇಳುತ್ತಿದ್ದಾರೆ.

ಮಡಿಕೇರಿ- ಮಂಗಳೂರು ಸಂಪರ್ಕ ಕಲ್ಪಿಸುವ ಸಂಪಾಜೆ ಶ್ರೇಣಿಯಲ್ಲಿ ಬಿದ್ದ ಮಳೆಗಿಂತಲೂ ಜಾಸ್ತಿ ಮಳೆ ಪುಷ್ಪಗಿರಿ ಬೆಟ್ಟ, ಕೊಡಗಿನ ಅತಿ ಎತ್ತರ ಬೆಟ್ಟವಾದ ತಡಿಯಂಡಮೋಳು, ಬ್ರಹ್ಮಗಿರಿ ಬೆಟ್ಟ, ತಲಕಾವೇರಿ ಮುಂತಾದ ಬೆಟ್ಟದಲ್ಲಿ ಬಿದ್ದಿದೆ. ಆದರೆ ಇಲ್ಲಿ ಎಲ್ಲೂ ಆಗದ ಕುಸಿತಗಳು ಇಲ್ಲೆ ಯಾಕೆ ಆಗಿದೆ ಎನ್ನುವ ಪ್ರಶ್ನೆಗಳು ಈಗ ಎದ್ದಿದೆ.

ಈ ಪ್ರಶ್ನೆಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಉತ್ತರ ಕಂಡುಕೊಳ್ಳಬೇಕಾದರೆ ಹಲವು ದಿನಗಳು ಬೇಕಾಗಬಹುದು. ಆದರೆ ನಿರಂತರ ಭೂ ಕೊರೆತ, ಭಾರೀ ವಾಹನಗಳ ಓಡಾಟದಿಂದ ಈ ಪ್ರಮಾಣದಲ್ಲಿ ಭೂ ಕುಸಿತವಾಗಿರಬಹುದು ಎನ್ನುವುದು ಸ್ಥಳೀಯರ ಮಾತು.

madikeri ghat sampaje 1

ಭಾರೀ ಪ್ರಮಾಣದ ಓಡಾಟ ಹೇಗೆ?
ಬೆಂಗಳೂರು – ಮೈಸೂರು – ಮಡಿಕೇರಿಯಿಂದ ಬಂಟ್ವಾಳ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ 275 ಎಂದು ಘೋಷಿಸಲಾಗಿದ್ದು, ಇದರ ಕಾಮಗಾರಿ ಪೂರ್ಣವಾಗಿ ಮುಗಿದಿದ್ದು 2014ರಲ್ಲಿ. ಮೈಸೂರಿನಿಂದ- ಕುಶಾಲನಗರ, ಕುಶಾಲನಗರದಿಂದ ಸಂಪಾಜೆ, ಸಂಪಾಜೆಯಿಂದ ಬಂಟ್ವಾಳ ಹೀಗೆ ಮೂರು ಹಂತದಲ್ಲಿ ಈ ಯೋಜನೆಯನ್ನು ಮುಗಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಾಗುವ ಮೊದಲು ಈ ರಸ್ತೆಯಲ್ಲಿ ಕಡಿಮೆ ಪ್ರಮಾಣದ ವಾಹನಗಳು ಓಡಾಡುತಿದ್ದವು. ಯಾವಾಗ ಹೆದ್ದಾರಿ ಕಾಮಗಾರಿಗಳು ಮುಗಿದವೋ ಆಗ ವಾಹನಗಳ ಸಂಖ್ಯೆಯೂ ಹೆಚ್ಚಾಯಿತು. ಈ ಹಿಂದೆ ಅಪಾಯಕಾರಿ ತಿರುವುಗಳಾಗಿದ್ದ ಜಾಗ ಅಗಲವಾಗಿ ನಿರ್ಮಾಣವಾದ ಪರಿಣಾಮ ಘನವಾಹನಗಳ ಓಡಾಟ ಆರಂಭವಾಯಿತು.

ಈ ನಡುವೆ ಶಿರಾಡಿ ಘಾಟ್ ಸಂಚಾರ 6 ತಿಂಗಳು ಬಂದ್ ಆದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚರಿಸುವ ವಾಹಗಳ ಸಂಖ್ಯೆ ಹೆಚ್ಚಾಯಿತು. ಘನವಾಹನಗಳು ಸಂಪಾಜೆ, ಕೊಯನಾಡು, ಜೋಡುಪಾಲ, ಮದೆನಾಡು ಮೂಲಕ ಮಡಿಕೇರಿಗೆ ಆಗಮಿಸಿ ಮೈಸೂರಿಗೆ ತೆರಳಿದ್ದರೆ, ಇನ್ನು ಕೆಲವು ಮಡಿಕೇರಿಯ ಮೂಲಕ ಹಟ್ಟಿಹೊಳೆ, ಮಾದಾಪುರ ಮೂಲಕ ಹಾಸನಕ್ಕೆ ಓಡಾಡಿವೆ. ಭಾರೀ ವಾಹನಗಳ ಓಡಾಟದಿಂದ ಮನೆಗಳು, ಭೂಮಿ ಅಲುಗಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದರೂ ಈ ವಿಚಾರಗಳನ್ನು ಯಾರು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಘನವಾಹನಗಳ ಸಂಚಾರಕ್ಕೆ ಈ ರಸ್ತೆಯನ್ನು ಬಂದ್ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.

ಸಂಪಾಜೆ- ಮಡಿಕೇರಿ ರಸ್ತೆ ಮಧ್ಯೆ ಬಾಯಿಬಿಡುವುದು ಅಥವಾ ಕುಸಿತವಾಗುವುದು ಇದೇ ಮೊದಲೆನಲ್ಲ. 2015ರಲ್ಲಿ ಸುರಿದ ಮಳೆಗೆ ಸಂಪಾಜೆಯಿಂದ 1 ಕಿ.ಮೀ ದೂರದಲ್ಲಿರುವ ಕೊಯಿನಾಡು ಬಳಿ ಇರುವ ಸಿಂಕೋನ ಎಸ್ಟೇಟ್ ಸಮೀಪ ರಸ್ತೆ ಬಿರುಕು ಬಿಟ್ಟಿತ್ತು. ಮಳೆ ನೀರು ಹರಿಯಲು ಸರಿಯಾಗಿ ಜಾಗ ಇಲ್ಲ ಕಾರಣ ರಸ್ತೆಯ ಅಡಿಯಲ್ಲೇ ನೀರು ಹೋದ ಪರಿಣಾಮ ಕುಸಿತಗೊಂಡಿತ್ತು. ಈ ಸಮಸ್ಯೆಯಾದ ಬಳಿಕ ದುರಸ್ತಿ ಕಾರ್ಯದ ವೇಳೆ ರಸ್ತೆಯ ಅಡಿ ಭಾಗದಿಂದ ನೀರು ಹೊರಹೋಗಲು ವ್ಯವಸ್ಥೆ ಮಾಡಲಾಗಿತ್ತು. ಈಗ ಕುಸಿತಗೊಂಡ ಭಾಗದಲ್ಲಿ ರಸ್ತೆ ಚೆನ್ನಾಗಿದೆ. ಹೀಗಾಗಿ ಘಾಟಿಯಲ್ಲಿ ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮೇಲಿನಿಂದ ಬಿದ್ದ ನೀರು ರಸ್ತೆಯ ಕೆಳ ಭಾಗದಿಂದ ಹರಿದು ಹೋಗಲು ಸರಿಯಾಗಿ ವ್ಯವಸ್ಥೆ ಮಾಡದ ಕಾರಣ ಹಲವು ಕಡೆ ಕುಸಿತ ಉಂಟಾಗಿರಬಹುದು ಎನ್ನುವ ಮಾತುಗಳು ಕೇಳಿಬಂದಿವೆ.

madikeri ghat sampaje 2

(ಕೊಯಿನಾಡಿನ ಬಳಿ 2015ರಲ್ಲಿ ಕುಸಿತಗೊಂಡ ರಸ್ತೆ. ಸಾಮಾಜಿಕ ಜಾಲತಾಣದಲ್ಲಿ ಜನ ಈ ಬಾರಿ ಕುಸಿತಗೊಂಡ ಫೋಟೋದ ಜೊತೆಗೆ ಈ ಫೋಟೋವನ್ನು ಸೇರಿಸಿ ಶೇರ್ ಮಾಡುತ್ತಿದ್ದಾರೆ)

ಮೇಲೆ ತಿಳಿಸಿದ ಕಾರಣದ ಜೊತೆ ದಾಖಲೆ ಪ್ರಮಾಣದ ಮಳೆ ಕೊಡಗಿನಲ್ಲಿ ಆಗಿದೆ. ಏಪ್ರಿಲ್ ನಿಂದ ಆರಂಭಗೊಂಡ ಬಳಿ ನಿರಂತರವಾಗಿ ಸರಿಯುತ್ತಲೇ ಇದೆ. ಎಲ್ಲದರ ಪರಿಣಾಮ ಅರಣ್ಯ ನಾಶದಿಂದ ಮೊದಲೇ ಸಡಿಲಗೊಂಡಿದ್ದ ಮಣ್ಣು ಆಗಸ್ಟ್ ಮೂರನೇ ವಾರದಲ್ಲಿ ಬಿದ್ದ ಭಾರೀ ಮಳೆಗೆ ರಸ್ತೆಗೆ ಬಿದ್ದಿದೆ. ನೀರಿನ ರಭಸಕ್ಕೆ ಮರಗಳು, ರಸ್ತೆಗಳು ಕೊಚ್ಚಿಕೊಂಡು ಹೋಗಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

TAGGED:JodupalaMadenadumadikeriMangaloreMysore landslide collapsePublic TVSampageSampage Ghatiಜೋಡುಪಾಲಪಬ್ಲಿಕ್ ಟಿವಿಮಂಗಳೂರುಮಡಿಕೇರಿಮದೆನಾಡುಮೈಸೂರು ಭೂ ಕುಸಿತಸಂಪಾಜೆಸಂಪಾಜೆ ಘಾಟಿ
Share This Article
Facebook Whatsapp Whatsapp Telegram

Cinema news

allu arjun 7
ಪುಷ್ಪಾ-2 ಕಾಲ್ತುಳಿತ ಕೇಸ್ – ನಟ ಅಲ್ಲು ಅರ್ಜುನ್‌ ಸೇರಿ 23 ಮಂದಿ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಕೆ
Cinema Latest Main Post National
vijayalakshmi 1 1
`ಮಹಿಳೆ ತುಂಬಾ ಶಕ್ತಿಶಾಲಿ’ – ದರ್ಶನ್ ಪತ್ನಿ ಟಾಂಗ್‌ ಕೊಟ್ಟಿದ್ದು ಯಾರಿಗೆ?
Cinema Latest Sandalwood Top Stories
Daali Dhananjaya
ಬದುಕು ದೊಡ್ಡದು, ಎಲ್ಲಾ ಕನ್ನಡ ಸಿನಿಮಾಗಳನ್ನ ಸಂಭ್ರಮಿಸೋಣ – ಫ್ಯಾನ್ಸ್‌‌ ವಾರ್‌ ಬಗ್ಗೆ ಡಾಲಿ, ಸಪ್ತಮಿ ರಿಯಾಕ್ಷನ್‌
Belgaum Cinema Districts Karnataka Latest Main Post Sandalwood
Sudeep 1
ಮಗಳ ಬಗ್ಗೆ ಕೆಟ್ಟ ಕಾಮೆಂಟ್ಸ್ – ವೇಸ್ಟ್ ನನ್ಮಕ್ಳ ಬಗ್ಗೆ ಮಾತಾಡಿ ಟೈಮ್‌ ವೇಸ್ಟ್‌ ಮಾಡಲ್ಲ ಎಂದ ಕಿಚ್ಚ ಸುದೀಪ್‌
Cinema Latest Sandalwood Top Stories

You Might Also Like

KC Venugopal
Latest

ಕೋಗಿಲು ಲೇಔಟ್‌ನಲ್ಲಿ ಮನೆ, ಶೆಡ್‌ಗಳ ನೆಲಸಮ ವಿಚಾರಕ್ಕೆ ಕೆ.ಸಿ ವೇಣುಗೋಪಾಲ್‌ ಎಂಟ್ರಿ; ರಾಷ್ಟ್ರಮಟ್ಟದಲ್ಲಿ ಸದ್ದು!

Public TV
By Public TV
2 hours ago
Jayanagara Hospital
Bengaluru City

ರಜೆ ಕೊಟ್ಟಿಲ್ಲ ಅಂತ ರೋಗಿಗೆ ʻO+veʼ ಬದಲು ಎ ಪಾಸಿಟಿವ್ ರಕ್ತ – ಜಯನಗರ ಆಸ್ಪತ್ರೆಯಲ್ಲಿ ಸಿಬ್ಬಂದಿ ಯಡವಟ್ಟು

Public TV
By Public TV
2 hours ago
somaliand
Latest

ಸೋಮಾಲಿಲ್ಯಾಂಡ್‌ಗೆ ಸಾರ್ವಭೌಮ ರಾಷ್ಟ್ರದ ಮಾನ್ಯತೆ ಘೋಷಿಸಿದ ಇಸ್ರೇಲ್‌

Public TV
By Public TV
2 hours ago
01 15
Big Bulletin

ಬಿಗ್‌ ಬುಲೆಟಿನ್‌ 27 December 2025 ಭಾಗ-1

Public TV
By Public TV
3 hours ago
02 13
Big Bulletin

ಬಿಗ್‌ ಬುಲೆಟಿನ್‌ 27 December 2025 ಭಾಗ-2

Public TV
By Public TV
3 hours ago
Taiwan
Latest

ತೈವಾನ್‌ನಲ್ಲಿ ಮತ್ತೆ ಪ್ರಬಲ ಭೂಕಂಪ – ನೆಲಕ್ಕುರುಳಿದ ಬೃಹತ್‌ ಕಟ್ಟಡಗಳು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?