ಕನ್ನಡ ಚಿತ್ರರಂಗದಲ್ಲಿ ಜೊತೆ ಜೊತೆಯಲಿ, ಸಾರಥಿ, ನವಗ್ರಹ ಸಿನಿಮಾಗಳ ಮೂಲಕ ಸಂಚಲನ ಸೃಷ್ಟಿಸಿದ ನಿರ್ದೇಶಕ ದಿನಕರ್ ತೂಗುದೀಪ ಇದೀಗ `ಕಿಸ್’ ಚಿತ್ರದ ನಟ ವಿರಾಟ್ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇನ್ನು ಈ ಹಿಂದೆ ಪುನೀತ್ ರಾಜ್ಕುಮಾರ್ಗಾಗಿ ಹೆಣೆದಿದ್ದ ಕಥೆಯನ್ನೇ ವಿರಾಟ್ಗೆ ನಿರ್ದೇಶನ ಮಾಡ್ತಾರಾ ಎಂಬ ಸುದ್ದಿಗೆ ಇದೀಗ ಸ್ಪಷ್ಟನೆ ಸಿಕ್ಕಿದೆ.
ದಿನಕರ್ ತೂಗುದೀಪ ಮಾಡಿದ್ದು ಕೆಲವೇ ಚಿತ್ರವಾಗಿದ್ರು, ಪವರ್ಫುಲ್ ಕಥೆಯೊಂದಿಗೆ ಬೆಳ್ಳಿತೆರೆಯಲ್ಲಿ ನಿರ್ದೇಶನದ ಮೂಲಕ ಕಮಾಲ್ ಮಾಡಿದ್ದಾರೆ. ಈ ಹಿಂದೆ ಪುನೀತ್ ರಾಜ್ಕುಮಾರ್ಗಾಗಿ ಒಂದೊಳ್ಳೆ ಕಥೆಯನ್ನ ದಿನಕರ್ ಮಾಡಿದ್ರು. ಆದರೆ ಪುನೀತ್ ಅಗಲಿಕೆಯ ಆ ಸಿನಿಮಾ ಕನಸು ಕನಸಾಗೇ ಉಳಿದಿದೆ. ಇದೀಗ ದಿನಕರ್ ನಿರ್ದೇಶನದಲ್ಲಿ `ಕಿಸ್’ ಚಿತ್ರದ ನಟ ವಿರಾಟ್ ಕಾಣಿಸಿಕೊಳ್ತಿದ್ದಾರೆ. ಅಪ್ಪುಗಾಗಿ ಹೆಣೆದಿದ್ದ ಕಥೆನಾ ಇದು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ನಟಿಸಿದ ಮೊದಲ ಚಿತ್ರ `ಕಿಸ್’ ಸಿನಿಮಾದಲ್ಲೇ ತಾನೆಂತಹ ಕಲಾವಿದ ಅಂತಾ ಪ್ರೂವ್ ಮಾಡಿದ್ದ ವಿರಾಟ್ ಈಗ ಅದ್ದೂರಿ ಲವರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜತೆಗೆ ದಿನಕರ್ ನಿರ್ದೇಶನದಲ್ಲಿ ನಟಿಸುವ ಅವಕಾಶ ಕೂಡ ಗಿಟ್ಟಿಸಿಕೊಂಡಿದ್ದಾರೆ. ರಘು ನಿಡುವಳ್ಳಿ ಬರೆದ ಕತೆಗೆ ದಿನಕರ್ ನಿರ್ದೇಶನ ಮಾಡ್ತಿದ್ದಾರೆ. ಪುನೀತ್ಗಾಗಿ ದಿನಕರ್ ಕಥೆ ಬರೆದಿದ್ರು ಆ ಕಥೆ ಹಾಗೇಯೇ ಇದೆ. ಮಾಸ್ ಕಮರ್ಷಿಯಲ್ ಕಥೆಗೆ ವಿರಾಟ್ನನ್ನು ನಾಯಕನಾಗಿ ಲಾಂಚ್ ಮಾಡ್ತಿದ್ದಾರೆ. ಪುನೀತ್ಗೆ ಬರೆದ ಕಥೆಗೂ ಈ ಹೊಸ ಪ್ರಾಜೆಕ್ಟ್ಗೂ ಯಾವುದೇ ಸಂಬಂಧವಿಲ್ಲ ಎಂಬ ಸ್ಪಷ್ಣನೆ ಸಿಕ್ಕಿದೆ. ಇದನ್ನೂ ಓದಿ: ರಕ್ತಸಿಕ್ತ ಅಧ್ಯಾಯಕ್ಕೆ ನಾಯಕನಾಗಲಿದ್ದಾರಾ ನೀನಾಸಂ ಸತೀಶ್?: 20 ಕೋಟಿ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾ
View this post on Instagram
ʻಕಿಸ್ʼ ಚಿತ್ರದಲ್ಲಿ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದ ನಟ ವಿರಾಟ್, ದಿನಕರ್ ನಿರ್ದೇಶನದ ಚಿತ್ರದಲ್ಲಿ ಫುಲ್ ಮಾಸ್ ಮತ್ತು ರಗಡ್ ಲುಕ್ನಲ್ಲಿ ಕಾಣಿಸಿಕೊಳ್ತಿದ್ದಾರೆ. ಗಟ್ಟಿ ಕಥೆ ಜತೆ ಕಮರ್ಷಿಯಲ್ ಕಂಟೆಂಟ್ ಹೊತ್ತು ದಿನಕರ್ ಮತ್ತು ವಿರಾಟ್ ಮಿಂಚಲು ರೆಡಿಯಾಗಿದ್ದಾರೆ.