ಚಿಕ್ಕಮಗಳೂರು: ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದ ವೇಳೆ ಉರಗ ತಜ್ಞರನ್ನು ಹೆದರಿಸಿ ಬೃಹತ್ ಕಾಳಿಂಗ ಸರ್ಪ ದಾಳಿ ಮಾಡಲು ಮುಂದಾದ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕೆರೆಗದ್ದೆ ಗ್ರಾಮದಲ್ಲಿ ನಡೆದಿದೆ.
ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಶನಿವಾರ ಮಧ್ಯಾಹ್ನ ಕೆರೆಗದ್ದೆ ನಿವಾಸಿ ರಾಘವೇಂದ್ರ ಎಂಬವರ ಮನೆಯ ಆವರಣದ ಬಳಿ ಕಾಣಿಸಿಕೊಂಡಿತ್ತು. ಕಾಳಿಂಗ ಸರ್ಪವನ್ನು ಕಂಡು ಆತಂಕಗೊಂಡ ರಾಘವೇಂದ್ರ ಅವರು ಉರಗ ತಜ್ಞ ಹರೀಂದ್ರ ಅವರಿಗೆ ವಿಷಯ ತಿಳಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.
ಕೇರೆ ಹಾವನ್ನ ನುಂಗಿದ್ದರಿಂದ ವೇಗವಾಗಿ ಸಂಚರಿಸಲು ಸಾಧ್ಯವಾಗದೇ ಮಂದಗತಿಯಲ್ಲಿ ಕಾಳಿಂಗ ಸರ್ಪ ಸಾಗುತ್ತಿತ್ತು. ಸೆರೆಹಿಡಿಯಲು ಮುಂದಾದಾಗ ಎರಡು ಬಾರಿ ಉರಗ ತಜ್ಞರ ಮೇಲೆ ದಾಳಿ ಮಾಡಲು ಕಾಳಿಂಗ ಸೊಂಟದ ಮಟ್ಟಕ್ಕೆ ನಿಂತಿತ್ತು. ಈ ಸನ್ನಿವೇಶವನ್ನ ಕಣ್ಣಾರೆ ಕಂಡು ಸ್ಥಳೀಯರು ಕಾಳಿಂಗನ ಆಕ್ರೋಶ ಹಾಗೂ ಹರೀಂದ್ರರವರ ಧೈರ್ಯ ಎರಡನ್ನೂ ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ.
ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಕಾರ್ಯಾಚರಣೆ ನಡೆಸಿದ ಹರೀಂದ್ರ ಅವರು ಯಶಸ್ವಿಯಾಗಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.
https://www.youtube.com/watch?v=6K4M6aKoN2o
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv