ಪತ್ನಿಯನ್ನು ಕೊಂದು ಬ್ಯಾರಲ್‍ಗೆ ತುಂಬಿದ್ದವ ಅರೆಸ್ಟ್

Public TV
1 Min Read
KARAVAR MURDER

ಉತ್ತರ ಕನ್ನಡ: ಹೆಂಡತಿಯನ್ನು ಕೊಲೆ (Murder) ಮಾಡಿ ನೀರಿನ ಬ್ಯಾರಲ್‍ನಲ್ಲಿ ಮುಚ್ಚಿಟ್ಟಿದ್ದ ಆರೋಪಿಯನ್ನು ಹಳಿಯಾಳ (Haliyal) ಹಾಗೂ ರಾಮನಗರ (Ramnagar) ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

CRIME 2

ಶಾಂತಕುಮಾರಿ ಮಡಿವಾಳ (38) ಕೊಲೆಯಾದ ಮಹಿಳೆ. ತುಕಾರಾಮ್ ಮಡಿವಾಳ ಕೊಲೆ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಿನ್ ವೋಟ್ ಯಾವಾನಿಗ್ ಬೇಕು ಹೋಗು- ಬಿಜೆಪಿ ಕಾರ್ಯಕರ್ತನಿಗೆ ಚಿಂಚನಸೂರ್ ಕ್ಲಾಸ್

KARAVAR

ತುಕಾರಾಮ್ ತನಗಿಂತ ಹತ್ತು ವರ್ಷ ದೊಡ್ಡವಳಾದ ಶಾಂತಕುಮಾರಿಯನ್ನು ಮದುವೆಯಾಗಿದ್ದ. ಈ ವಿಚಾರವಾಗಿ ಅವರಿಬ್ಬರ ನಡುವೆ ಮನಸ್ತಾಪಗಳಿದ್ದವು ಎನ್ನಲಾಗಿದೆ. ಇದಲ್ಲದೆ ಆರೋಪಿ ಬೇರೆ ಹುಡುಗಿಯರೊಂದಿಗೆ ಮಾತನಾಡುತ್ತಾನೆ ಎಂದು ಶಾಂತಕುಮಾರಿ ಸಂಶಯ ವ್ಯಕ್ತಪಡಿಸಿ ಗಲಾಟೆ ಮಾಡಿದ್ದಾಳೆ. ಗಲಾಟೆಯ ಅಂತ್ಯ ಕೊಲೆಯಲ್ಲಿ ಮುಕ್ತಾಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆಯನ್ನು ಮುಚ್ಚಿಹಾಕುವ ಉದ್ದೇಶದಿಂದ ಆರೋಪಿ, ಪತ್ನಿಯ ಮೃತದೇಹವನ್ನು ನೀರಿನ ಬ್ಯಾರಲ್‍ನಲ್ಲಿ ಹಾಕಿ ಮುಚ್ಚಿಟ್ಟಿದ್ದ. ಬಳಿಕ ಪಕ್ಕದ ಮನೆಯ ಖಾನಾಪುರ (Kanapur) ಮೂಲದ ರಿಜ್ವಾನ್ ಕುಂಬಾರಿ ಎಂಬವರ ವಾಹನವನ್ನು ಬಾಡಿಗೆ ಪಡೆದು, ಸ್ನೇಹಿತ ಸಮೀರ್ ಪಂತೋಜಿ ಹಾಗೂ ಚಾಲಕ ರಿಜ್ವಾನ್ ಜೊತೆ ಸೇರಿ ಮೃತದೇಹವನ್ನು ರಾಮನಗರ ಸಮೀಪದ ಕಾಡಿಗೆ ಎಸೆಯಲು ತೆರಳಿದ್ದಾಗ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸಫಾರಿ ತೆರಳುತ್ತಿದ್ದ ವೇಳೆ ಘೇಂಡಾಮೃಗಗಳ ದಾಳಿ – 7 ಮಂದಿ ಪ್ರವಾಸಿಗರಿಗೆ ಗಾಯ

Share This Article
1 Comment

Leave a Reply

Your email address will not be published. Required fields are marked *