ಗಾಜಿಯಾಬಾದ್: ವಾರಗಳ ಹಿಂದೆ ಅಪಹರಣವಾಗಿ ಬಂಧಿಯಾಗಿದ್ದ ಟೆಕ್ಕಿಯನ್ನು ಕೊನೆಗೂ ರಕ್ಷಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಜೀವ್ ಕುಮಾರ್ ಅಪಹರಣವಾಗಿರುವ ಟೆಕ್ಕಿಯಾಗಿದ್ದು, ಇವರು ನೊಯ್ಡಾದ ಎಚ್ಸಿಇಎಲ್ ಟೆಕ್ನಾಲಜಿಸ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದರು.
ಘಟನೆ ವಿವರ:
ಕಳೆದ ಶುಕ್ರವಾರ ರಾಜೀವ್ ಅವರ ಹುಟ್ಟುಹಬ್ಬವಿದ್ದು, ಈ ಹಿನ್ನೆಲೆಯಲ್ಲಿ ಅವರು ತನ್ನ ಹುಟ್ಟುಹಬ್ಬ ಆಚರಿಸಲೆಂದು ಗುರುವಾರ ಹರಿದ್ವಾರಕ್ಕೆ ತೆರಳುತ್ತಿದ್ದರು. ಆದ್ರೆ ಅವರು ದೆಹಲಿ ಸಮೀಪದ ಗಾಜಿಯಾಬಾದ್ ನ ರಾಜ್ ನಗರದಿಂದ ಕಾಣೆಯಾಗಿದ್ದರು.
ಜನಸಂದಣಿ ಇರುವ ಪ್ರದೇಶದಲ್ಲಿ ಹರಿದ್ವಾರದ ಕಡೆ ತೆರಳುವ ಬಸ್ ಹತ್ತಲೆಂದು ರಾಜೀವ್ ಅವರು ಕ್ಯಾಬ್ ನಿಂದ ಇಳಿದ ವೇಳೆ ಅವರನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಟೆಕ್ಕಿ ಪತ್ನಿಗೆ ಪತಿ ಮೊಬೈಲ್ ನಿಂದಲೇ ಮೆಸೇಜೊಂದು ಬಂದಿದೆ. ಅದರಲ್ಲಿ ರಾಜೀವ್ ನನ್ನು ಕಿಡ್ನಾಪ್ ಮಾಡಲಾಗಿದೆ. 15 ಲಕ್ಷ ರೂ. ಹಣ ನೀಡಿದ್ರೆ ಬಿಡುಗಡೆಗೊಳಿಸುವುದಾಗಿ ತಿಳಿಸಲಾಗಿತ್ತು ಅಂತ ಪೊಲೀಸರು ತಿಳಿಸಿದ್ದಾರೆ.
Ghaziabad Police & UP Special Task Force team after an encounter with a gang of kidnappers rescued a HCL software engineer who was kidnapped on May 23 from Raj Nagar Extension for ransom; Total 3 kidnappers arrested. pic.twitter.com/IZ8MbT6XDX
— ANI UP/Uttarakhand (@ANINewsUP) June 1, 2018
ನಂತರ ಸುಮಾರು ಒಂದು ವಾರಗಳ ಕಾಲ ಪೊಲೀಸರು ರಾಜೀವ್ ಗಾಗಿ ಹುಡುಕಾಟ ನಡೆಸಿದ್ದರು. ಒಂದು ವಾರದ ಬಳಿಕ ರಾಜೀವ್ ಅವರು ಗಾಜಿಯಾಬಾದ್ ನ ಇಂದಿರಾಪುರಂ ಎಂಬ ಗ್ರಾಮದಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಗಾಜಿಯಾಬಾದ್ ಹಾಗೂ ನೊಯ್ಡಾ ಪೊಲೀಸರ ವಿಶೇಷ ತನಿಖಾ ತಂಡವೊಂದು ಧಾವಿಸಿ ರಾಜೀವ್ ಅವರನ್ನು ಅಪಹರಣಕಾರರಿಂದ ರಕ್ಷಿಸಲಾಗಿದ್ದು, ಮೂವರನ್ನು ಬಂಧಿಸಿದ್ದಾರೆ.
ರಾಜೀವ್ ಅವರನ್ನು ರಕ್ಷಿಸುವ ಮೊದಲು ಅಪಹರಣಕಾರರು ಮತ್ತು ಪೊಲೀಸರ ಮಧ್ಯೆ ಎನ್ ಕೌಂಟರ್ ನಡೆದಿದೆ. ಘಟನೆಯಿಂದ ಇಬ್ಬರು ಕಿಡ್ನಾಪರ್ಸ್ ಹಾಗೂ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಈ ಅಪಹರಣಕಾರರ ಗುಂಪು ವ್ಯಕ್ತಿಯನ್ನು ಕಿಡ್ನಾಪ್ ಮಾಡುವುದು ಇದು ಮೊದಲೇನಲ್ಲ. ಈ ಹಿಂದೆಯೂ ಈ ಗುಂಪು ಹಲವರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.