ಬಿಗ್ ಬಾಸ್ ಸೆಲಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಅರೆಸ್ಟ್!

Public TV
2 Min Read
SUNAMI

ಬೆಂಗಳೂರು: ಬಿಗ್‍ಬಾಸ್ ಸೆಲಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಅವರನ್ನು ಕಿಡ್ನಾಪ್ ಕೇಸ್ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಸುನಾಮಿ ಕಿಟ್ಟಿ ಸೇರಿ ಮೂವರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಸುನೀಲ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

KITTY

ಏನಿದು ಪ್ರಕರಣ?
ಸುನಾಮಿ ಕಿಟ್ಟಿಯ ಗೆಳೆಯ ಸುನೀಲ್ ಪತ್ನಿಯನ್ನು ತೌಶಿಕ್ ಎಂಬಾತ ಪ್ರೀತಿಸುತ್ತಿದ್ದನು. ಫೆಬ್ರವರಿ 28 ರಂದು ತೌಶಿಕ್ ತನ್ನ ಪ್ರಿಯತಮೆಯೊಂದಿಗೆ ಬಾರ್ ಗೆ ಊಟಕ್ಕೆ ಬಂದಿದ್ದನು. ಈ ವಿಚಾರ ತಿಳಿದು ಕಿಟ್ಟಿ ಗ್ಯಾಂಗ್, ಸುನೀಲ್ ಪತ್ನಿಯ ಪ್ರಿಯಕರ ಯಾರೆಂದು ತಿಳಿದುಕೊಳ್ಳಲು ಮುಂದಾಗಿದ್ದರು. ಆದ್ರೆ ಇದೇ ವೇಳೆ ತೌಶಿಕ್ ಬಾರ್ ನಿಂದ ಬಿಲ್ ಕೊಡದೇ ಗಡಿಬಿಡಿಯಲ್ಲಿ ಪರಾರಿಯಾಗಿದ್ದನು. ಈ ಪ್ರಯತ್ನದಲ್ಲಿ ಬಾರ್ ಸಪ್ಲೈಯರ್ ಗಿರೀಶ್ ನನ್ನೇ ತೌಶಿಕ್ ಎಂದು ಭಾವಿಸಿ ಕಿಟ್ಟಿ ಗ್ಯಾಂಗ್ ಕಿಡ್ನಾಪ್ ಮಾಡಿತ್ತು. ಅಲ್ಲದೇ ಹೊರಮಾವು ಬಳಿ ಸುನೀಲ್ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ಯಾ ಎಂದು ಪ್ರಶ್ನಿಸಿ ಗಿರೀಶ್ ಮೇಲೆ ಹಲ್ಲೆ ಕೂಡ ಮಾಡಿತ್ತು. ಈ ವೇಳೆ ಗಿರೀಶ್, ಸುನೀಲ್ ಯಾರು? ಅವರ ಪತ್ನಿ ಯಾರು ಎಂದು ಪ್ರಶ್ನಿಸಿದ್ರು.

GIRISH

ಕಿಟ್ಟಿ ಗ್ಯಾಂಗ್ ತೌಶಿಕ್ ಫೋಟೋ ತೋರಿಸಿದ್ದಾರೆ. ಈ ವೇಳೆ ಗಿರೀಶ್, ಇವರು ನಮ್ಮ ಬಾರ್ ಗೆ ಬರ್ತಾರೆ ಅಂತ ಹೇಳಿದ್ರು. ಅಲ್ಲದೇ ತೌಶಿಕ್ ಬಿಲ್ ಕೊಡದೇ ಹೋಗಿದ್ದನ್ನು ಕೂಡ ಗಿರೀಶ್, ಸುನಾಮಿ ಕಿಟ್ಟಿ ಮುಂದೆ ಬಾಯ್ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಿಟ್ಟಿ ಗ್ಯಾಂಗ್, ಗಿರೀಶ್ ಕೈಯಲ್ಲಿಯೇ ತೌಶಿಕ್ ಗೆ ಕರೆ ಮಾಡಿಸಿ ಬಿಲ್ ಕೊಡುವಂತೆ ಹೇಳಿಸಿತ್ತು. ಅಂತೆಯೇ ಬಿಲ್ ಕೊಡಲು ಗೊರಗುಂಟೆ ಪಾಳ್ಯದ ಸಿಗ್ನಲ್ ಬಳಿ ಬರುವುದಾಗಿ ತೌಶಿಕ್ ತಿಳಿಸಿದ್ದನು. ಈ ವೇಳೆ ಗಿರೀಶ್ ನನ್ನು ಗೊರಗುಂಟೆಪಾಳ್ಯಕ್ಕೆ ಕರೆದುಕೊಂಡು ಹೋಗಿ ಗನ್ ಇಟ್ಟಿದ್ದ ಸುನಾಮಿ ಕಿಟ್ಟಿ ಗ್ಯಾಂಗ್, ನಾವು ಹೇಳಿದಂತೆ ಕೇಳು ಎಂದು ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ.

AROPI

ಹಣ ಕೊಡಲು ಬರುತ್ತಿದ್ದಂತೆಯೇ ಕಿಟ್ಟಿ ಗ್ಯಾಂಗ್ ಗೊರಗುಂಟೆ ಪಾಳ್ಯದಲ್ಲಿ ತೌಶಿಕ್ ನನ್ನು ಕಿಡ್ನಾಪ್ ಮಾಡಿ ಬಳಿಕ ಇಬ್ಬರನ್ನು ಹೊರಮಾವು ಬಳಿಯ ತೋಟದ ಮನೆಗೆ ಕರೆದೊಯ್ದು ಹಲ್ಲೆಮಾಡಿದ್ದಾರೆಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

ಇತ್ತ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಇತರರು ಈ ಸಂಬಂಧ ದೂರು ದಾಖಲಿಸುತ್ತಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿಸಿದ ಪೊಲೀಸರು, ಬಾರ್ ನ ಸಿಸಿಟಿವಿ ಆಧರಿಸಿ, ಸುನಾಮಿ ಕಿಟ್ಟಿಯ ಫೋನ್ ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ. ಈತ ಆ ಬಾರ್ ಗೆ ಹೋಗಿ ಪ್ರತೀದಿನ ಕುಡಿಯುತ್ತಿದ್ದನು. ಆದ್ರೆ ಕಳೆದ ಎರಡು ದಿನಗಳಿಂದ ಕಿಟ್ಟಿ ಬಾರ್ ಗೆ ಹೋಗಿರಲಿಲ್ಲ. ಈ ಹಿನ್ನೆಲೆಯಲ್ಲಿಯೂ ಪೊಲೀಸರು ಕಿಟ್ಟಿ ಮೇಲೆ ಸಂಶಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಕಿಟ್ಟಿ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪದ ಮೇಲೆಯೂ ಕೇಸ್ ದಾಖಲಾಗಿದೆ.

JNABHARATHI

Share This Article
Leave a Comment

Leave a Reply

Your email address will not be published. Required fields are marked *