ಬೆಂಗಳೂರು: ಇತ್ತೀಚೆಗೆ ನಡೆದ ಪ್ರತಿಕೆಯೊಂದರ ಸಂದರ್ಶನದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಕೆಲವು ದಿನಗಳ ಹಿಂದೆ ದರ್ಶನ್ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡ ಕಿಚ್ಚ, ಈಗ ದರ್ಶನ್ ಅವರ ಬಗ್ಗೆ ಸಂದರ್ಶನವೊಂದರಲ್ಲಿ ಓಪನ್ ಆಗಿ ಮಾತನಾಡಿದ್ದಾರೆ. ನನಗೆ ಯಾವ ಬೇಸರನೂ ಇಲ್ಲ. ಯಾರೋ ಅವನ ತಲೆಗೆ ಏನೋ ತುಂಬಿದ್ದಾರೆ. ಹಾಗಾಗಿ ಆತ ಕೋಪ ಮಾಡಿಕೊಂಡಿದ್ದಾನೆ. ನನ್ನ ಪ್ರಕಾರ ಒನ್ ಸೈಡ್ ಹಿಮ್ ಈಸ್ ವೆರಿ ಸ್ವೀಟ್. ನಾನು ಸಣ್ಣ ವಯಸ್ಸಿನಿಂದಲೂ ಆತನನ್ನು ನೋಡಿದ್ದೀನಿ. ನನ್ನ ಬಗ್ಗೆ ಆತ ತುಂಬ ಪೊಸೆಸಿವ್ ಎಂದು ಹೇಳಿದ್ದಾರೆ.
- Advertisement 2
- Advertisement 3
ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ದರ್ಶನ್ಗೆ ಬೇಸರ ಆಗಿರಬಹುದು. ಆದರೆ ಅದೆಲ್ಲಾ ಅದಾಗಿ ಅದೇ ಆಗಿದ್ದು. ಆ ರೀತಿ ನೋಡಿದ್ದರೆ ಯಾರ ಮೇಲಾದರೂ ದ್ವೇಷ ಸಾಧಿಸುವುದು ಏಕೆ? ಇಲ್ಲಿ ಎಲ್ಲರೂ ಸಾಧಕರೆ. ಇಂದು ಶಿವಣ್ಣ ಹಾಗೂ ನಾನು ಚೆನ್ನಾಗಿ ಇದ್ದೀವಿ ಎಂದರೆ ಅದು ನನಗೆ ಅವರ ಮೇಲೆ ಮೊದಲಿನಿಂದಲೂ ಪ್ರೀತಿಯಿತ್ತು. ಮಧ್ಯದಲ್ಲಿ ಸ್ವಲ್ಪ ಹಾಳಾಗಿತ್ತು. ಅದು ಕೂಡ ಸತ್ಯ ಹಾಗೂ ಅದಕ್ಕೂ ಕಾರಣವಿತ್ತು ಎಂದು ಸುದೀಪ್ ಹೇಳಿದ್ರು.
- Advertisement 4
ನಮ್ಮ ಕೈಗೆ ನೋವಾದರೆ ನಾವು ಕೈ ಕತ್ತರಿಸಿ ಬಿಸಾಡುತ್ತೀವಾ? ಉಳಿಸಿಕೊಳ್ಳೋದಕ್ಕೆ ಪ್ರಯತ್ನ ಮಾಡುವುದಿಲ್ಲವಾ? ಏಕೆಂದರೆ ಅದು ಕೂಡ ನಮ್ಮ ದೇಹದ ಒಂದು ಭಾಗ ಅಲ್ಲವೇ. ಹಾಗೆಯೇ ದರ್ಶನ್ ನಾವು ಫ್ರೆಂಡ್ಸ್ ಅಲ್ಲ ಎಂದು ಟ್ವೀಟ್ ಮಾಡಿದ್ದನು. ಅದು ಆ ಕ್ಷಣದ ಸಿಟ್ಟು ಮಾತ್ರ. ಹಾಗಾಂತ ಅವನು ಕೆಟ್ಟವನಲ್ಲ. ಅವನು ಚೆನ್ನಾಗಿದ್ದಾನೆ ಹಾಗೂ ಅವನು ಕೂಡ ಒಳ್ಳೆಯ ವ್ಯಕ್ತಿ ಎಂದು ಕಿಚ್ಚ ಹೇಳಿದ್ದಾರೆ.
ಸ್ನೇಹಿತರು ಆಗಿರೋದಕ್ಕೆ ದಿನವೂ ಭೇಟಿ ಆಗಬೇಕೆಂದು ಏನಿಲ್ಲ. ಗೆಳೆಯನಿಗೆ ಒಳ್ಳೆಯದಾಗಲಿ ಎನ್ನುವ ಹಾರೈಕೆ ಮನದಲ್ಲಿದ್ದರೆ ಸಾಕು. ಅದು ಯಾವತ್ತೂ ಇರುತ್ತದೆ. ಸ್ನೇಹಿತರು ಎಂದರೆ ಯಾವಾಗಲ್ಲೂ ಒಳ್ಳೆಯದನ್ನು ಬಯಸುವವರು. ದರ್ಶನ್ ಎಂದಿಗೂ ನನ್ನ ಸ್ನೇಹಿತ. ಫ್ರೆಂಡ್ಶಿಪ್ನಲ್ಲಿ ಅಜೆಂಡಾ ಇರಬಾರದು ಹಾಗೂ ಬದುಕಿನ ತುಂಬಾ ಪ್ಲಾನ್ ಗಳೂ ಇರಬಾರದು ಎಂದು ಕಿಚ್ಚ ಸಂದರ್ಶನವೊಂದರಲ್ಲಿ ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ.