Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ನವನಾಯಕ ಆರ್ಯವರ್ಧನ್ ಕನಸಿನ ‘ಖನನ’!

Public TV
Last updated: May 2, 2019 1:23 pm
Public TV
Share
4 Min Read
KHANANA 5
SHARE

ಬೆಂಗಳೂರು: ವಿಶಿಷ್ಟವಾದ ಟೈಟಲ್ ನಿಂದಲೇ ಸಖತ್ ಸೌಂಡ್ ಮಾಡೋ ಚಿತ್ರಗಳ ಜಮಾನ ಶುರುವಾಗಿ ಒಂದಷ್ಟು ಕಾಲವೇ ಕಳೆದಿದೆ. ಅದೇ ಸಾಲಿನಲ್ಲಿ ಮೂಡಿ ಬಂದು ಬಿಡುಗಡೆಗೆ ತಯಾರಾಗಿರುವ ಚಿತ್ರ ಖನನ. ಶೀರ್ಷಿಕೆಯೇ ಇಷ್ಟು ವಿಶಿಷ್ಟವಾಗಿರುವಾಗ ಅಂಥಾದ್ದೇ ವಿಶೇಷವಾದ ಕಥೆಯನ್ನೂ ಈ ಚಿತ್ರ ಹೊಂದಿದೆ ಅಂತ ಯಾರಿಗಾದರೂ ಅನ್ನಿಸದಿರೋದಿಲ್ಲ. ನಿಜಕ್ಕೂ ಖನನ ಕನ್ನಡ ಚಿತ್ರರಂಗಕ್ಕೆ ಮೈಲಿಗಲ್ಲಾಗುವಂಥಾ ಕಥೆ, ಹೊಸತನದ ನಿರೂಪಣೆಯನ್ನ ಹೊಂದಿದೆ. ಏಕಕಕಾಲದಲ್ಲಿಯೇ ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ತಯಾರಾಗಿರೋ ಈ ಚಿತ್ರದ ಮೂಲಕವೇ ಆರ್ಯವರ್ಧನ್ ನಾಯಕ ನಟನಾಗಿ ಎಂಟ್ರಿ ಕೊಡಲು ತಯಾರಾಗಿದ್ದಾರೆ.

KHANANA 9

ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಆರ್ಯವರ್ಧನ್ ಪಾಲಿಗೆ ಖನನ ಎಂಬುದು ಬಹುದಿನದ ಕನಸೊಂದನ್ನು ನನಸು ಮಾಡಿದ ಚಿತ್ರ. ನಟಿಸೋ ಚಿತ್ರಗಳ ಸಂಖ್ಯೆ ಕಡಿಮೆಯಾದರೂ ಪರವಾಗಿಲ್ಲ ಆದರೆ ವಿಶಿಷ್ಟ ಕಥೆಗಳಲ್ಲಿಯೇ ಪಾತ್ರವಾಗಬೇಕೆಂಬಂಥಾ ತುಡಿತ ಹೊಂದಿರುವವರು ಆರ್ಯವರ್ಧನ್. ಈ ಚಿತ್ರದ ನಿರ್ಮಾಪಕರಾದ ಶ್ರೀನಿವಾಸ್ ರಾವ್ ಅವರ ಪುತ್ರರಾದ ಆರ್ಯ, ಸಾಕಷ್ಟು ಸೈಕಲ್ಲು ಹೊಡೆದೇ ಇಲ್ಲಿವರೆಗೆ ಸಾಗಿ ಬಂದಿದ್ದಾರೆ.

KHANANA 12

ತಂದೆಯೇ ಚಿತ್ರ ನಿರ್ಮಾಣ ಮಾಡೋ ಶಕ್ತಿ ಹೊಂದಿರುವಾಗ ಹೀರೋ ಆಗೋದು ಸಲೀಸು ಅಂತ ಯಾರಾದರೂ ಅಂದುಕೊಂಡರೆ ಅದು ನಿಜಕ್ಕೂ ಸುಳ್ಳು. ಯಾಕೆಂದರೆ, ಈಗ ನಿರ್ಮಾಪಕರಾಗಿ ಮಗನ ಕನಸಿಗೆ ಸಾಥ್ ನೀಡಿರೋ ತಂದೆ ಶ್ರೀನಿವಾಸ್ ರಾವ್ ಅವರೂ ಬಣ್ಣದ ಕನಸು ಕಟ್ಟಿಕೊಂಡು ಸಾಕಷ್ಟು ಶ್ರಮ ವಹಿಸಿದ್ದಾರೆ. ಅದೇ ಹಾದಿಯಲ್ಲಿ ಆರ್ಯವರ್ಧನ್ ಕೂಡಾ ಪರಿಶ್ರಮದಿಂದಲೇ ಹೀರೋ ಆಗಿದ್ದಾರೆ.

KHANANA a

ವರ್ಷಗಳ ಹಿಂದೆ ಮಾರ್ಚ್ 22 ಎಂಬ ಚಿತ್ರವೊಂದು ತೆರೆ ಕಂಡಿತ್ತಲ್ಲಾ? ಎಲ್ಲರ ಮೆಚ್ಚುಗೆ ಗಳಿಸಿಕೊಂಡು ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಆ ಚಿತ್ರದಲ್ಲಿ ಸಲ್ಮಾನ್ ಎಂಬ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಚಿತ್ರ ನೋಡಿದವರ್ಯಾರೂ ಆ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ಆ ಪಾತ್ರಕ್ಕೆ ಅಷ್ಟೊಂದು ಪರಿಣಾಮಕಾರಿಯಾಗಿ ಜೀವ ತುಂಬಿದ್ದವರು ಆರ್ಯವರ್ಧನ್. ಇದಕ್ಕಾಗಿ ಅವರಿಗೆ ಎಲ್ಲ ದಿಕ್ಕುಗಳಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಇದರಿಂದ ಉತ್ತೇಜಿತರಾದ ಆರ್ಯವರ್ಧನ್ ಆ ನಂತರ ಚಿಟ್ಟೆ ಎಂಬ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದರು. ಆ ಹೊತ್ತಿಗೆಲ್ಲಾ ಆರ್ಯವರ್ಧನ್ ಅವರಿಗೆ ತಮ್ಮ ಗುರಿ ಮತ್ತು ದಾರಿಗಳೆಲ್ಲವೂ ಸ್ಪಷ್ಟವಾಗಿತ್ತು.

KHANANA d

ಒಂದೊಳ್ಳೆ ಕಥೆಯ ಮೂಲಕ ಹೀರೋ ಆಗಿ ಎಂಟ್ರಿ ಕೊಡಬೇಕೆಂದು ತಯಾರಿ ಆರಂಭಿಸಿದ್ದ ಆರ್ಯವರ್ಧನ್ ಅವರಿಗೆ ತಂದೆ ಶ್ರೀನಿವಾಸ ರಾವ್ ಸಾಥ್ ಕೊಟ್ಟಿದ್ದರು. ತಮ್ಮ ಎಸ್. ನಲಿಗೆ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿಯೇ ನಿರ್ಮಾಣ ಮಾಡೋದಾಗಿ ಹಸಿರು ನಿಶಾನೆಯನ್ನೂ ತೋರಿಸಿದ್ದರು. ಅದಕ್ಕೆ ತಕ್ಕುದಾಗಿಯೇ ನಿರ್ದೇಶಕ ರಾಧಾ ಅವರು ವಿಶಿಷ್ಟವಾದೊಂದು ಕಥೆ ಹೇಳೋದರ ಮೂಲಕ ವಿಧ್ಯುಕ್ತ ಚಾಲನೆ ಪಡೆದುಕೊಂಡಿದ್ದ ಖನನ ಚಿತ್ರವೀಗ ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ತಯಾರಾಗಿ ಬಿಡುಗಡೆಗೆ ಸಜ್ಜುಗೊಂಡಿದೆ.

KHANANA e

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಆರ್ಯವರ್ಧನ್ ಪಾಲಿಗೆ ಸಿನಿಮಾ ಕನಸು ಚಿಗುರಿಕೊಳ್ಳಲು ಕಾರಣವಾಗಿದ್ದೇ ತಂದೆ ಶ್ರೀನಿವಾಸ ರಾವ್ ಅವರಲ್ಲಿದ್ದ ಸಿನಿಮಾ ಪ್ರೇಮ. ಶ್ರೀನಿವಾಸ ರಾವ್ ಎಪ್ಪತ್ತರ ದಶಕದಲ್ಲಿಯೇ ನಾಯಕನಾಗಬೇಕೆಂಬ ಕನಸು ಕಂಡಿದ್ದವರು.

KHANANA 1

ಕಾಲೇಜು ದಿನಗಳಲ್ಲಿಯೇ ನಟನಾಗೋ ಹಂಬಲದಿಂದ ನಾನಾ ಸಾಹಸ ಮಾಡಿ ಭ್ರಮನಿರಸನ ಹೊಂದಿದ್ದ ಅವರು ಆ ನಂತರದಲ್ಲಿ ತಮ್ಮದೇ ವಹಿವಾಟಿನಲ್ಲಿ ಕಳೆದು ಹೋಗಿದ್ದವರು. ಆದರೆ ತಮ್ಮೆಲ್ಲ ಕನಸು ತನ್ನ ಮಗನ ಮೂಲಕ ನನಸಾಗಲೆಂಬ ಕಾರಣದಿಂದಲೇ ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

KHANANA 8

ಹೀಗೆ ತಂದೆಯ ಉತ್ತೇಜನದೊಂದಿಗೇ ಬೆಳೆದು ಬಂದ ಆರ್ಯವರ್ಧನ್ ಓದಿಕೊಂಡಿದ್ದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್. ಹದಿಮೂರು ವರ್ಷಗಳ ಕಾಲ ಬಹು ಪ್ರತಿಷ್ಠಿತ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದ ಅವರು ಈಗಲೂ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದಾರೆ. ಓದಿಗೆ ಮೋಸ ಮಾಡಬಾರದೆಂಬ ಕಾರಣದಿಂದ ಅಲ್ಲಿಯೇ ತೊಡಗಿಸಿಕೊಂಡಿರೋ ಆರ್ಯವರ್ಧನ್ ಅದರ ನಡುವೆಯೂ ಸಿನಿಮಾ ನಟನೆಯತ್ತ ಆಕರ್ಷಣೆ ಹೊಂದಿದ್ದವರು. ಈ ಚಿತ್ರ ಒಪ್ಪಿಕೊಂಡ ಮೇಲೂ ರಾತ್ರಿಯೆಲ್ಲ ಕೆಲಸ ಮಾಡಿ ಬೆಳಗೆ ಸೀದಾ ಬಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೂ ಇದೆ.

KHANANA 10

ಸಂಪೂರ್ಣ ತರಬೇತಿ ಪಡೆದುಕೊಂಡೇ ನಾಯಕನಾಗಿ ಅಖಾಡಕ್ಕಿಳಿದಿರುವ ಅವರು ಯಾವುದನ್ನೇ ಆದರೆ ಒಂದು ಸಲ ಹಿಡಿದರೆ ಬಿಡುವ ಜಾಯಮಾನದವರಲ್ಲ. ಮೊದಲ ಚಿತ್ರದಲ್ಲಿಯೇ ಇವರ ಸಮರ್ಪಣಾ ಭಾವ ಕಂಡು ನಿರ್ದೇಶಕರು ಸೇರಿದಂತೆ ಇಡೀ ಚಿತ್ರತಂಡದಲ್ಲೊಂದು ಮೆಚ್ಚುಗೆಯಿದೆ.

KHANANA 6

ಶಾಲಾ ಕಾಲೇಜು ದಿನಗಳಲ್ಲಿಯೇ ಕಲೆ ಮತ್ತು ಸಾಹಿತ್ಯದತ್ತ ಅಪಾರ ಒಲವು ಹೊಂದಿದ್ದ ಆರ್ಯವರ್ಧನ್ ಅವರಿಗೆ ಆ ಕಾರಣದಿಂದಲೇ ಸಿನಿಮಾ ಆಸಕ್ತಿಯೂ ರೂಪುಗೊಂಡಿದೆ. ತಾನಿಂಥಾದ್ದೇ ಚಿತ್ರ ಮಾಡಬೇಕೆಂಬ ಸ್ಪಷ್ಟತೆ ಹುಟ್ಟಿಕೊಂಡಿದ್ದು, ಕಥೆಯ ಆಯ್ಕೆಯಲ್ಲಿ ಪ್ರೌಢಿಮೆ ಸಾಧ್ಯವಾದದ್ದರ ಹಿಂದೆ ಓದಿನ ಪಾತ್ರವಿದೆ ಅನ್ನೋದು ಆರ್ಯ ಅಭಿಪ್ರಾಯ.

KHANANA b

ತಾನು ಯಾವ ಚಿತ್ರವನ್ನೇ ಮಾಡಿದರೂ ಅದರಲ್ಲಿ ಸಮಾಜಕ್ಕೇನಾದರೂ ಸಂದೇಶ ಇರಬೇಕೆಂಬ ಕಾಳಜಿ ಹೊಂದಿರುವ ಅವರ ಪಾಲಿಗೆ ಖನನ ಮೂಲಕ ಅಂಥಾದ್ದೇ ಕಥೆ ಸಿಕ್ಕಿದೆ. ಕನ್ನಡದ ಮಟ್ಟಿಗೆ ಅತ್ಯಂತ ಅಪರೂಪದ ಈ ಚಿತ್ರದ ಮೂಲಕ ತಮಗೆ ಗ್ರ್ಯಾಂಡ್ ಓಪನಿಂಗ್ ಸಿಗಲಿದೆ ಎಂಬ ಭರವಸೆಯೂ ಅವರಲ್ಲಿದೆ.

KHANANA 11

ಖನನ ಎಂಬುದು ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ. ಚೆಂದದ ಕಥೆ ಹೇಳುತ್ತಲೇ ಬದುಕಿನ ವಾಸ್ತವ ದಿಗ್ದರ್ಶನ ಮಾಡಿಸುವಂಥಾ ಈ ಚಿತ್ರದಲ್ಲಿ ಸಾಹಸ, ಪ್ರೀತಿ ಪ್ರೇಮ ಸೇರಿದಂತೆ ಎಲ್ಲ ಅಂಶಗಳೂ ಇವೆ. ಪಕ್ಕಾ ಕಮರ್ಶಿಯಲ್ ಜಾನರಿನಲ್ಲಿಯೇ ಹಲವಾರು ಪ್ರಯೋಗಗಳು ಮತ್ತು ತಾಂತ್ರಿಕ ಶ್ರೀಮಂತಿಕೆಯಿಂದ ಖನನ ಮೂಡಿ ಬಂದಿದೆಯಂತೆ. ಈ ಹಿಂದೆ ಮಾರ್ಚ್ 22 ಚಿತ್ರದ ಮೂಲಕವೇ ಆರ್ಯವರ್ಧನ್ ಒಳ್ಳೆ ನಟ ಎಂಬುದು ಸಾಬೀತಾಗಿತ್ತು. ಖನನ ಚಿತ್ರದ ಮೂಲಕ ಅವರು ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಗೆಂದ ಮೇಲೆ ನಿರೀಕ್ಷೆಗಳು ಇದ್ದೇ ಇರುತ್ತವೆ. ಈ ಚಿತ್ರ ಇದೇ ತಿಂಗಳು ತೆರೆ ಕಾಣಲಿದೆ.

TAGGED:AryavardhanKhananaMarch 22Romantic Thriller CinemaS Nalige productionsSrinivas Raoಆರ್ಯವರ್ಧನ್ಎಸ್.ನಲಿಗೆ ಪ್ರೊಡಕ್ಷನ್ಸ್ಖನನಮಾರ್ಚ್ 22ರೊಮ್ಯಾಂಟಿಕ್ ಥ್ರಿಲ್ಲರ್ ಸಿನೆಮಾಶ್ರೀನಿವಾಸ್ ರಾವ್
Share This Article
Facebook Whatsapp Whatsapp Telegram

You Might Also Like

TB Dam 4
Districts

ಅವಧಿಗೂ ಮುನ್ನ ಅರ್ಧದಷ್ಟು ಭರ್ತಿಯಾದ ಟಿಬಿ ಡ್ಯಾಂ – ಜು.1ಕ್ಕೆ ಕಾಲುವೆಗೆ ನೀರು ಬಿಡುಗಡೆ ಸಾಧ್ಯತೆ

Public TV
By Public TV
12 minutes ago
KOMUL ELECTION
Districts

ಕೋಮುಲ್ ಚುನಾವಣೆಯಲ್ಲಿ ಹಣದ ಹೊಳೆ – ಒಂದೊಂದು ಮತಕ್ಕೆ 5 ರಿಂದ 7 ಲಕ್ಷ ಸಂದಾಯ

Public TV
By Public TV
19 minutes ago
Himachal Pradesh Flood 3
Latest

ಹಿಮಾಚಲದಲ್ಲಿ ಮೇಘಸ್ಫೋಟ; ರಣಪ್ರವಾಹಕ್ಕೆ ಇಬ್ಬರು ಬಲಿ, 15-20 ಕಾರ್ಮಿಕರು ಕೊಚ್ಚಿ ಹೋಗಿರುವ ಶಂಕೆ

Public TV
By Public TV
51 minutes ago
Iran Arrested 700 people of israel
Latest

ಇಸ್ರೇಲ್ ಜೊತೆ ಸಂಪರ್ಕದಲ್ಲಿದ್ದ 700ಕ್ಕೂ ಅಧಿಕ ಜನರನ್ನು ಬಂಧಿಸಿದ ಇರಾನ್

Public TV
By Public TV
52 minutes ago
weather
Belgaum

ರಾಜ್ಯದಲ್ಲಿ ವರುಣಾರ್ಭಟ – ಬೆಳಗಾವಿ, ಚಿಕ್ಕಮಗಳೂರು, ಕೊಡಗಿನ ಕೆಲವು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

Public TV
By Public TV
1 hour ago
Mangaluru Shishileshwara Temple
Dakshina Kannada

ಪಶ್ಚಿಮ ಘಟ್ಟದಲ್ಲಿ ಹೆಚ್ಚಿದ ಮಳೆ ಅಬ್ಬರ – ಕಪಿಲಾ ನದಿ ತುಂಬಿ ಶಿಶಿಲೇಶ್ವರ ದೇವಸ್ಥಾನ ಜಲಾವೃತ

Public TV
By Public TV
59 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?