ಮಂಗಳೂರು: ಕೇರಳದಿಂದ ಮಂಗಳೂರಿಗೆ ಗರ್ಭಿಣಿ ಕಾಲ್ನಡಿಗೆಯಲ್ಲಿ ಆಗಮಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತದ ನೆರವಿನಿಂದ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೇರಳದ ಕಣ್ಣೂರಿನಲ್ಲಿ ವಿಜಯಪುರ ಮೂಲದ ಎಂಟು ಜನರು ಕೆಲಸ ಮಾಡಿಕೊಂಡಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ವಿಜಯಪುರಕ್ಕೆ ಹೋಗಲು ಈ ಎಂಟು ಕಾರ್ಮಿಕರು ನಿರ್ಧರಿದ್ದರು. ವಾಹನಗಳ ಸೌಲಭ್ಯ ಸಿಗದಿದ್ದಕ್ಕೆ ಕಾಲ್ನಡಿಗೆಯಲ್ಲಿ ತೆರಳಲು ನಿರ್ಧರಿಸಿದ್ದರು.
ಏಳು ದಿನಗಳ ಹಿಂದೆ ಕಣ್ಣೂರಿನಿಂದ ನಡೆಯಲಾರಂಭಿಸಿದ್ದ ಎಂಟು ಜನ ಇಂದು ಮಂಗಳೂರು ತಲುಪಿದ್ದಾರೆ. ಗರ್ಭಿಣಿ ಸುಸ್ತಾಗಿದ್ದರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತದ ನೆರವಿನಿಂದ ಗರ್ಭಿಣಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.