ದೋಣಿ ಮುಗುಚಿ ಹಿನ್ನೀರಿನಲ್ಲಿ ಮುಳುಗಿ ಯುವಕ ಸೇರಿ 5 ಮಕ್ಕಳ ಸಾವು

Public TV
1 Min Read
Keral Children

ತಿರುವನಂತಪುರ: ಹಿನ್ನೀರಿನಲ್ಲಿ ದೋಣಿ ಮುಗುಚಿದ ಪರಿಣಾಮ ಆರು ಮಕ್ಕಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ಮಣಪುರಂ ಜಿಲ್ಲೆಯ ಚಂಗರಕುಳಂ ಗ್ರಾಮದಲ್ಲಿ ನಡೆದಿದೆ.

ಚಂಗರಕುಳಂ ಗ್ರಾಮದ ಬಳಿ ನಾರನಿಪುಜಂ ನದಿಯ ಹಿನ್ನೀರಿನಲ್ಲಿ ಈ ದೋಣಿ ದುರಂತ ನಡೆದಿದೆ. ವೈಶಣ್ (20), ಪ್ರಸೀನಾ (13), ಜನೀಶಾ (17), ಪೂಜಾ (13), ಅಭಿದೇವ್ (13) ಮತ್ತು ಆದಿನಾಥ್ (14) ದೋಣಿ ದುರಂತದಲ್ಲಿ ಮೃತ ದುರ್ದೈವಿಗಳು. ಇನ್ನು ಈ ದುರಂತದಲ್ಲಿ ಅಂಬಿಗ ವೇಲಾಯುಧ (55), ಫಾತಿಮಾ (9) ಮತ್ತು ಶಿಬಕಾ (11) ಬದುಕುಳಿದಿದ್ದಾರೆ.

Naranipuzha changaramkulam boat tragedy 2

ಮಕ್ಕಳೆಲ್ಲ ತಮ್ಮ ಸಂಬಂಧಿ ಅಂಬಿಗನಾದ ವೇಲಾಯುಧ ಜೊತೆ ಜಲಾಶಯ ನೋಡಲು ಚಿಕ್ಕದಾದ ಬೋಟ್ ನಲ್ಲಿ ತೆರಳಿದ್ದರು. ಕೇವಲ ಇಬ್ಬರು ಸಾಮರ್ಥವುಳ್ಳ ಬೋಟ್ ನಲ್ಲಿ ಒಂಭತ್ತು ಜನ ಪ್ರಯಾಣಿಸಿದ್ರಿಂದ ನದಿಯ ಮಧ್ಯಭಾಗದಲ್ಲಿ ಬೋಟ್ ಮುಗುಚಿ ಬಿದ್ದಿದೆ. ವೇಲಾಯುಧ ರಿಗೆ ಈಜು ಬರುತ್ತಿದ್ದರಿಂದ ಫಾತಿಮಾ ಎಂಬ ಬಾಲಕಿಯನ್ನು ರಕ್ಷಿಸಿ, ತಾನು ಬದುಕುಳಿದಿದ್ದಾರೆ. ಇತ್ತ 11 ವರ್ಷದ ಶಿಬಕಾ ಈಜಿ ದಡ ಸೇರಿದ್ದಾನೆ. ದೋಣಿಯಲ್ಲಿದ್ದ ವೇಲಾಯುಧ ಮಗ ವೈಶಾಲ್ ಗೆ ಈಜು ಬರುತ್ತಿದ್ದರೂ ಮಕ್ಕಳನ್ನು ಬದುಕಿಸಲು ಹೋಗಿ ಜಲಸಮಾಧಿ ಆಗಿದ್ದಾನೆ.

ಮೃತ ದೇಹಗಳನ್ನೆಲ್ಲಾ ನದಿಯಿಂದ ಹೊರ ತೆಗೆಯಲಾಗಿದೆ. ಬದುಕುಳಿದು ಬಂದವರನ್ನು ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Naranipuzha changaramkulam boat tragedy 14

Naranipuzha changaramkulam boat tragedy 12

Naranipuzha changaramkulam boat tragedy 10

Naranipuzha changaramkulam boat tragedy 9

Naranipuzha changaramkulam boat tragedy 8

Naranipuzha changaramkulam boat tragedy 5

Naranipuzha changaramkulam boat tragedy 4

Naranipuzha changaramkulam boat tragedy 3

Naranipuzha changaramkulam boat tragedy 2

Naranipuzha changaramkulam boat tragedy 1

Naranipuzha changaramkulam boat tragedy 1

Share This Article
Leave a Comment

Leave a Reply

Your email address will not be published. Required fields are marked *