Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಕ್ತ ಸಾಗರ – ಡೆಡ್ಲಿ ಅಮೀಬಾ ಸೋಂಕಿನ ಆತಂಕ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಕ್ತ ಸಾಗರ – ಡೆಡ್ಲಿ ಅಮೀಬಾ ಸೋಂಕಿನ ಆತಂಕ

Latest

ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಕ್ತ ಸಾಗರ – ಡೆಡ್ಲಿ ಅಮೀಬಾ ಸೋಂಕಿನ ಆತಂಕ

Public TV
Last updated: November 19, 2025 8:27 am
Public TV
Share
3 Min Read
Sabarimala Ayyappa Temple Rush
SHARE

– ಲಕ್ಷಾಂತರ ಭಕ್ತರ ನಿಯಂತ್ರಣಕ್ಕೆ ಹರಸಾಹಸ

ತಿರುವನಂತಪುರಂ: ಕಳೆದ ಭಾನುವಾರದಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆಯಲಾಗಿದ್ದು, ಮುಂದಿನ 2 ತಿಂಗಳು ಭಕ್ತರಿಗೆ ದರ್ಶನ ಲಭ್ಯವಾಗಲಿದೆ. ಈ ಬೆನ್ನಲ್ಲೇ ಸ್ವಾಮಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಇದೇ ಸಂದರ್ಭದಲ್ಲಿ ಕೇರಳದಲ್ಲಿ (Kerala) ಮೆದುಳು ತಿನ್ನುವ ಅಮೀಬಾ (Brain Eating Amoeba) ರೋಗದ ಹಾವಳಿ ಜೋರಾಗಿದೆ.

ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ (Sabarimala Ayyappa Temple) ಮಂಡಲ ಪೂಜೆ ಆರಂಭವಾಗಿದೆ. ಕಳೆದ ಭಾನುವಾರದಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆಯಲಾಗಿದ್ದು, ಮುಂದಿನ 2 ತಿಂಗಳು ಭಕ್ತರಿಗೆ ದರ್ಶನ ಲಭ್ಯವಾಗಲಿದೆ. ಈ ಬೆನ್ನಲ್ಲೇ ಸ್ವಾಮಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಒಂದೂವರೆ ದಿನದಲ್ಲಿ ಒಂದೂವರೆ ಲಕ್ಷ ಭಕ್ತರು ದರ್ಶನ ಪಡೆದುಕೊಂಡಿದ್ದಾರೆ. ಭಾರೀ ಭಕ್ತಸಾಗರದಿಂದಾಗಿ ಪಂಪಾ ನದಿಯಿಂದ ದೇಗುಲ ತಲುಪಲು 7 ಗಂಟೆಗಳೇ ಬೇಕಾಗಿದೆ. ಕಣ್ಣು ಹಾಯಿಸಿದ ದೂರವೂ ಸ್ವಾಮಿ ಭಕ್ತರೇ ಇದ್ದಾರೆ. ಭಕ್ತರ ನಿಯಂತ್ರಣಕ್ಕೆ ಕೇಂದ್ರಕ್ಕೆ ಕೇರಳ ಸರ್ಕಾರ ಮನವಿ ಮಾಡಿದೆ. ಕೇಂದ್ರ ತಂಡ ಆಗಮಿಸಲು ಇನ್ನೆರಡು ದಿನ ಬೇಕಾಗಿದ್ದು, ಭಕ್ತರನ್ನು ನಿಯಂತ್ರಿಸುವುದೇ ಹರಸಾಹಸವಾಗಿದೆ. ಇದನ್ನೂ ಓದಿ: ಬೆಳಗಾವಿ | ಚಳಿಗೆ ಇದ್ದಿಲಿನಿಂದ ಬೆಂಕಿ ಹಾಕಿ ನಿದ್ರೆ; ಉಸಿರುಗಟ್ಟಿ ಚಿರನಿದ್ರೆಗೆ ಜಾರಿದ ಮೂವರು ಯುವಕರು

Sabarimala Pilgrimage 2

ಪಾರ್ಕಿಂಗ್‌ನಲ್ಲೇ ಸಿಲುಕಿರುವ ಮಾಲಾಧಾರಿಗಳು:
ಕೇರಳದ ಪತ್ತಂತಿಟ್ಟ ಜಿಲ್ಲೆಯ ಬೆಟ್ಟದ ಮೇಲಿರುವ ಸ್ವಾಮಿ ಅಯ್ಯಪ್ಪನನ್ನು ನೋಡಲು ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಅತಿ ಹೆಚ್ಚು ಸಂಖ್ಯೆಯ ಭಕ್ತರು ಪ್ರತಿವರ್ಷ ಆಗಮಿಸುತ್ತಾರೆ. ಕರ್ನಾಟಕದಿಂದ ಸಾವಿರಾರು ಭಕ್ತರು ದರ್ಶನಕ್ಕೆ ತೆರಳುತ್ತಾರೆ. ಈಗಾಗಲೇ ಅಯ್ಯಪ್ಪ ದರ್ಶನಕ್ಕೆ ಕರ್ನಾಟಕದಿಂದ ತೆರಳಿರುವ ಅಯ್ಯಪ್ಪ ಭಕ್ತರು ರಾಜ್ಯದಿಂದ ಬರುವ ಭಕ್ತರಿಗೆ ಮನವಿ ಮಾಡಿದ್ದಾರೆ. ಅಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ನೀಲ್‌ಕಲ್‌ನಲ್ಲಿ ಭಕ್ತರ ವಾಹನಗಳು ಪಾರ್ಕಿಂಗ್‌ನಲ್ಲೇ ಜಾಮ್ ಆಗಿವೆ. ವಾಹನಗಳಲ್ಲಿ ತೆರಳಿರುವ ಭಕ್ತರು ಪಾರ್ಕಿಂಗ್‌ಗಾಗಿಯೇ ಒಂದೆರಡು ತಾಸು ಹುಡುಕುವ ಪರಿಸ್ಥಿತಿ ಇದೆ. ಹೀಗಾಗಿ ಸ್ವಲ್ಪ ದಿನ ತಡವಾಗಿ ದರ್ಶನಕ್ಕೆ ಬನ್ನಿ ಅಂತ ಈಗಾಗಲೇ ತೆರಳಿರುವ ಕರ್ನಾಟಕ ಅಯ್ಯಪ್ಪ ಭಕ್ತರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಡುಗೆ ಮಾಡುವಾಗ ಸಿಲಿಂಡರ್ ಸ್ಫೋಟ – ಮನೆಯಲ್ಲಿದ್ದ ನಾಲ್ವರಿಗೆ ಗಂಭೀರ ಗಾಯ

ಶಬರಿಮಲೆಯಲ್ಲಿ ಹೊಸ ವೈರಸ್ ಭೀತಿ:
ಇದೇ ಸಂದರ್ಭದಲ್ಲಿ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ರೋಗದ ಹಾವಳಿ ಜೋರಾಗಿದೆ. ಮೆದುಳು ತಿನ್ನುವ ನೇಗ್ಲೇರಿಯಾ ಪೌಲೇರಿ ಎಂಬ ಅಮಿಬಾ ವೈರಸ್ ಆತಂಕ ಹೆಚ್ಚಿಸಿದೆ. ಪಂಪಾನದಿಯಲ್ಲಿ ಸ್ನಾನ ಮಾಡುವಾಗ ಮೂಗು, ಬಾಯಿಗೆ ನೀರು ಹೋಗದಂತೆ ಎಚ್ಚರ ವಹಿಸಿ, ಬಿಸಿನೀರನ್ನೇ ಸೇವಿಸಲು ಕೇರಳ ಸರ್ಕಾರ ಸಲಹೆ ನೀಡಿದೆ. ಪಂದಳಂ, ಅಡೂರ್, ಪತ್ತನಂತಿಟ್ಟ ಮತ್ತು ವಡಸೇರಿಕ್ಕರದಲ್ಲಿ ವಿಶೇಷ ಔಷಧಾಲಯಗಳ ಸ್ಥಾಪನೆ ಮಾಡಲಾಗಿದೆ. ಸುರಕ್ಷಿತ ನೀರಿನ ಪದ್ಧತಿಗಳನ್ನು ಅನುಸರಿಸಲು ಭಕ್ತರಿಗೆ ಸೂಚನೆ ನೀಡಲಾಗಿದೆ. ಪಂಪಾದಿಂದ ಶಬರಿಮಲೆಗೆ ತೆರಳುವವರು ಉಸಿರಾಟ, ಹೃದಯ ಸಂಬಂಧಿ ಸಮಸ್ಯೆ ಇದ್ದರೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಲಹೆ ನೀಡಲಾಗಿದೆ. ಇದನ್ನೂ ಓದಿ: ಅಮಿತ್ ಶಾ ನೀಡಿದ್ದ ಡೆಡ್ ಲೈನ್‌ಗೆ 12 ದಿನ ಮೊದಲೇ ಟಾರ್ಗೆಟ್ ಮಾದ್ವಿ ಹಿಡ್ಮಾ ಹಿಟ್.!

ಕರ್ನಾಟಕಕ್ಕೂ ವೈರಸ್ ಟೆನ್ಷನ್:
ಕೇರಳದಲ್ಲಿ ನೂರಾರು ಜನರಿಗೆ ಬಾಧಿಸುತ್ತಿರುವ ವೈರಸ್, ರಾಜ್ಯದಿಂದ ಶಬರಿ ಮಲೆಗೆ ಹೋಗುವ ಭಕ್ತರ ಟೆನ್ಷನ್‌ಗೆ ಕಾರಣವಾಗಿದೆ. ಹೀಗಾಗಿ ಭಕ್ತರ ಆರೋಗ್ಯ ರಕ್ಷಣೆಗೆ ಮುಂದಾಗಿರುವ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆಗೆ ಮಾಡಿದೆ. ಇದು ಅತ್ಯಂತ ವಿಷಕಾರಿ ವೈರಸ್ ಆಗಿದ್ದು, ಬೇಗ ಹರಡುತ್ತೆ. ಯಾತ್ರೆಯ ಸಂದರ್ಭ ನಿಂತ ನೀರಿನಲ್ಲಿ ಸ್ನಾನ ಮಾಡಬೇಡಿ. ಮೂಗಿಗೆ ನೀರು ಹೋಗದಂತೆ ಕ್ಲಿಪ್ ಬಳಸಿ ಅಂತ ಎಚ್ಚರಿಸಿದೆ. ವೈರಸ್ ಸಂಪರ್ಕದ 7 ದಿನಗಳ ಒಳಗೆ ರೋಗ ಲಕ್ಷಣ ಕಾಣಿಸಿಕೊಳ್ಳಲಿದೆ. ಜ್ವರ, ತಲೆನೋವು, ವಾಕರಿಕೆ, ವಾಂತಿ, ಕುತ್ತಿಗೆ ಬಿಗಿತ, ಗೊಂದಲ, ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆ, ಅಸ್ವಸ್ಥತೆ ರೋಗ ಲಕ್ಷಣವಾಗಿದೆ. ಇದನ್ನೂ ಓದಿ: ಶಬರಿಮಲೆಯಲ್ಲಿ ಭಾರೀ ಜನಸ್ತೋಮ – ಅಯ್ಯಪ್ಪನ ದರ್ಶನಕ್ಕೆ ಬರುತ್ತಿದ್ದ ವೃದ್ಧೆ ಸಾವು!

ಒಟ್ಟಿನಲ್ಲಿ ಶಬರಿಮಲೆ ಮಾಲಾಧಾರಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಾಲಾಧಾರಿಗಳ ನಿಯಂತ್ರಣಕ್ಕೆ ಕೇರಳ ಸರ್ಕಾರ ಇನ್ನಿಲ್ಲದ ಹರಸಾಹಸ ಪಡುತ್ತಿದೆ. ಇದನ್ನೂ ಓದಿ: ದೆಹಲಿ ಕಾರು ಸ್ಫೋಟ ಸ್ಥಳದಲ್ಲಿ 68 ಅನುಮಾನಾಸ್ಪದ ಮೊಬೈಲ್ ಫೋನ್ ಸಕ್ರಿಯ – ಪಾಕ್‌, ಟರ್ಕಿಯಿಂದ ಕರೆ

TAGGED:Amoeba VirusAyyappa devoteesAyyappa templeBrain eating amoebakeralaSabarimalaಅಮೀಬಾ ವೈರಸ್‌ಅಯ್ಯಪ್ಪ ಭಕ್ತರುಕೇರಳಶಬರಿಮಲೆ
Share This Article
Facebook Whatsapp Whatsapp Telegram

Cinema news

sudeep 6
ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದ ಕಿಚ್ಚ ಸುದೀಪ್‌ – ನಟನಿಗೆ ಕಷ್ಟವಾಯ್ತಾ ಕ್ರಾಸ್ ಎಕ್ಸಾಮಿನೇಷನ್?
Bengaluru City Cinema Court Districts Karnataka Latest Sandalwood Top Stories
Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories

You Might Also Like

Iran war
Latest

6 ಮಕ್ಕಳು ಸೇರಿ 34 ಮಂದಿ ಸಾವಿಗೆ ಇರಾನ್‌ ಪ್ರತೀಕಾರ – ಇಸ್ರೇಲ್‌ನ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಸ್ಫೋಟ

Public TV
By Public TV
4 minutes ago
Drums Sweets Support Meerut Father Celebrates Daughters Divorce
Court

ಡಿವೋರ್ಸ್‌ ಬಳಿಕ ಸಿಹಿ ಹಂಚಿ, ಬ್ಯಾಂಡ್‌ ಮೆರವಣಿಗೆಯಲ್ಲಿ ಮಗಳನ್ನು ಕರೆತಂದ ನಿವೃತ್ತ ಜಡ್ಜ್‌

Public TV
By Public TV
16 minutes ago
325702249 1 6 1 e1566118011669
Latest

ಮಧ್ಯಪ್ರಾಚ್ಯದಲ್ಲಿ ಮುಗಿಯದ ಯುದ್ಧ – ಅಮೆರಿಕ ಕಚ್ಛಾ ತೈಲ ಬೆಲೆ ಬ್ಯಾರಲ್​ಗೆ 113 ಡಾಲರ್​ಗೆ ಏರಿಕೆ​

Public TV
By Public TV
34 minutes ago
Kalaburagi Govt Teacher Murder
Crime

ಕಲಬುರಗಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಬರ್ಬರ ಹತ್ಯೆ – ಶವ ಸುಟ್ಟುಹಾಕಿದ ಹಂತಕರು

Public TV
By Public TV
47 minutes ago
Raicur Court
Court

ರಾಯಚೂರು | 9 ವರ್ಷಗಳ ಹಿಂದಿನ ಕೇಸ್‌ – ದರೋಡೆ, ಕೊಲೆ ಪ್ರಕರಣದ ಅಪರಾಧಿಗೆ ಜೀವಾವಧಿ ಶಿಕ್ಷೆ

Public TV
By Public TV
58 minutes ago
HH 60W Jolly Green II
Latest

7,000 ಅಡಿ ಎತ್ತರ, ಪರ್ವತಗಳ ಬಿರುಕಿನ ಮಧ್ಯೆ ಅವಿತಿದ್ದ ಅಮೆರಿಕ ಪೈಲಟ್‌ – ರಹಸ್ಯ ಕಾರ್ಯಾಚರಣೆಯೇ ರೋಚಕ!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?