ರಾಮನಗರ: ದೇವಾಲಯದಲ್ಲಿ ಪ್ರದಕ್ಷಿಣೆ ಹಾಕುವ ವೇಳೆ ಎದುರಿಗೆ ಬಂದ ಯುವತಿಗೆ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯನವರ ಪುತ್ರಿ ವಿಜಯಲಕ್ಷ್ಮಿ ಮನಬಂದಂತೆ ಥಳಿಸಿದ ಘಟನೆ ಚನ್ನಪಟ್ಟಣ ತಾಲೂಕಿನ ಕೆಂಗಲ್ ಬಳಿ ನಡೆದಿದೆ.
ಕೆಂಗಲ್ ಆಂಜನೇಯ ದೇವಾಲಯದಲ್ಲಿ ಹನುಮಂತಯ್ಯನವರ ಪುತ್ರಿ ವಿಜಯಲಕ್ಷ್ಮಿ ಪ್ರದಕ್ಷಿಣೆ ಹಾಕಲು ದೇವಾಲಯಕ್ಕೆ ಆಗಮಿಸಿದ್ದರು. ಇದೇ ವೇಳೆ ಚನ್ನಪಟ್ಟಣದ ವಂದಾರಗುಪ್ಪೆಯ ನಿವಾಸಿ ವರ್ಷಾ ಕೂಡಾ ದೇವಾಲಯದ ಒಳಗೆ ಪ್ರದಕ್ಷಿಣೆ ಹಾಕುತ್ತಿದ್ದರು.
ವಿಜಯಲಕ್ಷ್ಮಿಯವರು ದೇವಾಲಯದ ಒಳಗೆ ಬಂದಾಗ ಇಬ್ಬರು ಪ್ರದಕ್ಷಿಣೆ ಹಾಕುವ ವೇಳೆ ಕೆಂಗಲ್ ಹನುಮಂತಯ್ಯನವರ ಪುತ್ರಿ ವಿಜಯಲಕ್ಷ್ಮಿಯವರ ಎದುರಿಗೆ ವರ್ಷಾ ಬಂದಿದ್ದಾಳೆ. ನಂತರ ದೇವಾಲಯದಿಂದ ಹೊರಬಂದಿದ್ದ ವರ್ಷಾಳನ್ನು ಹೋಮ್ ಗಾರ್ಡ್ ಗಳ ಮೂಲಕ ಕರೆಸಿಕೊಂಡ ವಿಜಯಲಕ್ಷ್ಮಿಯವರು ಮನಬಂದಂತೆ ಥಳಿಸಿದ್ದಾರೆ. ನಂತರ ಕಾರನ್ನು ಹತ್ತಿ ಹೋಗಲು ಮುಂದಾದ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಕಾರ್ ತಡೆದು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಕಾರಿನ ಗ್ಲಾಸ್ ಪುಡಿಪುಡಿ ಮಾಡಿದ್ದಾರೆ.
ಈ ಘಟನೆ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಎರಡು ಕಡೆಯವರು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv