ಶಿವಮೊಗ್ಗ: ಖ್ಯಾತ ಸಿನಿಮಾ ಸಾಹಿತಿ ಕವಿರಾಜ್ ಅವರ ತಂದೆ ಸಮಾಜವಾದಿ ಹೋರಾಟಗಾರರಾಗಿದ್ದ ಹರಿಯಪ್ಪ ನಾಯ್ಕ್(65) ಅವರು ನಿಧನರಾಗಿದ್ದಾರೆ.
ಹರಿಯಪ್ಪ ಅವರು ಕಳೆದ ಹಲವು ತಿಂಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಆದರೆ ಇಂದು ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ. ಹರಿಯಪ್ಪ ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಶಿಷ್ಯರಾಗಿ, ಸಮಾಜವಾದಿ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು.
ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಸೇರಿ ಕುಟುಂಬ, ಅಭಿಮಾನಿಗಳನ್ನು ಸಮಾಜವಾದಿ ಹೋರಾಟಗಾರನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗದ ಮಂಡಗದ್ದೆ ಬಳಿಯ ಇರುವತ್ತಿ ಗ್ರಾಮದಲ್ಲಿ ಹರಿಯಪ್ಪ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.