ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ (Katera Film) ಸಿನಿಮಾ ಇಂದು ಕೊನೆಯ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಚಿತ್ರತಂಡದ ಕಡೆಯಿಂದ ಇಂದು (ಸೆ.11) ಸುದ್ದಿಗೋಷ್ಠಿ ಆಯೋಜಿಸಿದೆ. ಈ ಚಿತ್ರದ ಮೂಲಕ ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ವೇಳೆ ನಟ ದರ್ಶನ್ ಜೊತೆ ತೆರೆಹಂಚಿಕೊಂಡಿದ್ದರ ಬಗ್ಗೆ ಯುವನಟಿ ಆರಾಧನಾ ರಾಮ್ ಸಂತಸ ವ್ಯಕ್ತಪಡಿಸಿದ್ದರು. ತೆರೆಹಿಂದಿನ ಅನುಭವ ಬಿಚ್ಚಿಟ್ಟರು.
ದರ್ಶನ್ ಸರ್ ಅವರ ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಕ್ಕಿದ್ದಕ್ಕೆ ತುಂಬಾ ಖುಷಿಯಿದೆ. ಪೋಸ್ಟರ್ನಲ್ಲಿ ನನ್ನ ನೋಡಿದ್ರೆ, ಅದು ನಾನೇ ನಾ ಅಂತಾ ಅನಿಸುತ್ತಾಯಿದೆ. ದರ್ಶನ್ ಅವರ ಜೊತೆ ಫಸ್ಟ್ ಟೈಮ್ ವರ್ಕ್ ಮಾಡುತ್ತಾ ಇದ್ದೀನಿ ಎಂದು ಒಂದು ದಿನನೂ ಅನಿಸಲಿಲ್ಲ. ನಟಿಸೋದಕ್ಕೆ ಸರ್ಪೋಟ್ ಮಾಡಿದ್ದರು. ನನಗೆ ಸೆಟ್ನಲ್ಲಿ ದರ್ಶನ್ ಸರ್ ಚಾಕಲೇಟ್ ತಂದು ಕೊಡುತ್ತಾ ಇದ್ದರು. ನಮ್ಮ ಡಿ ಬಾಸ್ ಹೀರೋ ಬಗ್ಗೆ ಎಷ್ಟು ಮಾತನಾಡಿದ್ದರು ಅದು ಸಾಕಾಗೋಲ್ಲ. ಇದನ್ನೂ ಓದಿ:‘ಮ್ಯಾಟ್ನಿ’ ಚಿತ್ರದ ಎಣ್ಣೆ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ನೀನಾಸಂ ಸತೀಶ್
ತರುಣ್ (Tarun) ಅವರಂತಹ ನಿರ್ದೇಶಕರ ನಿರ್ದೇಶನದಲ್ಲಿ ಮೊದಲ ಬಾರಿ ನಟಿಸುತ್ತಿದ್ದೇನೆ ಅಂದರೆ ಅದು ನನ್ನ ಅದೃಷ್ಟ. ದಿನ ಹೊಸ ತರಹದ ಚಾಲೆಂಜ್ ಕೊಡುತ್ತಿದ್ದರು. ಈ ತರಹ ನೀನು ಮಾಡಬಹುದು ಅಂತಿದ್ರು. ಈ ಅವಕಾಶಕ್ಕೆ ನಾನು ಅಭಾರಿಯಾಗಿದ್ದೇನೆ. ನಿಮ್ಮ ಸಿನಿಮಾ ಕಲ್ಪನೆಯನ್ನ ನಾನು ಸ್ವಲ್ಪ ಆದರೂ ಟಚ್ ಮಾಡಿದ್ದೇನೆ ಎಂದು ಭಾವಿಸುತ್ತೇನೆ ಎಂದು ಡೈರೆಕ್ಟರ್ ಬಗ್ಗೆ ನಟಿ ಮಾತನಾಡಿದ್ದಾರೆ.
‘ಕಾಟೇರ’ (Katera) ಸಿನಿಮಾದಿಂದ ಕಲಿತ್ತಿದ್ದೇನೆ. ಪ್ರತಿದಿನವೂ ಕಲಿಯೋದು ಇತ್ತು. ನನಗೆ ನಿಮ್ಮ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ರಾಕ್ಲೈನ್ ವೆಂಕಟೇಶ್ಗೆ ಮೆಚ್ಚುಗೆ ಸೂಚಿಸಿದ್ದರು ಆರಾಧನಾ ರಾಮ್.
ಚಾಲೆಂಜಿಂಗ್ ಸ್ಟಾರ್ ದರ್ಶನ್-ಆರಾಧನಾ ರಾಮ್ (Aradhana Ram) ನಟನೆಯ ಸಿನಿಮಾಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು, ರಾಕ್ಲೈನ್ ವೆಂಕಟೇಶ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.