ಬೆನ್ನಟ್ಟಿ ಬಂದ ಚಿರತೆಯನ್ನು ಬಾವಿಗೆ ಬೀಳಿಸಿದ ಶ್ವಾನ

Public TV
1 Min Read
karwar Leopard2

ಕಾರವಾರ: ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆಯೊಂದು ಓಡಿಬಂದ ವೇಗಕ್ಕೆ ಆಯಾ ತಪ್ಪಿ ಬಾವಿಗೆ ಬಿದ್ದು ನರಳಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ.

ಇಂದು ಬೆಳಗ್ಗೆ ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದಿದ್ದ ಚಿರತೆ, ಕುಮಟಾ ತಾಲೂಕಿನ ಬರ್ಗಿ ಬಳಿಯ ವಸಂತ್ ಶಿವು ನಾಯ್ಕ ಮನೆಯ ಬಳಿ ಬೀದಿ ನಾಯಿಯನ್ನು ನೋಡಿ ಅಟ್ಟಿಸಿಕೊಂಡು ಹೋಗಿದೆ. ಈ ವೇಳೆ ನಾಯಿ ಓಟ ಕಿತ್ತಿದ್ದು ಅಲ್ಲಿಯೇ ಇದ್ದ ಬಾವಿ ಬಳಿ ಜಿಗಿದು ತಪ್ಪಿಸಿಕೊಂಡಿದೆ. ಈ ವೇಳೆ ಚಿರತೆ ಬಂದ ವೇಗಕ್ಕೆ ಆಯ ತಪ್ಪಿ ಬಾವಿಗೆ ಬಿದ್ದಿದೆ.

karwar Leopard

ಚಿರತೆಯು ಬಿದ್ದ ಹೊಡೆತಕ್ಕೆ ಬಾವಿಯಿಂದ ಏಳಲು ಪ್ರಯತ್ನಿಸಿದೆ. ಈ ವೇಳೆ ಅದರ ಗರ್ಜನೆಗೆ ಮನೆಯವರಿಗೆ ತಿಳಿದಿದ್ದು, ಬಾವಿಯಲ್ಲಿ ಚಿರತೆ ಬಿದ್ದಿರುವುದು ಗೊತ್ತಾಗಿದೆ. ಆಗ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅರಣ್ಯ ಇಲಾಖೆಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಅದರ ರಕ್ಷಣೆಗಾಗಿ ಡೇರಿಂಗ್ ಟೀಮ್ ಬಂದಿದೆ. ಬಾವಿಗೆ ಬಿದ್ದಿರುವ ಚಿರತೆಯನ್ನು ರಕ್ಷಿಸಲು ಬಾವಿಗೆ ದೊಡ್ಡ ಬುಟ್ಟಿಯನ್ನು ಇಳೆ ಬಿಡುವ ಮೂಲಕ ಬಲೆ ಹಾಕಿ ಚಿರತೆ ರಕ್ಷಣೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *