Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಉತ್ತರ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಉತ್ತರ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ!

Districts

ಉತ್ತರ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ!

Public TV
Last updated: April 1, 2019 8:45 pm
Public TV
Share
2 Min Read
liquor drinking alcohol 1
SHARE

– ಏರಿಕೆಯಾಯ್ತು ಅಕ್ರಮ ಗೋವಾ ಮದ್ಯ ಸಾಗಾಟ ಪ್ರಕರಣ
– ಅಬಕಾರಿ ಅಧಿಕಾರಿಗಳ ಪ್ರಾಮಾಣಿಕ ಶ್ರಮಕ್ಕೆ ಮೆಚ್ಚುಗೆ

ಕಾರವಾರ: ಚುನಾವಣೆ ಬಂತೆಂದರೆ ಮತದಾರರನ್ನು ಓಲೈಸಲು ಹಣದ ಜೊತೆ ಮದ್ಯ ಸಹ ಮತದಾರರಿಗೆ ಸರಬರಾಜಾಗುತ್ತದೆ. ಅದರಲ್ಲೂ ಮದ್ಯ ಪ್ರಿಯರ ಮೆಚ್ಚಿನ ರಾಜ್ಯವಾದ ಗೋವಾಕ್ಕೆ ಅಂಟಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಗೆ ಗೋವಾದ ಅಗ್ಗದ ಮದ್ಯಗಳು ಎಗ್ಗಿಲ್ಲದೇ ಸರಬರಾಜಾಗುತ್ತದೆ.

ಇದಕ್ಕಾಗಿ ಖಾಕಿಗಳನ್ನೊಳಗೊಂಡ ದೊಡ್ಡ ಜಾಲವೇ ವ್ಯವಸ್ಥಿತ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಆರೋಪವೂ ಇದೆ. ಆದರೆ ಈ ಬಾರಿ ಅಬಕಾರಿ ಅಧಿಕಾರಿಗಳ ಪ್ರಾಮಾಣಿಕ ಶ್ರಮ ಹಾಗೂ ಗಡಿ ಭಾಗದಿಂದ ಹಿಡಿದು ಜಿಲ್ಲೆ ಪ್ರತಿ ಪ್ರದೇಶದಲ್ಲಿನ ಕಾರ್ಯಾಚರಣೆ ಗೋವಾದ ಮದ್ಯದ ಅಮಲನ್ನು ಇಳಿಸಿದೆ.

KWR a copy

ಈ ಬಾರಿ ಜಿಲ್ಲಾ ಅಬಕಾರಿ ಇಲಾಖೆ ಮದ್ಯ ಸಾಗಾಟದಾರರ ಮೇಲೆ ಗಡಿಭಾಗದಲ್ಲಿ 24 ತಾಸುಗಳ ಕಣ್ಗಾವಲು ಜೊತೆಗೆ ಗೋವಾ ರಾಜ್ಯದ ಅಬಕಾರಿ ಇಲಾಖೆಯ ಸಿಬ್ಬಂದಿ ಜೊತೆಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮ ಮದ್ಯದ ಸಾಗಾಟಕ್ಕೆ ಕಡಿವಾಣ ಹಾಕಲು ಯತ್ನಿಸಿದೆ.

ಜಿಲ್ಲೆಯಾದ್ಯಂತ ಹದ್ದಿನ ಕಣ್ಣಿಟ್ಟು ಕಾರ್ಯಾಚರಣೆ ನಡೆಸಿದ ಫಲವಾಗಿ ಜಿಲ್ಲೆಯ ಮದ್ಯದ ಅಂಗಡಿಯಲ್ಲಿ ಮಾರಾಟವಾಗುತ್ತಿದ್ದ ಮದ್ಯದ ಮಾರಾಟ ಇಳಿಮುಖವಾಗಿದೆ. ಅನಧಿಕೃತವಾಗಿ ಸರಬರಾಜಾಗುತ್ತಿದ್ದ ಲಕ್ಷಾಂತರ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶ ವಶಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಭರ್ಜರಿ ಭೇಟೆ:
ಕರ್ನಾಟಕಕ್ಕಿಂತ ಅಗ್ಗದಲ್ಲಿ ಮದ್ಯ ಗೋವಾದಲ್ಲಿ ಸಿಗುವುದರಿಂದ ಗೋವಾದಿಂದ ಚುನಾವಣೆ ಸಂದರ್ಭದಲ್ಲಿ ಲಕ್ಷಾಂತರ ಮೌಲ್ಯದ ಮದ್ಯಗಳು ಕಾರವಾರಕ್ಕೆ ಕಳ್ಳ ದಾರಿಯಿಂದ ಸರಬರಾಜಾಗುತ್ತದೆ. ಆದರೆ ಅಬಕಾರಿ ಇಲಾಖೆಯು ಗಡಿಯಲ್ಲಿ 24 ಗಂಟೆಗಳ ಹದ್ದಿನ ಕಣ್ಣನ್ನು ಇಟ್ಟಿದ್ದು ಸಿ.ಸಿ ಕ್ಯಾಮರಾ ಸಹ ಅಳವಡಿಸಲಾಗಿದೆ. ಹೀಗಾಗಿ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ಈವರೆಗೆ ಬರೋಬ್ಬರಿ 630 ದಾಳಿ ನಡೆಸಿರುವ ಅಬಕಾರಿ ಇಲಾಖೆ 212 ಪ್ರಕರಣಗಳನ್ನು ದಾಖಲಿಸಿದೆ. 134 ಜನ ಆರೋಪಿಗಳನ್ನು ಬಂಧಿಸಿ ಇದರಲ್ಲಿ 80 ಗಂಭೀರ ಪ್ರಕರಣದಲ್ಲಿ 26 ಜನರನ್ನು ಜೈಲಿಗೆ ಕಳುಹಿಸಿದ್ದು, 134 ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.

KWR

ಒಟ್ಟಾರೆ 4,140 ಸಾವಿರ ಲೀಟರ್ ಕರ್ನಾಟಕ ಮದ್ಯ, 1,443.78 ಲೀಟರ್ ಗೋವಾ ಮದ್ಯ, 19,254.78 ಲೀಟರ್ ಬಿಯರ್, 65 ಲೀಟರ್ ಗೋವಾ ಬಿಯರ್, 1,640 ಲೀಟರ್ ಬೆಲ್ಲದ ಹಾಗೂ ಗೇರು ಹಣ್ಣಿನ ಮದ್ಯ (ಸ್ಪಿರಿಟ್), 180 ಲೀಟರ್ ಕಳ್ಳಬಟ್ಟಿ ಹಾಗೂ ಮದ್ಯ ಸಾಗಾಟಕ್ಕೆ ಬಳಸಿದ್ದ 15 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಇವುಗಳಲ್ಲಿ 53,97,743 ಲಕ್ಷ ರೂ. ಮದ್ಯದ ಬೆಲೆಯಾದರೆ 43,60,000 ರೂ. ವಾಹನದ ಬೆಲೆಯಾಗಿದೆ.

ಇದಲ್ಲದೇ ಈ ಬಾರಿ ಅಬಕಾರಿ ಇಲಾಖೆಯ ಹದ್ದಿನ ಕಣ್ಣಿನಿಂದಾಗಿ ಮಾರಾಟಗಾರರು ಕೂಡ ಅಕ್ರಮವಾಗಿ ಜಿಲ್ಲೆಯ ಬೇರೆಡೆ ಮಾರಾಟ ಮಾಡುವುದನ್ನು ನಿಲ್ಲಿಸಿದ್ದಾರೆ. ಇದಲ್ಲದೇ ಚುನಾವಣೆಗಾಗಿ ಅಧಿಕ ದಾಸ್ತಾನು ಸಹ ಮಾಡಲು ಇಲಾಖೆ ಅವಕಾಶವನ್ನು ಕೊಟ್ಟಿಲ್ಲ. ಈ ಕಾರಣದಿಂದ ಕಳೆದ ವಿಧಾನಸಭೆಯ ಸಂದರ್ಭಕ್ಕೆ ಹೋಲಿಸಿದಲ್ಲಿ 28,199 ಮದ್ಯದ ಕೇಸ್‍ಗಳ (ಮದ್ಯದ ಬಾಕ್ಸ್) ಮಾರಾಟ ಇಳಿಮುಖವಾಗಿದೆ. ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಅಕ್ರಮ ಮದ್ಯ ಸಂಬಂಧ ದಾಖಲಾದ ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿದ್ದು ಇಲಾಖೆಯ ಕಟ್ಟು ನಿಟ್ಟಿನ ಕ್ರಮದಿಂದ ಇಳಿಕೆಯಾಗಿದೆ ಎಂದು ಅಬಕಾರಿ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ. ಜಿಲ್ಲೆಯಾದ್ಯಂತ ಗೋವಾ ಮದ್ಯದ ಸಾಗಾಟ ದೊಡ್ಡ ಪ್ರಮಾಣದಲ್ಲಿ ಇಳಿಮುಖವಾಗಿದ್ದು ಈ ಬಾರಿಯ ಅಬಕಾರಿ ಇಲಾಖೆಯ ಈ ಕಾರ್ಯಕ್ಕೆ ಜನ ಸಾಮಾನ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

WhatsApp Image 2019 04 01 at 7 copy

TAGGED:excise departmentkarwarliquor salesLok Sabha Election 2019policePublic TVಅಬಕಾರಿ ಇಲಾಖೆಕಾರವಾರಪಬ್ಲಿಕ್ ಟಿವಿಪೊಲೀಸ್ಮದ್ಯ ಮಾರಾಟಲೋಕಸಭಾ ಚುನಾವಣೆ 2019
Share This Article
Facebook Whatsapp Whatsapp Telegram

Cinema news

yash
ನಟ ಯಶ್ ಬರ್ತಡೇಗೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ FIR
Bengaluru City Cinema Districts Karnataka Latest Main Post Sandalwood
YASH 5
ಮುಂಬೈ ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ರಾಕಿಭಾಯ್
Cinema Sandalwood
TVK Vijay
ಕರೂರು ಕಾಲ್ತುಳಿತ ಪ್ರಕರಣ – 7 ಗಂಟೆಗೂ ಹೆಚ್ಚು ಕಾಲ ನಟ ವಿಜಯ್‌ಗೆ CBI ಗ್ರಿಲ್
Bengaluru City Cinema Latest Sandalwood Top Stories
Toxic
ಯಶ್ ʻಟಾಕ್ಸಿಕ್ʼ ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು!
Bengaluru City Cinema Districts Karnataka Latest Sandalwood Top Stories

You Might Also Like

sabarimala kerala karnataka
Chikkamagaluru

ಕೇರಳಿಗರ ಕ್ಯಾತೆ; ಕರ್ನಾಟಕದ ಮಾಲಾಧಾರಿಗಳ ವಾಹನಗಳನ್ನು 100 ಕಿಮೀ ದೂರದಲ್ಲೇ ತಡೆದ ಕೇರಳ ಸರ್ಕಾರ

Public TV
By Public TV
10 minutes ago
armed robbery gang in chikkamagaluru
Chikkamagaluru

ಚಿಕ್ಕಮಗಳೂರಲ್ಲಿ ರಾತ್ರಿ ವೇಳೆ ಮಚ್ಚು, ರಾಡ್ ಹಿಡಿದು ಓಡಾಡ್ತಿದೆ ರಾಬರಿ ಗ್ಯಾಂಗ್‌!

Public TV
By Public TV
11 minutes ago
iran protests
Latest

ಇರಾನ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ; 2,000 ಮಂದಿ ಸಾವು

Public TV
By Public TV
18 minutes ago
Raichuru Social Welfare Dept
Districts

ವಸತಿ ನಿಲಯಗಳ ಆಹಾರ ಪದಾರ್ಥದ 2 ಕೋಟಿ ಬಿಲ್ ಬಾಕಿ – ರಾಯಚೂರು ಸಮಾಜ ಕಲ್ಯಾಣ ಇಲಾಖೆಯ ವಸ್ತುಗಳು ಜಪ್ತಿ

Public TV
By Public TV
24 minutes ago
supreme Court 1
Court

ಬೀದಿನಾಯಿಗಳ ಸಮಸ್ಯೆ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲ – ಸುಪ್ರೀಂ ಅಸಮಾಧಾನ

Public TV
By Public TV
38 minutes ago
Congress BJP
Bengaluru City

ಜ.20, 21ರಂದು ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ: ಬಿಜೆಪಿ-ಕಾಂಗ್ರೆಸ್ ನಡುವೆ ರಣರಂಗ?

Public TV
By Public TV
40 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?