Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಾಹಿತಿ, ಹೋರಾಟಗಾರ, ಪತ್ರಕರ್ತ, ರಾಜಕೀಯ ನಾಯಕ: ಇಲ್ಲಿದೆ ಕರುಣಾನಿಧಿ ಹೆಜ್ಜೆಗುರುತು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಸಾಹಿತಿ, ಹೋರಾಟಗಾರ, ಪತ್ರಕರ್ತ, ರಾಜಕೀಯ ನಾಯಕ: ಇಲ್ಲಿದೆ ಕರುಣಾನಿಧಿ ಹೆಜ್ಜೆಗುರುತು

Latest

ಸಾಹಿತಿ, ಹೋರಾಟಗಾರ, ಪತ್ರಕರ್ತ, ರಾಜಕೀಯ ನಾಯಕ: ಇಲ್ಲಿದೆ ಕರುಣಾನಿಧಿ ಹೆಜ್ಜೆಗುರುತು

Public TV
Last updated: August 7, 2018 9:18 pm
Public TV
Share
3 Min Read
Karunanidhi 1
SHARE

ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಮುತ್ತುವೇಲು ಕರುಣಾನಿಧಿ ನಿಧನರಾಗಿದ್ದಾರೆ. ಇವತ್ತು ಸಂಜೆ 6 ಗಂಟೆ 10 ನಿಮಿಷಕ್ಕೆ ನಿಧನದ ಸುದ್ದಿಯನ್ನ ಕಾವೇರಿ ಆಸ್ಪತ್ರೆ ವೈದ್ಯರು ಪ್ರಕಟಿಸಿದರು.

ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಜುಲೈ 27ಕ್ಕೆ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ತುರ್ತು ನಿಗಾ ಘಟಕದಲ್ಲಿ 11 ದಿನಗಳಿಂದ ಚಿಕಿತ್ಸೆ ನಿಂತರವಾಗಿದ್ದ ಅವರನ್ನು ವಿಶೇಷ ವೈದ್ಯರ ತಂಡ ಸೂಕ್ಷ್ಮವಾಗಿ ನಿಗಾವಹಿಸಿತ್ತು. ಆರಂಭದ ಮೂರ್ನಾಲ್ಕು ದಿನಗಳಲ್ಲಿ ಚಿಕಿತ್ಸೆಗೆ ಅಚ್ಚರಿಯ ರೀತಿ ಸ್ಪಂದಿಸುತ್ತಿದ್ದ ತಲೈವಾ ಆರೋಗ್ಯ ಕಳೆದರಡು ದಿನಗಳಿಂದ ತೀವ್ರ ಚಿಂತಾಜನಕವಾಗಿತ್ತು.

ಕರುಣಾನಿಧಿ ಅವರ ಲಿವರ್, ಕಿಡ್ನಿ ಕಾರ್ಯ ಸ್ಥಗಿತವಾಗುತ್ತಾ ಹೋಯಿತು. ರಕ್ತದೊತ್ತಡವೂ ಗಣನೀಯ ಇಳಿಕೆಯಾಗಿತ್ತು. ಅಯ್ಯ ಅವರನ್ನ ಉಳಿಸಿಕೊಳ್ಳಲು ನಿನ್ನೆ ಸಂಜೆಯಿಂದಲೂ ನಾವು ಶತಪ್ರಯತ್ನ ಮಾಡಿದೆವು. ಆದರೆ, ಉಳಿಸಿಕೊಳ್ಳಲು ಆಗಲಿಲ್ಲ ಅಂತ ಕಾವೇರಿ ಆಸ್ಪತ್ರೆ ವೈದ್ಯರು ಪ್ರಕಟಿಸಿದರು. ಇದನ್ನು ಇದಿ: ಡಿಎಂಕೆ Vs ಎಐಎಡಿಎಂಕೆ: ಕರುಣಾ ಮೇಲೆ ಜಯಾ ಮುನಿಸಾಗಿದ್ದು ಯಾಕೆ? ಏನದು ಆ ಒಂದು ತಪ್ಪು?

karunanidhi

ಸೋಮವಾರ ಸಂಜೆಯಿಂದಲೂ ಆಸ್ಪತ್ರೆ ಮುಂದೆ ಜನಸಾಗರ ಸೇರಲಾರಂಭಿಸಿತ್ತು. ಪುತ್ರ ಸ್ಟಾಲಿನ್ ಅವರು ಸಿಎಂ ಪಳನಿಸ್ವಾಮಿ ಅವರ ಜೊತೆ ಸರಣಿ ಸಭೆ ನಡೆಸಿದ್ದರು. ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಪಳನಿಸ್ವಾಮಿ ತುರ್ತು ಸಭೆ ನಡೆಸಿ ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲು ಸೂಚಿಸಿದ್ದರು. ಇದರ ಮಧ್ಯೆ, ಕುಟುಂಬ ವರ್ಗದವರು, ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಹೊರಗೆ ಬಂದವರ ಮೊಗದಲ್ಲಿ ದುಃಖ ಮಡುಗಟ್ಟಿತ್ತು. ಇಷ್ಟೊತ್ತಿಗೆ ಸಾಗರೋಪಾದಿಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಮತ್ತೆ ಜಮಾಯಿಸಿದರು. ಮಹಿಳೆಯರಂತು ಕಣ್ಣೀರು ಸುರಿಸುತ್ತ ದೇವರಲ್ಲಿ ಪ್ರಾರ್ಥಸಿದರು. ಆದರೆ, ಅವರ ಪ್ರಾರ್ಥನೆ ಫಲಿಸಲಿಲ್ಲ.

ಬುಧವಾರ ಅಂತ್ಯಕ್ರಿಯೆ ನಡೆಯಲಿದ್ದು, ತಮಿಳುನಾಡಿನಲ್ಲಿ ಶೋಕದ ಕಾರ್ಮೋಡ ಆವರಿಸಿದೆ. ಶೋಕಾಚರಣೆ ಆಚರಿಸಲಾಗುತ್ತಿದೆ. ಇನ್ನು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ. ಇದನ್ನು ಓದಿ: ಕರುಣಾನಿಧಿ ಯಾವಾಗಲೂ ಕಪ್ಪು ಕನ್ನಡಕವನ್ನೇ ಧರಿಸುತ್ತಿದ್ದರು ಯಾಕೆ?

karunanidhi

ಕರುಣಾನಿಧಿ ಹೆಜ್ಜೆ ಗುರುತು:
* 1924 ಜೂನ್ 3ರಂದು ತಿರುವರೂರ್ ಜಿಲ್ಲೆಯ ತಿರುಕ್ಕುವಲೈನಲ್ಲಿ ಕರುಣಾನಿಧಿ ಜನನ
* ಕರುಣಾನಿಧಿ ಮೂಲ ಹೆಸರು ದಕ್ಷಿಣ ಮೂರ್ತಿ
* 14ನೇ ವಯಸ್ಸಿನಲ್ಲಿ ಅಳಗಿರಿಸ್ವಾಮಿ ಭಾಷಣದಿಂದ ಪ್ರಭಾವಿತರಾಗಿ ರಾಜಕೀಯ ರಂಗಕ್ಕೆ ಪ್ರವೇಶ
* 1932ರಲ್ಲಿ ಹಿಂದಿ ವಿರೋಧಿ ಚಳವಳಿಯಲ್ಲಿ ಭಾಗಿ
* ದ್ರಾವಿಡ ಚಳವಳಿಯ ಮೊದಲ ವಿದ್ಯಾರ್ಥಿ ಸಂಘಟನೆ ನಾಯಕ
* 1957ರಲ್ಲಿ ತಿರುಚಿರಾಪಲ್ಲಿ ಕುಳಿತಲೈ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ
* 1962ರಲ್ಲಿ ವಿಧಾನಸಭೆ ವಿರೋಧಪಕ್ಷದ ಉಪನಾಯಕ
* 1967ರಲ್ಲಿ ಲೋಕೋಪಯೋಗಿ ಸಚಿವ
* 1969ರಲ್ಲಿ ಅಣ್ಣಾದೊರೈ ನಿಧನರಾದ ಬಳಿಕ ಸಿಎಂ
* 1971, 1989, 1996, 2006ರಲ್ಲಿ ಮುಖ್ಯಮಂತ್ರಿ

ಸಾಹಿತಿಯಾಗಿ ಕರುಣಾನಿಧಿ:
ಕರುಣಾನಿಧಿ ಅವರು ತಮಿಳು ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕವನ, ಕಾದಂಬರಿ, ಜೀವನಚರಿತ್ರೆ, ಸಂಭಾಷಣೆ ಸೇರಿದಂತೆ ಗೀತಾರಚನಾಕಾರರಾಗಿ ಗುರುತಿಸಿಕೊಂಡಿದ್ದಾರೆ. 100ಕ್ಕೂ ಹೆಚ್ಚು ಕವನ, ಗದ್ಯ ಬರೆದಿರುವ ಅವರು, 20ನೇ ವಯಸ್ಸಿನಲ್ಲಿ ಜ್ಯುಪಿಟರ್ ಪಿಕ್ಚರ್ಸ್ ನಲ್ಲಿ ಕಥಾ ಲೇಖಕರು. ಅವರು ಅಭಿನಯಿಸಿದ ಮೊದಲ ಸಿನಿಮಾ ‘ರಾಜಕುಮಾರಿ’ ಮೂಲಕವೇ ಜನಪ್ರಿಯತೆ ಗಿಟ್ಟಿಸಿಕೊಂಡರು. ಅಷ್ಟೇ ಅಲ್ಲದೆ 70 ಕ್ಕಿಂತಲೂ ಹೆಚ್ಚು ಸಿನಿಮಾಗಳಿಗೆ ಚಿತ್ರಕಥೆ ಬರೆದಿದ ಕೀರ್ತಿ ಕರುಣಾನಿಧಿಗೆ ಸೇರುತ್ತದೆ.

RAHUL MEET KARUNANIDHI

ಪತ್ರಕರ್ತರಾಗಿ ಕರುಣಾನಿಧಿ:
ಕರುಣಾನಿಧಿ ತಮ್ಮನ್ನು ಅನೇಕ ಕ್ಷೇತ್ರದಲ್ಲಿ ತೊಡಿಸಿಕೊಂಡಿದ್ದರು. ಪತ್ರಕರ್ತರು, ವ್ಯಂಗ್ಯಚಿತ್ರಕಾರರಾಗಿ ಪತ್ರಿಕೋದ್ಯಮಕ್ಕೆ ಕೊಡುಗೆ ನೀಡಿದ್ದಾರೆ. 1942ರಲ್ಲಿ ಮುರಸೊಳಿ ಮಾಸಪತ್ರಿಕೆ ಆರಂಭಸಿದ ಅವರು, ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ, ಪ್ರಕಾಶಕರಾಗಿ ಬೆಳೆಸಿದರು. ನಂತರದಲ್ಲಿ ಅದನ್ನು ದಿನಪತ್ರಿಕೆಯಾಗಿ ಪರಿವರ್ತಿಸಿದರು. ಕೇವಲ ಮುರಸೂಳಿ ಅಲ್ಲದೆ “ಕುಡಿಯರಸು” ಪತ್ರಿಕೆಯ ಸಂಪಾದಕರಾಗಿ ಸೇವೆಸಲ್ಲಿಸಿ ‘ಮುತಾರಮ್’ ಪತ್ರಿಕೆಗೆ ಹೊಸಜೀವ ತುಂಬಿದರು.

ಕರುಣಾನಿಧಿ ಮತ್ತು ವಿವಾದ:
ಡಿಎಂಕೆ ಪಕ್ಷವನ್ನು ತಮ್ಮ ಹಿಡಿತಕ್ಕೆ ತಗೆದುಕೊಂಡು ನೆಹರು ಮಾದರಿಯಲ್ಲಿಯೇ ವಂಶಪಾರಂಪರ್ಯ ರಾಜಕೀಯಕ್ಕೆ ಮುಂದಾಗಿದ್ದು ಭಾರೀ ವಿವಾದಕ್ಕೆ ಕಾರಣವಾಯಿತು. ಕರುಣಾನಿಧಿ ಪುತ್ರರಾದ ಆಳಗಿರಿ, ಸ್ಟಾಲಿನ್, ಕನಿಮೋಳಿ, ಮುತ್ತು ರಾಜಕೀಯ ಪ್ರವೇಶ ಮಾಡಿದ್ದಾರೆ. ಇತ್ತ ಸಂಬಂಧಿ ಹಾಗೂ ಪಕ್ಷದ ಮುಖಂಡ ಮುರಸೊಳಿ ಮಾರನ್ ಪುತ್ರ ಕಲಾನಿಧಿ ಮಾರನ್‍ಗೆ ಪ್ರಕರಣವೊಂದರಲ್ಲಿ ನೆರವು ನೀಡಿದ್ದರು. ಹೀಗಾಗಿ ಕರುಣಾನಿಧಿ ವಿರುದ್ಧ ಸ್ವಜನಪಕ್ಷಪಾತ ಆರೋಪ ಕೇಳಿ ಬಂದಿತ್ತು.

MODI KARUNA NIDHI 1

ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಪೋಷಣೆ ನೀಡಿದ್ದರು ಎನ್ನುವ ವಿವಾದ ಅವರ ಸುತ್ತ ಸುತ್ತಿತ್ತು. ಶ್ರೀರಾಮನ ಬಗ್ಗೆಯೂ ಕರುಣಾನಿಧಿ ಲಘು ಹೇಳಿಕೆ ನೀಡಿದ್ದರು. ಇತ್ತ ಮಗಳು ಎಂ.ಕೆ.ಕನಿಮೋಳಿ 2 ಜಿ ಸ್ಪೆಕ್ಟ್ರಂ ಹಗರಣದಲ್ಲಿ ಬಂಧಿತರಾಗಿದ್ದರು.

TAGGED:2 ಜಿ ಸ್ಪೆಕ್ಟ್ರಂ ಹಗರಣ2G spectrum scamcinemaKarunanidhiliteratureMK KanimolipoliticsPublic TVtamil naduಎಂ.ಕೆ.ಕನ್ನಿಮೋಳಿಕರುಣಾನಿಧಿತಮಿಳುನಾಡುಪಬ್ಲಿಕ್ ಟಿವಿರಾಜಕೀಯಸಾಹಿತ್ಯಸಿನಿಮಾ
Share This Article
Facebook Whatsapp Whatsapp Telegram

Cinema news

rashmika mandanna
ಕೊಡಗಿನಲ್ಲಿ ಆದಾಯ ತೆರಿಗೆ ಪಾವತಿ – ರಶ್ಮಿಕಾ ಮಂದಣ್ಣ ನಂಬರ್‌ 1
Cinema Kodagu Latest Sandalwood Top Stories
Yashs ‘Toxic Unveils First Look of Rukmini Vasanth as Mellisa
ಟಾಕ್ಸಿಕ್‌ನಲ್ಲಿ ರುಕ್ಮಿಣಿ ವಸಂತ್ ಗ್ಲ್ಯಾಮರ್‌ ಲುಕ್ ಅನಾವರಣ
Cinema Latest Top Stories
Maalu Spandana
ಹೆದರಬೇಡ ಅಪ್ಪಿ ಅಂತಿದ್ರು, ಆದ್ರೆ ಮಾಳು ಸ್ಟೇಟ್ಮೆಂಟ್‌ ಕೇಳಿ ಅಚ್ಚರಿ ಆಯ್ತು – ಸ್ಪಂದನಾ
Cinema Latest Top Stories TV Shows
Yash 2
ರಾಕಿಂಗ್ ಸ್ಟಾರ್‌ ಯಶ್ 40ನೇ ವರ್ಷದ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್!
Cinema Latest Sandalwood Top Stories

You Might Also Like

Basavaraj rayreddy Siddaramaiah
Bengaluru City

5 ವರ್ಷವೂ ಸಿದ್ದರಾಮಯ್ಯನವರೇ ಸಿಎಂ, ಬಜೆಟ್ ಮಂಡನೆ ಮಾಡುತ್ತಾರೆ: ಬಸವರಾಜ ರಾಯರೆಡ್ಡಿ

Public TV
By Public TV
14 minutes ago
jnu students raise controversial slogans against pm modi shah
Latest

ಮೋದಿ, ಶಾ ಸಮಾಧಿ ಅಗೆಯುತ್ತೇವೆ – ಜೆಎನ್‌ಯುವಿನಲ್ಲಿ ವಿವಾದಾತ್ಮಕ ಘೋಷಣೆ

Public TV
By Public TV
1 hour ago
Madanayakanhalli police Station
Bengaluru Rural

ಪ್ರೀತಿ ವಿಚಾರದಲ್ಲಿ ಯುವಕನ ಕಿರಿಕ್‌ ಆರೋಪ – ಬಾಲಕಿ ನೇಣಿಗೆ ಶರಣು

Public TV
By Public TV
1 hour ago
Supreme Court
Court

ಧರ್ಮಸ್ಥಳದಲ್ಲಿ ಮಹಿಳೆಯರ ನಾಪತ್ತೆ, ಅನಾಥ ಶವಗಳ ಪತ್ತೆ ಕೇಸ್‌ – ಹೊಸ ತನಿಖೆ ಕೋರಿ ಕುಸುಮಾವತಿ ಅರ್ಜಿ

Public TV
By Public TV
2 hours ago
SONIA GANDHI
Latest

ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

Public TV
By Public TV
3 hours ago
Kogilu Layout Demolition 20 officials of Rajiv Gandhi Housing Scheme visited site
Bengaluru City

Kogilu Demolition| 37 ಕುಟುಂಬ ಹೊರತುಪಡಿಸಿ ಉಳಿದವರೆಲ್ಲ ಹೊರಗಿನವರು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?