ಬೆಂಗಳೂರು: ಜೂನ್ 12 ರ ಕರ್ನಾಟಕ ಬಂದ್ಗೆ ನಮ್ಮ ಬೆಂಬಲವಿಲ್ಲ. ಇದಕ್ಕೆ ನಮ್ಮ ವಿರೋಧವಿದೆ ಎಂದು ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷ ಲಿಂಗೇಗೌಡ ಹೇಳಿದ್ದಾರೆ.
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವರ್ಷಕ್ಕೆ 8-10 ಬಾರಿ ಕರ್ನಾಟಕ ಬಂದ್ಗೆ ಕರೆ ಮಾಡುವುದರಿಂದ ಜನಸಾಮಾನ್ಯರಿಗೆ ಆಗುವ ನಷ್ಟಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ ಅವರು, ‘ಬಂದ್ ಬಂದ್ ಬಂದ್’ ಅಂತಾ ಮೂರು ಸಾರಿ ಹೇಳಿದ್ರೆ ಎಲ್ಲರೂ ಜೊತೆಗಿದ್ದಾರೆ ಅಂದುಕೊಂಡರೆ ಆಗಲ್ಲ, ಕೇವಲ ನಾಲ್ಕು ಜನರಿಗೆ ಬಂದ್ ಕರೆ ಕೊಟ್ಟರೆ ಸಾಲದೆಂದು ಆಕ್ರೋಶ ವ್ಯಕ್ತಪಡಿಸಿದರು.
ಜೂನ್ 11 ರಂದು ಬಯಲು ಸೀಮೆ ಶಾಶ್ವತ ನೀರಾವರಿ ಯೋಜನೆಗೆ ಬೆಂಬಲ ಸೂಚಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಟೌನ್ ಹಾಲ್ ಬಳಿ ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಹೇಳಿದರು.
ಬಂದ್ ಮಾಡ್ತೀವಿ: ಏನೇ ಆಗಲಿ ಜೂನ್ 12ರಂದು ಕರ್ನಾಟಕ ಬಂದ್ ಮಾಡೇ ಮಾಡ್ತೀವಿ. ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ. ಅನೇಕ ಬೇಡಿಕೆಗಳನ್ನ ಈಡೇರಿಸಲು ಬಂದ್ ಅತ್ಯಗತ್ಯ ಅಂತಾ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಇದನ್ನೂ ಓದಿ: ಜೂನ್ 12 ರಂದು ಈ ಎಲ್ಲ ಕಾರಣಕ್ಕಾಗಿ ಬಂದ್ ಅಗತ್ಯ: ವಾಟಾಳ್ ನಾಗರಾಜ್