ಬೆಂಗಳೂರು: ಸಿದ್ದರಾಮಯ್ಯ ಮಾತನಾಡಿಸಲು ಬಂದಿದ್ದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಳಪಾಡ್ಗೆ ಮುಜುಗರವಾಗಿದೆ.
ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಲು ಸಮಯ ನಿಗದಿ ಮಾಡಲು ನಳಪಡ್ ಸಿದ್ದರಾಮಯ್ಯ ನಿವಾಸಕ್ಕೆ ಇಂದು ಬೆಳಗ್ಗೆ ಆಗಮಿಸಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷ ಬಂದಿದ್ದರೂ ಸಿದ್ದರಾಮಯ್ಯ ತಿರುಗಿಯೂ ನೋಡದೇ ಕಾರು ಹತ್ತಿದ್ದಾರೆ.
ಮೈಸೂರಿಗೆ ಹೋಗಲು ಸಿದ್ದರಾಮಯ್ಯ ಕಾರು ಹತ್ತಿದಾಗಲೂ ಅಲ್ಲಿಗೆ ಬಂದ ನಳಪಾಡ್ ಮಾತನಾಡಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಆಪ್ತ ಸಹಾಯಕರು ನಳಪಡ್ ಬಂದಿದ್ದಾರೆ ಅಂದರೂ ಸಿದ್ದರಾಮಯ್ಯ ಡೋಂಟ್ ಕೇರ್ ಅಂದಿದ್ದಾರೆ. ನಳಪಡ್ ಮಾತನಾಡಿಸಲು ಪ್ರಯತ್ನಿಸಿದರೂ ಸಿದ್ದರಾಮಯ್ಯ ಮಾತನಾಡದೇ ಬೇರೊಬ್ಬ ರೈತನನ್ನು ಮಾತನಾಡಿಸಿದ್ದಾರೆ. ಇದನ್ನೂ ಓದಿ: ಡೋಲೋ 650 ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ
ಕಾರಿನ ಈ ಪ್ರಸಂಗ ನಡೆಯುವ ಮೊದಲು ತನ್ನ ನಿವಾಸದಲ್ಲಿ ರೈತರನ್ನು ಸಿದ್ದರಾಮಯ್ಯ ಮಾತನಾಡಿಸುತ್ತಿದ್ದರು. ಅಲ್ಲೂ ನಳಪಡ್ಗೆ ಮಾತನಾಡಲು ಸಿದ್ದರಾಮಯ್ಯ ಅವಕಾಶ ನೀಡಿರಲಿಲ್ಲ. ಹೊರಗಡೆ ಮಾತನಾಡಲು ಅವಕಾಶ ನೀಡದ್ದಕ್ಕೆ ಸಿದ್ದರಾಮಯ್ಯ ಬರುವ ಮೊದಲೇ ನಳಪಾಡ್ ನಿವಾಸದ ಒಳಗಡೆ ಹೋಗಿದ್ದರು.
ಒಟ್ಟಿನಲ್ಲಿ ಮನೆ ಒಳಗೂ ನಳಪಾಡ್ ಅವರನ್ನು ಮಾತನಾಡಿಸಿಲ್ಲ. ಮನೆಯಿಂದ ಹೊರಗೂ ಮಾತನಾಡಿಸಿಲ್ಲ. ಕೊನೆ ಗಳಿಗೆಯಲ್ಲಿ ಕಾರಿನಲ್ಲಿ ಕುಳಿತಿದ್ದರೂ ತಿರುಗಿ ಸಹಾ ನೋಡದ ಸಿದ್ದರಾಮಯ್ಯ ಮೈಸೂರಿಗೆ ತೆರಳಿದ್ದಾರೆ.
Live Tv
[brid partner=56869869 player=32851 video=960834 autoplay=true]