ಮಳೆಗಾಲ ಅಂತ್ಯವಾಗುತ್ತಾ ಬರುತ್ತಿದ್ದಂತೆ, ಬೆಂಗಳೂರು ಸಹಿತ ಜಿಲ್ಲೆಯ ಹಲವೆಡೆ ಮುಂಜಾನೆ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆ ಕೊಂಚ ಬಿಸಿಲಿನೊಂದಿಗೆ ತಾಪಮಾನ ಏರಿಕೆಯಾಗಲಿದೆ. ಮತ್ತೆ ಸಂಜೆ ಆಗುತ್ತಿದ್ದಂತೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು, ಮಂಗಳೂರು, ಉಡುಪಿ, ಬಾಗಲಕೋಟೆ, ಶಿವಮೊಗ್ಗ, ಕೋಲಾರ ಸೇರಿದಂತೆ ಕೆಲ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಬೆಳಗ್ಗೆ ಮತ್ತು ಸಂಜೆ ತಂಪಾದ ವಾತಾವರಣ ಇರಲಿದೆ.
ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿ ಜಿಲ್ಲೆಯಲ್ಲಿ 24-17 ಡಿಗ್ರಿ ಉಷ್ಣಾಂಶ ದಾಖಲಾಗಿರುವುದು ರಾಜ್ಯದಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶವಾಗಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 27-20
ಮಂಗಳೂರು: 29-24
ಶಿವಮೊಗ್ಗ: 31-21
ಬೆಳಗಾವಿ: 28-20
ಮೈಸೂರು: 29-21
ಮಂಡ್ಯ: 29-21
ಮಡಿಕೇರಿ: 24-17
ರಾಮನಗರ: 28-21
ಹಾಸನ: 28-19
ಚಾಮರಾಜನಗರ: 29-21
ಚಿಕ್ಕಬಳ್ಳಾಪುರ: 27-19
ಕೋಲಾರ: 27-20
ತುಮಕೂರು: 27-20
ಉಡುಪಿ: 30-24
ಕಾರವಾರ: 29-24
ಚಿಕ್ಕಮಗಳೂರು: 26-18
ದಾವಣಗೆರೆ: 28-21
ಚಿತ್ರದುರ್ಗ: 28-21
ಹಾವೇರಿ: 30-22
ಬಳ್ಳಾರಿ: 31-22
ಗದಗ: 29-22
ಕೊಪ್ಪಳ: 29-22
ರಾಯಚೂರು: 30-23
ಯಾದಗಿರಿ: 30-23
ವಿಜಯಪುರ: 29-22
ಬೀದರ್: 28-21
ಕಲಬುರಗಿ: 29-22
ಬಾಗಲಕೋಟೆ: 30-22